AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಪಿಎಫ್ ಹಣ ಎಲ್ಲಿ ಹೋಗುತ್ತೆ? ಇಟಿಎಫ್​ಗಳಲ್ಲಿ 2.5 ಲಕ್ಷಕೋಟಿ ರೂ ಹೂಡಿಕೆ: ಕೇಂದ್ರ ಸಚಿವರ ಮಾಹಿತಿ

EPFO Investments In ETFs: ಎಂಪ್ಲಾಯೀ ಪ್ರಾವಿಡೆಂಟ್ ಫಂಡ್​ಗಳಲ್ಲಿನ ಹಣದಲ್ಲಿ ಎರಡೂವರೆ ಲಕ್ಷಕೋಟಿ ರೂಗೂ ಹೆಚ್ಚು ಮೊತ್ತವನ್ನು ಇಟಿಎಫ್​ಗಳಲ್ಲಿ ಹೂಡಿಕೆ ಮಾಡಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ರಾಮೇಶ್ವರ್ ತೇಲಿ ಇಪಿಎಫ್ ಹೂಡಿಕೆ ಬಗ್ಗೆ ಡಿಸೆಂಬರ್ 11ರಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ. ಇಪಿಎಫ್​ಒ ಸಂಸ್ಥೆ ತನ್ನಲ್ಲಿರುವ ಹಣವನ್ನು ಡೆಟ್ ಮಾರುಕಟ್ಟೆ ಮತ್ತು ಇಟಿಎಫ್​ಗಳಲ್ಲಿ ಕ್ರಮವಾಗಿ ಶೇ. 85 ಮತ್ತು ಶೇ. 15ರಷ್ಟು ಹೂಡಿಕೆ ಮಾಡುತ್ತದೆ.

ಇಪಿಎಫ್ ಹಣ ಎಲ್ಲಿ ಹೋಗುತ್ತೆ? ಇಟಿಎಫ್​ಗಳಲ್ಲಿ 2.5 ಲಕ್ಷಕೋಟಿ ರೂ ಹೂಡಿಕೆ: ಕೇಂದ್ರ ಸಚಿವರ ಮಾಹಿತಿ
ಇಪಿಎಫ್​ಒ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 12, 2023 | 11:18 AM

Share

ನವದೆಹಲಿ, ಡಿಸೆಂಬರ್ 12: ಇಪಿಎಫ್ ಖಾತೆಗಳಲ್ಲಿ ಜಮೆ ಆಗುವ ಹಣವನ್ನು ಇಪಿಎಫ್​ಒ ಎಲ್ಲಿ ಹೂಡಿಕೆ ಮಾಡುತ್ತದೆ? ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ರಾಮೇಶ್ವರ್ ತೇಲಿ (Rameshwar Teli) ಕಳೆದ ವರ್ಷ ನೀಡಿರುವ ಮಾಹಿತಿ ಪ್ರಕಾರ ಇಪಿಎಫ್​ನ ಶೇ. 85ರಷ್ಟು ಹಣವು ಡೆಟ್ ಮಾರುಕಟ್ಟೆಗಳಲ್ಲಿ ಹೂಡಿಕೆ ಆಗುತ್ತದೆ. ಶೇ. 15ರಷ್ಟು ಹಣವು ಇಟಿಎಫ್​ಗಳಲ್ಲಿ ಹೂಡಿಕೆ ಆಗುತ್ತದೆ. ನಿನ್ನೆ (ಡಿ. 11) ರಾಮೇಶ್ವರ್ ತೇಲಿ ಲೋಕಸಭೆಗೆ ನೀಡಿದ ಮಾಹಿತಿ ಪ್ರಕಾರ ಕಳೆದ ಏಳಕ್ಕೂ ಹೆಚ್ಚು ವರ್ಷಗಳಿಂದ ಇಟಿಎಫ್​ಗಳಲ್ಲಿ (ETF- Exchange Traded Fund) ಹೂಡಿಕೆ ಆಗಿರುವ ಪಿಎಫ್ ಹಣ ಎರಡೂವರೆ ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

ಈ ಹಣಕಾಸು ವರ್ಷದಲ್ಲಿ ಅಕ್ಟೋಬರ್​ವರೆಗೂ ಇಟಿಎಫ್​ಗಳಲ್ಲಿ ಇಪಿಎಫ್​ಒದಿಂದ ಆಗಿರುವ ಹೂಡಿಕೆಯ ಮೊತ್ತ 27,105 ಕೋಟಿ ರೂ. ಇನ್ನು, 2021-22ರಲ್ಲಿ 43,568 ಕೋಟಿ ರೂ ಮೊತ್ತದ ಇಪಿಎಫ್ ಹಣ ಹೂಡಿಕೆ ಅಗಿತ್ತು. ಮರುವರ್ಷ, ಅಂದರೆ 2022-23ರಲ್ಲಿ ಹೂಡಿಕೆಯು 53,081 ರುಪಾಯಿಗೆ ಹೆಚ್ಚಿತ್ತು.

ಇದನ್ನೂ ಓದಿ: Economy: ಕೋವಿಡ್ ಬಾರದೇ ಹೋಗಿದ್ದರೆ ಭಾರತದ ಆರ್ಥಿಕತೆ ಹೇಗಿರುತ್ತಿತ್ತು? ಎಷ್ಟು ಹಿಂದೆಬಿದ್ದಿದೆ? ಆರ್ಥಿಕ ತಜ್ಞ ನೀಲಕಾಂತ್ ಮಿಶ್ರ ಅಭಿಪ್ರಾಯ ಇದು

ವಿವಿಧ ವರ್ಷಗಳಲ್ಲಿ ಇಟಿಎಫ್​ನಲ್ಲಿ ಆದ ಇಪಿಎಫ್ ಹೂಡಿಕೆಗಳು

  • 2023-24 (ಮೊದಲ ಏಳು ತಿಂಗಳು): 27,105 ಕೋಟಿ ರೂ
  • 2022-23ರಲ್ಲಿ: 53,081 ಕೋಟಿ ರೂ
  • 2021-22ರಲ್ಲಿ: 43,568 ಕೋಟಿ ರೂ
  • 2020-21ರಲ್ಲಿ: 32,071 ಕೋಟಿ ರೂ
  • 2019-20ರಲ್ಲಿ: 31,501 ಕೋಟಿ ರೂ
  • 2018-19ರಲ್ಲಿ: 27,974 ಕೋಟಿ ರೂ
  • 2017-18ರಲ್ಲಿ: 24,790 ಕೋಟಿ ರೂ
  • 2016-17ರಲ್ಲಿ: 14,983 ಕೋಟಿ ರೂ

ಏನಿದು ಇಟಿಎಫ್ ಮತ್ತು ಡೆಟ್ ಮಾರ್ಕೆಟ್?

ಇಟಿಎಫ್ ಎಂದರೆ ಎಕ್ಸ್​ಚೇಂಜ್ ಟ್ರೇಡೆಡ್ ಫಂಡ್. ಮ್ಯುಚುವಲ್ ಫಂಡ್​ನಂತೆ ಇದು ಷೇರುಮಾರುಕಟ್ಟೆಯ ವಿವಿಧ ಇಂಡೆಕ್ಸ್​ಗಳನ್ನು ಅನುಸರಿಸುತ್ತದೆ. ಷೇರುಗಳನ್ನು ಮಾತ್ರವಲ್ಲ ಬೇರೆ ಬೇರೆ ರೀತಿಯ ಹೂಡಿಕೆಗಳನ್ನು ಒಳಗೊಂಡಿರುತ್ತದೆ. ಷೇರುಮಾರುಕಟ್ಟೆಯಲ್ಲಿ ಮ್ಯುಚುವಲ್ ಫಂಡ್​ಗಳನ್ನು ವಹಿವಾಟು ಮಾಡಲು ಆಗುವುದಿಲ್ಲ. ಆದರೆ, ಇಟಿಎಫ್​ಗಳನ್ನು ಟ್ರೇಡಿಂಗ್ ಮಾಡಬಹುದು.

ಇದನ್ನೂ ಓದಿ: ಬರೋಬ್ಬರಿ 84,000 ಕೋಟಿ ರೂ ಮೌಲ್ಯದ ಆಸ್ತಿ ಒಬ್ಬ ಹಮಾಲಿಗೆ ಧಾರೆ ಎರೆಯುತ್ತಿರುವ ಶ್ರೀಮಂತ; ಏನು ಕಾರಣ?

ಇನ್ನು, ಡೆಟ್ ಫಂಡ್​ಗಳು ಸರ್ಕಾರಿ ಸಾಲಪತ್ರ ಸೇರಿ ವಿವಿಧ ಸಾಲಪತ್ರಗಳ ಮೇಲೆ ಹೂಡಿಕೆ ಮಾಡುತ್ತವೆ. ಕಾರ್ಪೊರೇಟ್ ಕಂಪನಿಗಳ ಬಾಂಡ್​ಗಳ ಮೇಲೂ ಹೂಡಿಕೆ ಆಗಬಹುದು.

ಇಪಿಎಫ್​ಒ ಮತ್ತು ಹೂಡಿಕೆ

ಇಪಿಎಫ್​ಒ 2015ರಿಂದ ಈಚೆ ಇಟಿಎಫ್​ಗಳಲ್ಲಿ ಹೂಡಿಕೆ ನಡೆಸುತ್ತಾ ಬಂದಿದೆ. ಮೊದಲಿಗೆ ಅದರ ಶೇ. 5ರಷ್ಟು ಹಣವನ್ನು ಇಟಿಎಫ್​ಗಳಲ್ಲಿ ಹಾಕಲು ಮಿತಿ ಇತ್ತು. ಇದೀಗ ಆ ಮಿತಿಯನ್ನು ಶೇ. 15ಕ್ಕೆ ಹೆಚ್ಚಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:15 am, Tue, 12 December 23

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​