ಅ. 31ರಿಂದ ಯುಪಿಐ ಲೈಟ್ ಆಟೊ ಟಾಪ್ ಅಪ್; ಏನಿದು ಹೊಸ ಫೀಚರ್?

UPI Lite Auto top-up:ಯುಪಿಐ ಲೈಟ್ ಫೀಚರ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಆಟೊ ಟಾಪಪ್ ಸೌಲಭ್ಯವನ್ನು ಸೇರಿಸಲಾಗುತ್ತಿದೆ. ಅಕ್ಟೋಬರ್ 31ರಿಂದ ಯುಪಿಐ ಲೈಟ್ ಅಕೌಂಟ್​ಗೆ ಆಟೊ ಟಾಪ್ ಅಪ್ ಅವಕಾಶ ಸಿಗಲಿದೆ. 500 ರೂ ಒಳಗಿನ ಹಣ ಪಾವತಿಗೆ ಯುಪಿಐ ಲೈಟ್ ಬಳಸಬಹುದು. 2,000 ರೂ ಒಳಗಿನ ಹಣವನ್ನು ಆಟೊ ಟಾಪ್ ಅಪ್ ಆಗಿ ಮ್ಯಾಂಡೇಟ್ ಕೊಡಬಹುದು.

ಅ. 31ರಿಂದ ಯುಪಿಐ ಲೈಟ್ ಆಟೊ ಟಾಪ್ ಅಪ್; ಏನಿದು ಹೊಸ ಫೀಚರ್?
ಯುಪಿಐ

Updated on: Sep 13, 2024 | 11:22 AM

ಬೆಂಗಳೂರು, ಸೆಪ್ಟೆಂಬರ್ 13: ಯುಪಿಐ ಬಳಸುತ್ತಿರುವವರು ಯುಪಿಐ ಲೈಟ್ ಫೀಚರ್ ಬಳಸುತ್ತಿರಬಹುದು. ಸಣ್ಣ ಮೊತ್ತದ ಹಣ ವಹಿವಾಟಿಗೆ ಇದು ಬಹಳ ಅನುಕೂಲ ಆಗುತ್ತದೆ. ಪೇಟಿಎಂ, ಫೋನ್​ಪೇ ಮೊದಲಾದ ಕೆಲ ಯುಪಿಐ ಪ್ಲಾಟ್​ಫಾರ್ಮ್​ಗಳಲ್ಲಿ ಈ ಫೀಚರ್ ಅನ್ನು ಅಳವಡಿಸಲಾಗಿದೆ. ಎನ್​ಪಿಸಿಐ ಈಗ ಯುಪಿಐ ಲೈಟ್ ಫೀಚರ್​ನಲ್ಲಿ ಇನ್ನೊಂದು ಹಂತ ಮುಂದಕ್ಕೆ ಹೋಗಿದೆ. ಅಕ್ಟೋಬರ್ 31ರಿಂದ ಯುಪಿಐ ಲೈಟ್​ ಅಕೌಂಟ್​ಗೆ ಆಟೊ ಟಾಪ್ ಅಪ್ ಮಾಡುವ ಅವಕಾಶ ಇರಲಿದೆ.

ಆಟೊ ಟಾಪ್ ಅಪ್ ಎಂದರೆ ಆಟೊಮ್ಯಾಟಿಕ್ ಆಗಿ ಹಣ ವರ್ಗಾವಣೆ ಆಗುವುದು. ಯುಪಿಐ ಲೈಟ್ ಅಕೌಂಟ್​ನಲ್ಲಿ 2,000 ರೂವರೆಗೆ ಹಣ ತುಂಬಿಸಬಹುದು. ಆ ಹಣ ಖಾಲಿಯಾದರೆ ಬ್ಯಾಂಕ್ ಅಕೌಂಟ್​ನಿಂದ ಅದಕ್ಕೆ ಮ್ಯಾನುವಲ್ ಆಗಿ ಹಣ ತುಂಬಿಸಬೇಕಾಗುತ್ತದೆ. ಆಟೊ ಟಾಪ್ ಅಪ್ ಅವಕಾಶ ಇದ್ದರೆ ಯುಪಿಐ ಲೈಟ್ ಅಕೌಂಟ್​ನಲ್ಲಿ ಹಣ ಖಾಲಿಯಾದರೆ ಬ್ಯಾಂಕ್ ಅಕೌಂಟ್​ನಿಂದ ನೀವು ನಿರ್ದಿಷ್ಟಪಡಿಸಿದ ಮೊತ್ತದಷ್ಟು ಹಣ ತನ್ನಂತಾನೆ ವರ್ಗಾವಣೆ ಆಗುತ್ತದೆ. ಒಟ್ಟಾರೆ ಯುಪಿಐ ಲೈಟ್ ಅಕೌಂಟ್​ನಲ್ಲಿ ಇರುವ ಹಣ 2,000 ರೂ ಮೀರಿರಬಾರದು ಅಷ್ಟೇ.

ಈ ಯುಪಿಯ ಲೈಟ್​ನ ಆಟೊ ಟಾಪ್ ಅಪ್ ಫೀಚರ್ 2024ರ ಅಕ್ಟೋಬರ್ 31ರಿಂದ ಸಕ್ರಿಯಗೊಳ್ಳುತ್ತದೆ. ಆಗಸ್ಟ್ 27ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಎನ್​ಪಿಸಿಐ ಈ ವಿಚಾರವನ್ನು ತಿಳಿಸಿತ್ತು.

ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್ ಪಾಲಿಸಿ: ನಿಮ್ಮ ಕ್ಲೇಮ್ ರಿಜೆಕ್ಟ್ ಆಗುತ್ತಿದೆಯಾ? ಇಲ್ಲಿವೆ 5 ಕಾರಣಗಳು

ಏನಿದು ಯುಪಿಐ ಲೈಟ್?

ಯುಪಿಐ ಮೂಲಕ ನೀವು ಹಣ ಪಾವತಿ ಮಾಡುವಾಗ ಬ್ಯಾಂಕ್ ಸರ್ವರ್​ನ ಬಾಗಿಲು ತಟ್ಟಬೇಕಾಗುತ್ತದೆ. ಕೋಟ್ಯಂತರ ಜನರು ವಹಿವಾಟು ನಡೆಸುವಾಗ ಬ್ಯಾಂಕ್ ಸರ್ವರ್​ಗಳಿಗೆ ಕಷ್ಟವಾಗಬಹುದು. ಬ್ಯಾಂಕ್ ಅಕೌಂಟ್​ನ ಪಿನ್ ನಂಬರ್ ಅನ್ನು ಗ್ರಾಹಕರು ಒದಗಿಸಬೇಕು. ಗ್ರಾಹಕರಿಗೂ ತುಸು ಹೆಚ್ಚು ಸಮಯ ಹಿಡಿಯುತ್ತದೆ. ಯುಪಿಐ ಲೈಟ್ ಫೀಚರ್​ನಲ್ಲಿ ಸಣ್ಣ ಮೌಲ್ಯದ ವಹಿವಾಟುಗಳನ್ನು (500 ರೂಗಿಂತ ಕಡಿಮೆ) ಯಾವುದೇ ಪಿನ್ ನಮೂದಿಸುವ ಅಗತ್ಯ ಇಲ್ಲದೇ ನಡೆಸಬಹುದು. ಬ್ಯಾಂಕ್​ನ ಕೋರ್ ಸಿಸ್ಟಮ್ ಅನ್ನು ಸಂಪರ್ಕಿಸುವ ಅವಶ್ಯಕತೆಯೂ ಇರುವುದಿಲ್ಲ.

ಯುಪಿಐ ಲೈಟ್ ಫೀಚರ್ ಎಂಬುದು ವ್ಯಾಲಟ್ ರೀತಿ ಕೆಲಸ ಮಾಡುತ್ತದೆ. ಆದರೆ ಪ್ರಮುಖ ವ್ಯತ್ಯಾಸ ಎಂದರೆ ಲೈಟ್ ಫೀಚರ್​ನಲ್ಲಿ ನೀವು ಯಾವುದೇ ಪ್ಲಾಟ್​ಫಾರ್ಮ್​ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ವ್ಯಾಲಟ್ ಆದರೆ ಅದೇ ಪ್ಲಾಟ್​ಫಾರ್ಮ್​ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಬಳಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us