AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಮಾರುಕಟ್ಟೆಯಿಂದ ಹೊರಹೋಗಲಿರುವ ಒಮಿಡ್ಯಾರ್ ನೆಟ್ವರ್ಕ್; ಏನು ಕಾರಣ?

Omidyar Network to Exit Indian Market: ಇಂಪ್ಯಾಕ್ಟ್ ಇನ್ವೆಸ್ಟಿಂಗ್ ಸಂಸ್ಥೆ ಒಮಿಡ್ಯಾರ್ ನೆಟ್ವರ್ಕ್ 14 ವರ್ಷ ಭಾರತದ ಮಾರುಕಟ್ಟೆಯಲ್ಲಿ ಪ್ರಭಾವ ತೋರಿ ಈಗ ಪೂರ್ಣ ಹೊರಹೋಗಲು ನಿರ್ಧರಿಸಿದೆ. 2010ರಲ್ಲಿ ಒಮಿಡ್ಯಾರ್ ನೆಟ್ವರ್ಕ್ ತನ್ನ ಡುಯಲ್ ಚೆಕ್​ಬುಕ್ ಇನ್ವೆಸ್ಟಿಂಗ್ ಮಾಡಲ್​ನಲ್ಲಿ ಭಾರತದಲ್ಲಿ ಹೂಡಿಕೆ ಆರಂಭಿಸಿತ್ತು. ಇಂಪ್ಯಾಕ್ಟ್ ಸೆಕ್ಟರ್​ನಲ್ಲಿ ಈಗ ಸಾಕಷ್ಟು ಹೂಡಿಕೆಗಳು ಬರುತ್ತಿವೆ. ಈ ಕ್ಷೇತ್ರಕ್ಕೆ ಪುಷ್ಟಿ ತರುವ ತಮ್ಮ ಗುರಿ ಈಡೇರಿದೆ ಎಂದು ಓಮಿಡ್ಯಾರ್ ಹೇಳಿಕೊಂಡಿದೆ.

ಭಾರತದ ಮಾರುಕಟ್ಟೆಯಿಂದ ಹೊರಹೋಗಲಿರುವ ಒಮಿಡ್ಯಾರ್ ನೆಟ್ವರ್ಕ್; ಏನು ಕಾರಣ?
ಹೂಡಿಕೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 12, 2023 | 2:21 PM

Share

ನವದೆಹಲಿ, ಡಿಸೆಂಬರ್ 12: ವಿಶೇಷ ಹೂಡಿಕೆ ಸಂಸ್ಥೆ ಒಮಿಡ್ಯಾರ್ ನೆಟ್ವರ್ಕ್ ಇಂಡಿಯಾ (Odidyar Network India) ಭಾರತದ ಮಾರುಕಟ್ಟೆಯಿಂದ ಹೊರಬೀಳಲು ನಿರ್ಧರಿಸಿದೆ. 2024ರ ಅಂತ್ಯದೊಳಗೆ ಭಾರತದಿಂದ ಹೂಡಿಕೆಗಳನ್ನು ಸಂಪೂರ್ಣ ಹೊರತೆಗೆಯಲಿದೆ. ಈ ವಿಚಾರವನ್ನು ಒಮಿಡ್ಯಾರ್ ಗ್ರೂಪ್ ತನ್ನ ಬ್ಲಾಗ್ ಪೋಸ್ಟ್​ವೊಂದರಲ್ಲಿ ಬರೆದುಕೊಂಡಿದೆ. ಇದರೊಂದಿಗೆ ಭಾರತದಲ್ಲಿ ಒಮಿಡ್ಯಾರ್ ನೆಟ್ವರ್ಕ್​ನ 14 ವರ್ಷಗಳ ಕಾರ್ಯಾಚರಣೆ ಅಂತ್ಯಗೊಂಡಂತಾಗುತ್ತದೆ. ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ಸಾಕಷ್ಟು ಪರಿವರ್ತನೆಗೆ ಅನುವು ಮಾಡುವಂತಹ ಹೂಡಿಕೆಗಳನ್ನು ಮಾಡಿದ್ದೇವೆ ಎಂದು ಒಮಿಡ್ಯಾರ್ ಸಂಸ್ಥೆ ತೃಪ್ತಿ ವ್ಯಕ್ತಪಡಿಸಿದೆ.

ಒಮಿಡ್ಯಾರ್ ನೆಟ್ವರ್ಕ್​ನ ಭಾಗವಾಗಿರುವ ಓಮಿಡ್ಯಾರ್ ನೆಟ್ವರ್ಕ್ ಇಂಡಿಯಾ ಸಂಸ್ಥೆ ಡುಯಲ್ ಚೆಕ್​ಬುಕ್ ಹೂಡಿಕೆ ವಿಧಾನವನ್ನು (dual cheque book investing model) ಅನುಸರಿಸುತ್ತದೆ. ಡುಯಲ್ ಚೆಕ್​ಬುಕ್ ಮಾಡೆಲ್ ಅಂದರೆ, ಎರಡು ಮಾದರಿಯ ಹೂಡಿಕೆಗಳನ್ನು ಅನುಸರಿಸುವುದು. ಒಂದು ರೀತಿಯಲ್ಲಿ, ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಕಮರ್ಷಿಯಲ್ ಮತ್ತು ಆರ್ಟ್ ಈ ಎರಡೂ ಮಾದರಿಯ ಸಿನಿಮಾ ಪ್ರೊಡ್ಯೂಸ್ ಮಾಡುವಂತಹ ರೀತಿಯದ್ದು. ಡುಯಲ್ ಚೆಕ್​ಬುಕ್ ಇನ್ವೆಸ್ಟ್​ಮೆಂಟ್ ಮಾಡಲ್​ನಲ್ಲಿ ಮೊದಲನೆಯದು ಎಲ್ಲಾ ಹೂಡಿಕೆ ಸಂಸ್ಥೆಗಳು ಕೈಗೊಳ್ಳುವ ಸಹಜ ಹೂಡಿಕೆ. ಇಲ್ಲಿ ಇಂಪ್ಯಾಕ್ಟ್ ಸೆಕ್ಟರ್​ಗಳೆನಿಸಿದ ಸಾಮಾಜಿಕ ಮತ್ತು ಪರಿಸರ ಕ್ಷೇತ್ರದ ಸಂಸ್ಥೆಗಳಿಗೆ ಬಂಡವಾಳ ಕೊಡುವುದು. ಎರಡನೆಯದು, ನಾನ್ ಪ್ರಾಫಿಟ್ ಸಂಸ್ಥೆಗಳಿಗೆ (non profit organization) ಬಂಡವಾಳ ಕೊಡುವುದು. ಈ ಎರಡನೆಯದು ಸಾಮಾಜಿಕವಾಗಿ ಪರಿವರ್ತನೆ ಮಾಡುವಂಥದ್ದು.

ಇದನ್ನೂ ಓದಿ: ಐಫೋನ್​ಗಳಿಗೆ ಭಾರತದಲ್ಲೇ ಗೊರಿಲ್ಲಾ ಗ್ಲಾಸ್ ಉತ್ಪಾದನೆ; ಅಮೆರಿಕದ ಕಾರ್ನಿಂಗ್​ನಿಂದ ಫ್ಯಾಕ್ಟರಿ ಸ್ಥಾಪನೆ

ಭಾರತದ ಮಾರುಕಟ್ಟೆಯಿಂದ ಒಮಿಡ್ಯಾರ್ ನಿರ್ಗಮಿಸುತ್ತಿರುವುದು ಯಾಕೆ?

ಒಮಿಡ್ಯಾರ್ ನೆಟ್ವರ್ಕ್ ಸಂಸ್ಥೆ ಇಂಪ್ಯಾಕ್ಟ್ ಸೆಕ್ಟರ್​ಗಳಲ್ಲಿ ಹೂಡಿಕೆ ಮಾಡುತ್ತದೆ. ಸಾಮಾಜಿಕ ಮತ್ತು ಪರಿಸರ ವಲಯಗಳನ್ನು ಇಂಪ್ಯಾಕ್ಟ್ ಸೆಕ್ಟರ್ ಎಂದು ಪರಿಗಣಿಸಲಾಗುತ್ತದೆ. ಈ ವಲಯದ ಬೆಳವಣಿಗೆಗೆ ಪೂರಕವಾಗಿ ಸಹಾಯ ಮಾಡುವಂತಹ ಉದ್ಯಮಗಳಿಗೆ ಬಂಡವಾಳ ಹಾಕುವುದಕ್ಕೆ ಇಂಪ್ಯಾಕ್ಟ್ ಇನ್ವೆಸ್ಟಿಂಗ್ ಎನ್ನುವುದು.

ಭಾರತದಲ್ಲಿ ಈ ರೀತಿಯ ಇಂಪ್ಯಾಕ್ಟ್ ಇನ್ವೆಸ್ಟಿಂಗ್ ಕಾರ್ಯಕ್ಕೆ ಸಾಕಷ್ಟು ಹೂಡಿಕೆ ಸಂಸ್ಥೆಗಳು ಕೈಜೋಡಿಸಿವೆ. ಇಂಪ್ಯಾಕ್ಟ್ ಸೆಕ್ಟರ್​ಗಳಿಗೆ ಸಾಕಷ್ಟು ಬಂಡವಾಳ ಬರುತ್ತಿದೆ. ಈ ವಲಯಕ್ಕೆ ಪುಷ್ಟಿ ಕೊಡಬೇಕೆನ್ನುವ ತಮ್ಮ ಪ್ರಾಥಮಿಕ ಗುರಿ ಈಡೇರಿದೆ ಎಂದು ಒಮಿಡ್ಯಾರ್ ನೆಟ್ವರ್ಕ್ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​