Sign In

By signing in or creating an account, you agree with Associated Broadcasting Company's Terms & Conditions and Privacy Policy.

LTC rules: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; ಎಲ್​ಟಿಸಿಯ ಬಿಗಿನಿಯಮ ಸಡಿಲಗೊಳಿಸಿದ ಸರ್ಕಾರ

central government employees' LTC re-imbursement: ಕೇಂದ್ರ ಸರ್ಕಾರ ರಜಾ ಕಾಲದ ಪ್ರಯಾಣ ರಿಯಾಯಿತಿ ಅಥವಾ ಪ್ರಯಾಣ ಭತ್ಯೆ (ಎಲ್​ಟಿಸಿ) ವಿಚಾರದಲ್ಲಿ ನಿಯಮ ಸಡಿಲಿಕೆ ಮಾಡಿದೆ. ಜಂಟಿ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಇಲಾಖಾ ಮುಖ್ಯಸ್ಥರ ಎಲ್​ಟಿಸಿ ಅರ್ಜಿಗಳನ್ನು ಅನುಮೋದನೆ ಮಾಡಬಹುದು. ಉದ್ಯೋಗಿಯು ಮುಂಗಡ ಪಡೆದುಕೊಂಡಿದ್ದರೆ, ಎಲ್​ಟಿಸಿ ರಿಇಂಬುರ್ಸ್ಮೆಂಟ್​ನ ಅನುಮೋದನೆ ಅವಧಿ ಮೂರು ತಿಂಗಳು ವಿಸ್ತರಣೆ ಆಗುತ್ತದೆ.

LTC rules: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; ಎಲ್​ಟಿಸಿಯ ಬಿಗಿನಿಯಮ ಸಡಿಲಗೊಳಿಸಿದ ಸರ್ಕಾರ
ಸರ್ಕಾರಿ ಉದ್ಯೋಗಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 02, 2024 | 12:30 PM

ನವದೆಹಲಿ, ಜನವರಿ 2: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖಷಿಯಾಗುವ ಸುದ್ದಿ ಇದು. ರಜಾ ಕಾಲದ ಪ್ರಯಾಣ ರಿಯಾಯಿತಿ ಅಥವಾ ಪ್ರಯಾಣ ಭತ್ಯೆ (LTC- Leave travel concession)) ವಿಚಾರದಲ್ಲಿ ನಿಯಮ ಸಡಿಲಿಕೆ ಮಾಡಲಾಗಿದೆ. ಡಿಸೆಂಬರ್ 21ರಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಸೂಚನೆಯೊಂದರ ಪ್ರಕಾರ ಎಲ್​ಟಿಸಿ ಹಣ ಪಡೆಯಲು ಸಲ್ಲಿಸುವ ಕ್ಲೈಮ್​ಗಳಿಗೆ ಇಲಾಖಾ ಮುಖ್ಯಸ್ಥರೇ ಅನುಮೋದನೆ ಮಾಡಬಹುದಾದ ಅವಕಾಶ ಕಲ್ಪಿಸಲಾಗಿದೆ.

ಜಂಟಿ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಇಲಾಖಾ ಮುಖ್ಯಸ್ಥರ ಅರು ತಿಂಗಳವರೆಗಿನ ಎಲ್​ಟಿಸಿ ಪ್ರಯಾಣ ಹಣಕ್ಕೆ ಕ್ಲೈಮ್ ಮಾಡಿ ಉದ್ಯೋಗಿಗಳು ಸಲ್ಲಿಸುವ ಅರ್ಜಿಗಳನ್ನು ಅನುಮೋದನೆ ಮಾಡಬಹುದು ಎಂದಿದೆ ಹೊಸ ಕಾನೂನು. ಹಳೆಯ ನಿಯಮದ ಪ್ರಕಾರ ಉದ್ಯೋಗಿಗಳ ಎಲ್​ಟಿಸಿ ಕ್ಲೈಮ್ ಅರ್ಜಿ ಡಿಒಪಿಟಿಯಿಂದ ಅನುಮೋದನೆ ಪಡೆಯಬೇಕಿತ್ತು.

ಒಂದು ವೇಳೆ, ಉದ್ಯೋಗಿಯು ಮುಂಗಡ ಪಡೆದುಕೊಂಡಿದ್ದರೆ, ಎಲ್​ಟಿಸಿ ರಿಇಂಬುರ್ಸ್ಮೆಂಟ್​ನ ಅನುಮೋದನೆ ಅವಧಿ ಮೂರು ತಿಂಗಳು ವಿಸ್ತರಣೆ ಆಗುತ್ತದೆ. ಜೊತೆಗೆ, ಆ ಮೂರು ತಿಂಗಳೊಳಗೆ ಉದ್ಯೋಗಿ ತಾನು ಪಡೆದುಕೊಂಡಿದ್ದ ಮುಂಗಡ ಹಣವನ್ನು ಬಡ್ಡಿಸಮೇತ ಹಿಂದಿರುಗಿಸಿರಬೆಕು.

ಇದನ್ನೂ ಓದಿ: Electoral Bonds: ಜನವರಿ 2ರಿಂದ 11ರವರೆಗೆ ಎಸ್​ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್?

ಏನಿದು ಎಲ್​ಟಿಸಿ ಹಣ?

ಎಲ್​ಟಿಸಿ ಎಂಬುದು ಉದ್ಯೋಗಿಗಳಿಗೆ ನೀಡಲಾಗುವ ಲೀವ್ ಟ್ರಾವಲ್ ಕನ್ಸಿಶನ್ ಸೌಲಭ್ಯ. ಉದ್ಯೋಗಿ ರಜೆ ಪಡೆದು ಒಬ್ಬರೆಯೋ ಅಥವಾ ಕುಟುಂಬ ಸಮೇತವೋ ಪ್ರವಾಸ ಹೋದರೆ, ಅವರ ಪ್ರಯಾಣ ವೆಚ್ಚವನ್ನು ಭರಿಸಿಕೊಡಲಾಗುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ಎಲ್​ಟಿಸಿ ಸೌಲಭ್ಯ ಇದೆ.

ರಜೆಯಿಂದ ಬಂದ ಬಳಿಕ ನಿರ್ದಿಷ್ಟ ಅವಧಿಯೊಳಗೆ ಎಲ್​ಟಿಸಿ ಹಣಕ್ಕೆ ಉದ್ಯೋಗಿ ಕ್ಲೈಮ್ ಮಾಡಬೇಕು ಎಂಬ ನಿಯಮ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ