AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಡೆಡ್​ಲೈನ್; ಫೈಲಿಂಗ್ ಮಾಡದಿದ್ದರೆ ಆಗುವ ಪರಿಣಾಮಗಳೇನು? ಇಲ್ಲಿದೆ ಮಾಹಿತಿ

2021-22 ಹಣಕಾಸು ವರ್ಷಕ್ಕೆ ಅಥವಾ 2022-23 ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿದೆ. ಒಂದೊಮ್ಮೆ ನೀವು ರಿಟರ್ನ್ ಸಲ್ಲಿಸದಿದ್ದರೆ ನೀವು ತಡವಾದ ಶುಲ್ಕ ಅಥವಾ ದಂಡವನ್ನು ಪಾವತಿಸಬೇಕಾಗುತ್ತದೆ.

ITR Filing: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಡೆಡ್​ಲೈನ್; ಫೈಲಿಂಗ್ ಮಾಡದಿದ್ದರೆ ಆಗುವ ಪರಿಣಾಮಗಳೇನು? ಇಲ್ಲಿದೆ ಮಾಹಿತಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Jul 30, 2022 | 8:02 AM

2021-22 ಹಣಕಾಸು ವರ್ಷಕ್ಕೆ ಅಥವಾ 2022-23 ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (Income Tax Return) ಫೈಲಿಂಗ್​ಗೆ ಜುಲೈ 31 ಕೊನೆಯ ದಿನವಾಗಿದೆ. ನೀವು ಈಗಾಗಲೇ ರಿಟರ್ನ್ ಅನ್ನು ಸಲ್ಲಿಸಿದ್ದರೆ ಮತ್ತು ನಿಗದಿತ ದಿನಾಂಕದ ಮೊದಲು ಅದನ್ನು ಸಲ್ಲಿಸಲು ಯೋಜಿಸಿದರೆ ಉತ್ತಮ. ಆದರೆ, ಜುಲೈ 31 ರ ಗಡುವಿನ ಮೊದಲು ನೀವು ಆದಾಯ ತೆರಿಗೆ ರಿಟರ್ನ್​ ಸಲ್ಲಿಸಿದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಒಂದೊಮ್ಮೆ ನೀವು ಪಾವತಿಸಿಲ್ಲದಿದ್ದರೆ ಎಷ್ಟು ದಂಡ ಪಾವತಿಸಬೇಕಾಗುತ್ತದೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಜುಲೈ 31ರ ಗಡುವನ್ನು ನೀವು ತಪ್ಪಿಸಿಕೊಂಡರೆ ಈ ವರ್ಷದ ಡಿಸೆಂಬರ್ 31ರ ಒಳಗಾಗಿ ರಿಟರ್ನ್ ಅನ್ನು ಸಲ್ಲಿಸಬಹುದು. ಆದಾಗ್ಯೂ ನೀವು ತಡವಾದ ಶುಲ್ಕ ಅಥವಾ ದಂಡವನ್ನು ಪಾವತಿಸಬೇಕಾಗುತ್ತದೆ. ಇದು ಇತರ ಕೆಲವು ಆರ್ಥಿಕ ಪರಿಣಾಮಗಳನ್ನು ಸಹ ಹೊಂದಿರುತ್ತದೆ. ನೀವು 5 ಲಕ್ಷದವರೆಗಿ ವಾರ್ಷಿಕ ಆದಾಯ ತೆರಿಗೆದಾರರಾಗಿದ್ದರೆ 1,000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ. ಅದೇ ರೀತಿ ನೀವು 5 ಲಕ್ಷಕ್ಕಿಂತ ಹೆಚ್ಚಿನ ಆದಾಯ ತೆರಿಗೆ ಪಾವತಿದಾರರಾಗಿದ್ದರೆ 5,000 ದಂಡದ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಆದಾಗ್ಯೂ, ನಿಮ್ಮ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರದಿದ್ದರೆ ತಡವಾದ ರಿಟರ್ನ್ ಸಲ್ಲಿಕೆಗಾಗಿ ನೀವು ದಂಡವನ್ನು ಪಾವತಿಸಲು ಜವಾಬ್ದಾರರಾಗಿರುವುದಿಲ್ಲ. ಮೂಲ ವಿನಾಯಿತಿ ಮಿತಿಯು ನೀವು ಆಯ್ಕೆ ಮಾಡುವ ಆದಾಯ ತೆರಿಗೆ ಆಡಳಿತವನ್ನು ಅವಲಂಬಿಸಿರುತ್ತದೆ. ಹಳೆಯ ಆದಾಯ ತೆರಿಗೆ ಪದ್ಧತಿಯ ಅಡಿಯಲ್ಲಿ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ತೆರಿಗೆದಾರರಿಗೆ ಮೂಲ ತೆರಿಗೆ ವಿನಾಯಿತಿ ಮಿತಿಯು 2.5 ಲಕ್ಷ ರೂ. ಆಗಿರುತ್ತದೆ. 60 ರಿಂದ 80 ವರ್ಷ ವಯಸ್ಸಿನವರಿಗೆ ಮೂಲ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ನಿಗದಿಪಡಿಸಲಾಗಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ  5 ಲಕ್ಷಕ್ಕೆ ವಿನಾಯಿತಿ ಮಿತಿಯನ್ನು ನಿಲ್ಲಿಸಲಾಗಿದೆ. ಹೊಸ ರಿಯಾಯಿತಿ ಆದಾಯ ತೆರಿಗೆ ಪದ್ಧತಿಯ ಅಡಿಯಲ್ಲಿ ತೆರಿಗೆದಾರರ ವಯಸ್ಸಿನ ಹೊರತಾಗಿಯೂ ಮೂಲ ತೆರಿಗೆ ವಿನಾಯಿತಿ ಮಿತಿಯು 2.5 ಲಕ್ಷವಾಗಿರುತ್ತದೆ.

ತಡವಾದ ಶುಲ್ಕದ ಶುಲ್ಕಗಳ ಹೊರತಾಗಿ ಮುಕ್ತಾಯಗೊಂಡ ಗಡುವುಗಳು ಹಲವಾರು ಇತರ ಪರಿಣಾಮಗಳನ್ನು ಹೊಂದಿವೆ. ನೀವು ಗಡುವನ್ನು ತಪ್ಪಿಸಿಕೊಂಡರೆ ತೆರಿಗೆಗಳ ವಿಳಂಬ ಪಾವತಿಗೆ ನೀವು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಎಂಬುದು ನೆನಪಿನಲ್ಲಿರಲಿ. ಟ್ಯಾಕ್ಸ್‌ಪ್ಯಾನರ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಸುಧೀರ್ ಕೌಶಿಕ್ ಪ್ರಕಾರ, ಬಡ್ಡಿ ಮತ್ತು ಲಾಭಾಂಶಕ್ಕಾಗಿ ರಿಟರ್ನ್ ಸಲ್ಲಿಸುವಾಗ ಕೆಲವು ತೆರಿಗೆಯನ್ನು ಪಾವತಿಸಬಹುದು. ಟಿಡಿಎಸ್ ಅನ್ನು 10 ಪ್ರತಿಶತದಲ್ಲಿ ಕಡಿತಗೊಳಿಸಲಾಗಿದೆಯಾದರೂ ನೀವು 20 ಪ್ರತಿಶತ ಅಥವಾ 30 ಶೇಕಡಾ ತೆರಿಗೆ ಸ್ಲ್ಯಾಬ್‌ನಲ್ಲಿರುವಿರಿ. ಆದ್ದರಿಂದ ತೆರಿಗೆಯ ವಿಭಿನ್ನ ಮೊತ್ತವನ್ನು ಸೆಕ್ಷನ್ 234 ಎ ಪ್ರಕಾರ ತಿಂಗಳಿಗೆ ಶೇ.1 ದರದಲ್ಲಿ ಬಡ್ಡಿಯೊಂದಿಗೆ ಪಾವತಿಸಬೇಕು.

ನೀವು ನಿಗದಿತ ದಿನಾಂಕದ ಮೊದಲು ರಿಟರ್ನ್ ಸಲ್ಲಿಸಿದರೆ ನೀವು ಬಾಕಿ ಇರುವ ತೆರಿಗೆಯನ್ನು ಜಮಾ ಮಾಡಬಹುದು. ಆದಾಗ್ಯೂ ನೀವು ಗಡುವನ್ನು ತಪ್ಪಿಸಿಕೊಂಡರೆ ನೀವು ಬಾಕಿ ಇರುವ ತೆರಿಗೆಯನ್ನು ಬಡ್ಡಿಯೊಂದಿಗೆ ಜುಲೈ 31 ರಿಂದ ಪೂರ್ವಾನ್ವಯವಾಗಿ ಠೇವಣಿ ಮಾಡಬೇಕಾಗುತ್ತದೆ. ಯಾವುದೇ ತಿಂಗಳ 5ನೇ ತಾರೀಕಿನ ನಂತರ ಬಾಕಿ ಇರುವ ಬಾಕಿಗಳನ್ನು ಪಾವತಿಸಿದರೆ ತಿಂಗಳಿಗೆ 1 ಶೇಕಡ ದರದಲ್ಲಿ ಪೂರ್ಣ ತಿಂಗಳ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಇತರ ಆದಾಯಗಳ ವಿರುದ್ಧ ಆಸ್ತಿಯ ಮಾರಾಟದ ವ್ಯಾಪಾರ ಕಾರ್ಯಾಚರಣೆಗಳಿಂದ ನಷ್ಟವನ್ನು ಸರಿದೂಗಿಸುವ ಮೂಲಕ ತೆರಿಗೆದಾರನು ಹೊಣೆಗಾರಿಕೆಯನ್ನು ಕಡಿಮೆ ಮಾಡಬಹುದು. ಆದಾಗ್ಯೂ ನಿಗದಿತ ದಿನಾಂಕದ ಮೊದಲು ರಿಟರ್ನ್ ಸಲ್ಲಿಸಿದರೆ ಮಾತ್ರ ನಷ್ಟವನ್ನು ಮುಂದಕ್ಕೆ ಸಾಗಿಸಬಹುದು.

Published On - 8:00 am, Sat, 30 July 22

ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆಯಲ್ಲಿ ಪತ್ನಿ ಪ್ರೀತಿ ಜೊತೆ ಗೌತಮ್ ಅದಾನಿ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ
ರಾಜ್ಯಾಧ್ಯಕ್ಷನ ಬದಲಾವಣೆ ಬಗ್ಗೆಯೂ ವರಿಷ್ಠರು ಚರ್ಚಿಸಿಲ್ಲ: ಅಶೋಕ