AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

LTC rules: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; ಎಲ್​ಟಿಸಿಯ ಬಿಗಿನಿಯಮ ಸಡಿಲಗೊಳಿಸಿದ ಸರ್ಕಾರ

central government employees' LTC re-imbursement: ಕೇಂದ್ರ ಸರ್ಕಾರ ರಜಾ ಕಾಲದ ಪ್ರಯಾಣ ರಿಯಾಯಿತಿ ಅಥವಾ ಪ್ರಯಾಣ ಭತ್ಯೆ (ಎಲ್​ಟಿಸಿ) ವಿಚಾರದಲ್ಲಿ ನಿಯಮ ಸಡಿಲಿಕೆ ಮಾಡಿದೆ. ಜಂಟಿ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಇಲಾಖಾ ಮುಖ್ಯಸ್ಥರ ಎಲ್​ಟಿಸಿ ಅರ್ಜಿಗಳನ್ನು ಅನುಮೋದನೆ ಮಾಡಬಹುದು. ಉದ್ಯೋಗಿಯು ಮುಂಗಡ ಪಡೆದುಕೊಂಡಿದ್ದರೆ, ಎಲ್​ಟಿಸಿ ರಿಇಂಬುರ್ಸ್ಮೆಂಟ್​ನ ಅನುಮೋದನೆ ಅವಧಿ ಮೂರು ತಿಂಗಳು ವಿಸ್ತರಣೆ ಆಗುತ್ತದೆ.

LTC rules: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖುಷಿ ಸುದ್ದಿ; ಎಲ್​ಟಿಸಿಯ ಬಿಗಿನಿಯಮ ಸಡಿಲಗೊಳಿಸಿದ ಸರ್ಕಾರ
ಸರ್ಕಾರಿ ಉದ್ಯೋಗಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 02, 2024 | 12:30 PM

Share

ನವದೆಹಲಿ, ಜನವರಿ 2: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಖಷಿಯಾಗುವ ಸುದ್ದಿ ಇದು. ರಜಾ ಕಾಲದ ಪ್ರಯಾಣ ರಿಯಾಯಿತಿ ಅಥವಾ ಪ್ರಯಾಣ ಭತ್ಯೆ (LTC- Leave travel concession)) ವಿಚಾರದಲ್ಲಿ ನಿಯಮ ಸಡಿಲಿಕೆ ಮಾಡಲಾಗಿದೆ. ಡಿಸೆಂಬರ್ 21ರಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಸೂಚನೆಯೊಂದರ ಪ್ರಕಾರ ಎಲ್​ಟಿಸಿ ಹಣ ಪಡೆಯಲು ಸಲ್ಲಿಸುವ ಕ್ಲೈಮ್​ಗಳಿಗೆ ಇಲಾಖಾ ಮುಖ್ಯಸ್ಥರೇ ಅನುಮೋದನೆ ಮಾಡಬಹುದಾದ ಅವಕಾಶ ಕಲ್ಪಿಸಲಾಗಿದೆ.

ಜಂಟಿ ಕಾರ್ಯದರ್ಶಿ ದರ್ಜೆಗಿಂತ ಕಡಿಮೆ ಇಲ್ಲದ ಇಲಾಖಾ ಮುಖ್ಯಸ್ಥರ ಅರು ತಿಂಗಳವರೆಗಿನ ಎಲ್​ಟಿಸಿ ಪ್ರಯಾಣ ಹಣಕ್ಕೆ ಕ್ಲೈಮ್ ಮಾಡಿ ಉದ್ಯೋಗಿಗಳು ಸಲ್ಲಿಸುವ ಅರ್ಜಿಗಳನ್ನು ಅನುಮೋದನೆ ಮಾಡಬಹುದು ಎಂದಿದೆ ಹೊಸ ಕಾನೂನು. ಹಳೆಯ ನಿಯಮದ ಪ್ರಕಾರ ಉದ್ಯೋಗಿಗಳ ಎಲ್​ಟಿಸಿ ಕ್ಲೈಮ್ ಅರ್ಜಿ ಡಿಒಪಿಟಿಯಿಂದ ಅನುಮೋದನೆ ಪಡೆಯಬೇಕಿತ್ತು.

ಒಂದು ವೇಳೆ, ಉದ್ಯೋಗಿಯು ಮುಂಗಡ ಪಡೆದುಕೊಂಡಿದ್ದರೆ, ಎಲ್​ಟಿಸಿ ರಿಇಂಬುರ್ಸ್ಮೆಂಟ್​ನ ಅನುಮೋದನೆ ಅವಧಿ ಮೂರು ತಿಂಗಳು ವಿಸ್ತರಣೆ ಆಗುತ್ತದೆ. ಜೊತೆಗೆ, ಆ ಮೂರು ತಿಂಗಳೊಳಗೆ ಉದ್ಯೋಗಿ ತಾನು ಪಡೆದುಕೊಂಡಿದ್ದ ಮುಂಗಡ ಹಣವನ್ನು ಬಡ್ಡಿಸಮೇತ ಹಿಂದಿರುಗಿಸಿರಬೆಕು.

ಇದನ್ನೂ ಓದಿ: Electoral Bonds: ಜನವರಿ 2ರಿಂದ 11ರವರೆಗೆ ಎಸ್​ಬಿಐನ ಈ 29 ಕಚೇರಿಗಳಲ್ಲಿ ಸಿಗಲಿದೆ ಎಲೆಕ್ಟೋರಲ್ ಬಾಂಡ್; ಏನಿದು ಬಾಂಡ್?

ಏನಿದು ಎಲ್​ಟಿಸಿ ಹಣ?

ಎಲ್​ಟಿಸಿ ಎಂಬುದು ಉದ್ಯೋಗಿಗಳಿಗೆ ನೀಡಲಾಗುವ ಲೀವ್ ಟ್ರಾವಲ್ ಕನ್ಸಿಶನ್ ಸೌಲಭ್ಯ. ಉದ್ಯೋಗಿ ರಜೆ ಪಡೆದು ಒಬ್ಬರೆಯೋ ಅಥವಾ ಕುಟುಂಬ ಸಮೇತವೋ ಪ್ರವಾಸ ಹೋದರೆ, ಅವರ ಪ್ರಯಾಣ ವೆಚ್ಚವನ್ನು ಭರಿಸಿಕೊಡಲಾಗುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ಎಲ್​ಟಿಸಿ ಸೌಲಭ್ಯ ಇದೆ.

ರಜೆಯಿಂದ ಬಂದ ಬಳಿಕ ನಿರ್ದಿಷ್ಟ ಅವಧಿಯೊಳಗೆ ಎಲ್​ಟಿಸಿ ಹಣಕ್ಕೆ ಉದ್ಯೋಗಿ ಕ್ಲೈಮ್ ಮಾಡಬೇಕು ಎಂಬ ನಿಯಮ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು