ಆಕಸ್ಮಿಕ ಅವಘಡಕ್ಕೆ ವೃದ್ದನನ್ನು ಬೆಂಕಿಯಲ್ಲಿ ಹಾಕಿ ಕೊಲೆಗೆ ಯತ್ನ; ಮೂವರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 21, 2024 | 3:12 PM

ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಆಕಸ್ಮಿಕವಾಗಿ ನಡೆದಿದ್ದ ಅವಘಡಕ್ಕೆ 70 ವರ್ಷದ ದುಂಡಪ್ಪ ಹರಿಜನ ಎಂಬುವವರನ್ನು ಬೆಂಕಿಯಲ್ಲಿ ಹಾಕಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಕುರಿತು ಆರು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ವಿಜಯಪುರ ಗ್ರಾಮೀಣ ಡಿವೈಎಸ್ಪಿ ಜಿ ಜಿ ತಳಕಟ್ಟಿ, ಸಿಪಿಐ ಆನಂದರಾವ್ ಎಸ್ ಎಲ್ ನೇತೃತ್ವದಲ್ಲಿ ತನಿಖೆ ಶುರುವಾಗಿದೆ.

ಆಕಸ್ಮಿಕ ಅವಘಡಕ್ಕೆ ವೃದ್ದನನ್ನು ಬೆಂಕಿಯಲ್ಲಿ ಹಾಕಿ ಕೊಲೆಗೆ ಯತ್ನ; ಮೂವರ ಬಂಧನ
ಬಂಧಿತ ಆರೋಪಿಗಳು, ಗಾಯಾಳು ವೃದ್ದ
Follow us on

ವಿಜಯಪುರ, ಮಾ.21: ಆಕಸ್ಮಿಕವಾಗಿ ನಡೆದಿದ್ದ ಅವಘಡಕ್ಕೆ 70 ವರ್ಷದ ದುಂಡಪ್ಪ ಹರಿಜನ ಎಂಬುವವರನ್ನು ಬೆಂಕಿಯಲ್ಲಿ ಹಾಕಿ ಕೊಲೆಗೆ ಯತ್ನಿಸಿದ ಘಟನೆ ವಿಜಯಪುರ(Vijayapura) ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ. ಕಳೆದ ಮಾರ್ಚ್ 15 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ಜನರ ವಿರುದ್ದ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳಾದ ಹನುಮಂತ ಮಲಘಾಣ, ಲಕ್ಷ್ಮಣ ವಾಲೀಕಾರ ಹಾಗೂ ಪವನ ಆಸಂಗಿ ಎಂಬುವವರನ್ನು ಬಂಧಿಸಲಾಗಿದೆ.

ಘಟನೆ ವಿವರ

ವೃದ್ದ ದುಂಡಪ್ಪ, ತನ್ನ ಜಮೀನಿನಲ್ಲಿದ್ದ ಕಬ್ಬಿನ ರವದಿಗೆ ಬೆಂಕಿ ಹಚ್ಚಿದ್ದ. ಈ ವೇಳೆ ಆಕಸ್ಮಿಕವಾಗಿ ಗಾಳಿಗೆ ಬೆಂಕಿ ಹಾರಿ ಪಕ್ಕದ ಮಲ್ಲಪ್ಪ ಆಸಂಗಿ ಎಂಬುವವರ ಜಮೀನಿನಲ್ಲಿದ್ದ ಮೇವಿನ ಬಣವಿಗೆ ಬೆಂಕಿ ಬಿದ್ದು ಸುಟ್ಟು ಭಸ್ಮವಾಗಿತ್ತು. ಈ ವಿಚಾರವಾಗಿ ದುಂಡಪ್ಪ ಹಾಗೂ ಮಲ್ಲಪ್ಪ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮೇವಿನ ಬದಲಾಗಿ ಮೇವು ನೀಡುತ್ತೇನೆ, ಇಲ್ಲವೇ ಸುಟ್ಟ ಮೇವಿಗೆ ಪರಿಹಾರ ನೀಡುತ್ತೇನೆಂದ ವೃದ್ದ ಹೇಳಿದ್ದ. ಈ ವೇಳೆ ಸಿಟ್ಟಾದ ಮಲ್ಲಪ್ಪ ಹಾಗೂ ಆತನ ಸಂಬಂಧಿಕ ಹನುಮಂತ ಮಲಘಾಣ ಸೇರಿ ಹಲ್ಲೆ ನಡೆಸಿ, ನಮ್ಮ ಮೇವಿನ ಬಣವೆಗೆ ಬೆಂಕಿ ಹಾಕಿದ್ದೀಯಾ, ನಿನ್ನನ್ನು ಸುಟ್ಟು ಹಾಕುತ್ತೇವೆಂದು ಬೆದರಿಕೆ ಒಡ್ಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ವಿದೇಶಿ ಮಹಿಳೆ ಅನುಮಾನಾಸ್ಪದ ಸಾವು; ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ

ಈ ವೇಳೆ ವೃದ್ದ ದುಂಡಪ್ಪನನ್ನು ಎತ್ತಿ, ಉರಿಯೋ ಬೆಂಕಿಗೆ ಹನುಮಂತ ವಾಲೀಕಾರ, ಸಂಗಪ್ಪ ಆಸಂಗಿ ಎಸೆದಿದ್ದಾರೆ. ದುಂಡಪ್ಪನ ಬೆನ್ನು ಹಾಗೂ ಕೈಗಳಿಗೆ ಬೆಂಕಿ ತಗುಲಿ, ಸುಟ್ಟ ಗಾಯಗಳಿಂದ ಬಳಿಲಿರುವ ದುಂಡಪ್ಪನವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಆರು ಜನರ ಮೇಲೆ ಪ್ರಕರಣ ದಾಖಲಾಗಿದ್ದು, ವಿಜಯಪುರ ಗ್ರಾಮೀಣ ಡಿವೈಎಸ್ಪಿ ಜಿ ಜಿ ತಳಕಟ್ಟಿ, ಸಿಪಿಐ ಆನಂದರಾವ್ ಎಸ್ ಎಲ್ ನೇತೃತ್ವದಲ್ಲಿ ತನಿಖೆ ಶುರುವಾಗಿದೆ.

ಸಿಂಗಾಪುರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ

ಚಿತ್ರದುರ್ಗ: ತಾಲೂಕಿನ ಸಿಂಗಾಪುರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಕೌಟುಂಬಿಕ ಕಲಹ ಹಿನ್ನೆಲೆ‌ ಪತ್ನಿ ಕುಟುಂಬಸ್ಥರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಶಿವಕುಮಾರ್(31) ಮೃತ ರ್ದುದೈವಿ. ಈ ಕುರಿತು ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ

ಹಾಸನ : ಡೆಂಗ್ಯೂ ಜ್ವರಕ್ಕೆ ಬಾಲಕಿ ಅಸುನೀಗಿದ ಘಟನೆ ಹಾಸನದಲ್ಲಿ ನಡೆದಿದೆ. ಸಾತ್ವಿಕ (7) ಮೃತ ಬಾಲಕಿ. ಕಳೆದ ಮೂರ್ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನಲೆ ಇವರನ್ನು ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ದಾಖಲಾಗಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾತ್ವಿಕ ಕೊನೆಯುಸಿರೆಳೆದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ