AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್ ಹಣ ಎಲ್ಲಿ ಹೋಗುತ್ತೆ? ಇಟಿಎಫ್​ಗಳಲ್ಲಿ 2.5 ಲಕ್ಷಕೋಟಿ ರೂ ಹೂಡಿಕೆ: ಕೇಂದ್ರ ಸಚಿವರ ಮಾಹಿತಿ

EPFO Investments In ETFs: ಎಂಪ್ಲಾಯೀ ಪ್ರಾವಿಡೆಂಟ್ ಫಂಡ್​ಗಳಲ್ಲಿನ ಹಣದಲ್ಲಿ ಎರಡೂವರೆ ಲಕ್ಷಕೋಟಿ ರೂಗೂ ಹೆಚ್ಚು ಮೊತ್ತವನ್ನು ಇಟಿಎಫ್​ಗಳಲ್ಲಿ ಹೂಡಿಕೆ ಮಾಡಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ರಾಮೇಶ್ವರ್ ತೇಲಿ ಇಪಿಎಫ್ ಹೂಡಿಕೆ ಬಗ್ಗೆ ಡಿಸೆಂಬರ್ 11ರಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಇಪಿಎಫ್​ಒ ಸಂಸ್ಥೆ ತನ್ನಲ್ಲಿರುವ ಹಣವನ್ನು ಡೆಟ್ ಮಾರುಕಟ್ಟೆ ಮತ್ತು ಇಟಿಎಫ್​ಗಳಲ್ಲಿ ಕ್ರಮವಾಗಿ ಶೇ. 85 ಮತ್ತು ಶೇ. 15ರಷ್ಟು ಹೂಡಿಕೆ ಮಾಡುತ್ತದೆ.

ಇಪಿಎಫ್ ಹಣ ಎಲ್ಲಿ ಹೋಗುತ್ತೆ? ಇಟಿಎಫ್​ಗಳಲ್ಲಿ 2.5 ಲಕ್ಷಕೋಟಿ ರೂ ಹೂಡಿಕೆ: ಕೇಂದ್ರ ಸಚಿವರ ಮಾಹಿತಿ
ಇಪಿಎಫ್​ಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 12, 2023 | 11:18 AM

Share

ಮುಖ್ಯಾಂಶಗಳು

  • ಎಂಪ್ಲಾಯೀ ಪ್ರಾವಿಡೆಂಟ್ ಫಂಡ್​ಗಳಲ್ಲಿನ ಹಣದಲ್ಲಿ ಎರಡೂವರೆ ಲಕ್ಷಕೋಟಿ ರೂಗೂ ಹೆಚ್ಚು ಮೊತ್ತವನ್ನು ಇಟಿಎಫ್​ಗಳಲ್ಲಿ ಹೂಡಿಕೆ ಮಾಡಲಾಗಿದೆ.
  • ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ರಾಮೇಶ್ವರ್ ತೇಲಿ ಇಪಿಎಫ್ ಹೂಡಿಕೆ ಬಗ್ಗೆ ಡಿಸೆಂಬರ್ 11ರಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
  • ಇಪಿಎಫ್​ಒ ಸಂಸ್ಥೆ ತನ್ನಲ್ಲಿರುವ ಹಣವನ್ನು ಡೆಟ್ ಮಾರುಕಟ್ಟೆ ಮತ್ತು ಇಟಿಎಫ್​ಗಳಲ್ಲಿ ಕ್ರಮವಾಗಿ ಶೇ. 85 ಮತ್ತು ಶೇ. 15ರಷ್ಟು ಹೂಡಿಕೆ ಮಾಡುತ್ತದೆ.

ನವದೆಹಲಿ, ಡಿಸೆಂಬರ್ 12: ಇಪಿಎಫ್ ಖಾತೆಗಳಲ್ಲಿ ಜಮೆ ಆಗುವ ಹಣವನ್ನು ಇಪಿಎಫ್​ಒ ಎಲ್ಲಿ ಹೂಡಿಕೆ ಮಾಡುತ್ತದೆ? ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ರಾಮೇಶ್ವರ್ ತೇಲಿ (Rameshwar Teli) ಕಳೆದ ವರ್ಷ ನೀಡಿರುವ ಮಾಹಿತಿ ಪ್ರಕಾರ ಇಪಿಎಫ್​ನ ಶೇ. 85ರಷ್ಟು ಹಣವು ಡೆಟ್ ಮಾರುಕಟ್ಟೆಗಳಲ್ಲಿ ಹೂಡಿಕೆ ಆಗುತ್ತದೆ. ಶೇ. 15ರಷ್ಟು ಹಣವು ಇಟಿಎಫ್​ಗಳಲ್ಲಿ ಹೂಡಿಕೆ ಆಗುತ್ತದೆ. ನಿನ್ನೆ (ಡಿ. 11) ರಾಮೇಶ್ವರ್ ತೇಲಿ ಲೋಕಸಭೆಗೆ ನೀಡಿದ ಮಾಹಿತಿ ಪ್ರಕಾರ ಕಳೆದ ಏಳಕ್ಕೂ ಹೆಚ್ಚು ವರ್ಷಗಳಿಂದ ಇಟಿಎಫ್​ಗಳಲ್ಲಿ (ETF- Exchange Traded Fund) ಹೂಡಿಕೆ ಆಗಿರುವ ಪಿಎಫ್ ಹಣ ಎರಡೂವರೆ ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

ಈ ಹಣಕಾಸು ವರ್ಷದಲ್ಲಿ ಅಕ್ಟೋಬರ್​ವರೆಗೂ ಇಟಿಎಫ್​ಗಳಲ್ಲಿ ಇಪಿಎಫ್​ಒದಿಂದ ಆಗಿರುವ ಹೂಡಿಕೆಯ ಮೊತ್ತ 27,105 ಕೋಟಿ ರೂ. ಇನ್ನು, 2021-22ರಲ್ಲಿ 43,568 ಕೋಟಿ ರೂ ಮೊತ್ತದ ಇಪಿಎಫ್ ಹಣ ಹೂಡಿಕೆ ಅಗಿತ್ತು. ಮರುವರ್ಷ, ಅಂದರೆ 2022-23ರಲ್ಲಿ ಹೂಡಿಕೆಯು 53,081 ರುಪಾಯಿಗೆ ಹೆಚ್ಚಿತ್ತು.

ಇದನ್ನೂ ಓದಿ: Economy: ಕೋವಿಡ್ ಬಾರದೇ ಹೋಗಿದ್ದರೆ ಭಾರತದ ಆರ್ಥಿಕತೆ ಹೇಗಿರುತ್ತಿತ್ತು? ಎಷ್ಟು ಹಿಂದೆಬಿದ್ದಿದೆ? ಆರ್ಥಿಕ ತಜ್ಞ ನೀಲಕಾಂತ್ ಮಿಶ್ರ ಅಭಿಪ್ರಾಯ ಇದು

ವಿವಿಧ ವರ್ಷಗಳಲ್ಲಿ ಇಟಿಎಫ್​ನಲ್ಲಿ ಆದ ಇಪಿಎಫ್ ಹೂಡಿಕೆಗಳು

  • 2023-24 (ಮೊದಲ ಏಳು ತಿಂಗಳು): 27,105 ಕೋಟಿ ರೂ
  • 2022-23ರಲ್ಲಿ: 53,081 ಕೋಟಿ ರೂ
  • 2021-22ರಲ್ಲಿ: 43,568 ಕೋಟಿ ರೂ
  • 2020-21ರಲ್ಲಿ: 32,071 ಕೋಟಿ ರೂ
  • 2019-20ರಲ್ಲಿ: 31,501 ಕೋಟಿ ರೂ
  • 2018-19ರಲ್ಲಿ: 27,974 ಕೋಟಿ ರೂ
  • 2017-18ರಲ್ಲಿ: 24,790 ಕೋಟಿ ರೂ
  • 2016-17ರಲ್ಲಿ: 14,983 ಕೋಟಿ ರೂ

ಏನಿದು ಇಟಿಎಫ್ ಮತ್ತು ಡೆಟ್ ಮಾರ್ಕೆಟ್?

ಇಟಿಎಫ್ ಎಂದರೆ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್. ಮ್ಯುಚುವಲ್ ಫಂಡ್​ನಂತೆ ಇದು ಷೇರುಮಾರುಕಟ್ಟೆಯ ವಿವಿಧ ಇಂಡೆಕ್ಸ್​ಗಳನ್ನು ಅನುಸರಿಸುತ್ತದೆ. ಷೇರುಗಳನ್ನು ಮಾತ್ರವಲ್ಲ ಬೇರೆ ಬೇರೆ ರೀತಿಯ ಹೂಡಿಕೆಗಳನ್ನು ಒಳಗೊಂಡಿರುತ್ತದೆ. ಷೇರುಮಾರುಕಟ್ಟೆಯಲ್ಲಿ ಮ್ಯುಚುವಲ್ ಫಂಡ್​ಗಳನ್ನು ವಹಿವಾಟು ಮಾಡಲು ಆಗುವುದಿಲ್ಲ. ಆದರೆ, ಇಟಿಎಫ್​ಗಳನ್ನು ಟ್ರೇಡಿಂಗ್ ಮಾಡಬಹುದು.

ಇದನ್ನೂ ಓದಿ: ಬರೋಬ್ಬರಿ 84,000 ಕೋಟಿ ರೂ ಮೌಲ್ಯದ ಆಸ್ತಿ ಒಬ್ಬ ಹಮಾಲಿಗೆ ಧಾರೆ ಎರೆಯುತ್ತಿರುವ ಶ್ರೀಮಂತ; ಏನು ಕಾರಣ?

ಇನ್ನು, ಡೆಟ್ ಫಂಡ್​ಗಳು ಸರ್ಕಾರಿ ಸಾಲಪತ್ರ ಸೇರಿ ವಿವಿಧ ಸಾಲಪತ್ರಗಳ ಮೇಲೆ ಹೂಡಿಕೆ ಮಾಡುತ್ತವೆ. ಕಾರ್ಪೊರೇಟ್ ಕಂಪನಿಗಳ ಬಾಂಡ್​ಗಳ ಮೇಲೂ ಹೂಡಿಕೆ ಆಗಬಹುದು.

ಇಪಿಎಫ್​ಒ ಮತ್ತು ಹೂಡಿಕೆ

ಇಪಿಎಫ್​ಒ 2015ರಿಂದ ಈಚೆ ಇಟಿಎಫ್​ಗಳಲ್ಲಿ ಹೂಡಿಕೆ ನಡೆಸುತ್ತಾ ಬಂದಿದೆ. ಮೊದಲಿಗೆ ಅದರ ಶೇ. 5ರಷ್ಟು ಹಣವನ್ನು ಇಟಿಎಫ್​ಗಳಲ್ಲಿ ಹಾಕಲು ಮಿತಿ ಇತ್ತು. ಇದೀಗ ಆ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Tue, 12 December 23

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ