ಕ್ರಿಮಿನಲ್ ಚಟುವಟಿಕೆ ತಡೆಗೆ ವಿಭಿನ್ನ ಪ್ರಯತ್ನ: ಏರಿಯಾ ಯುವಕರ ಜೊತೆ ಪೊಲೀಸರ ಕ್ರಿಕೆಟ್​

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೀಗಾಗಿ ಅಪರಾಧಗಳನ್ನು ತಡೆಗಟ್ಟಲು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, ಕ್ರಿಮಿನಲ್ ಚಟುವಟಿಕೆ ಹೆಚ್ಚಿರುವ ಏರಿಯಾದ ಯುವಕರೊಂದಿಗೆ ಕ್ರಿಕೆಟ್ ಆಯೋಜನೆ ಮಾಡಿದ್ದಾರೆ. ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆ‌ ಮಾಡಲಾಗಿದೆ. ಅಪರಾಧ ಚಟುವಟಿ ಹಾಗೂ ಗುಂಪುಗಾರಿಕೆ ಹೆಚ್ಚಿರುವ ಏರಿಯಾಗಳಿಂದ ಟೀಂಗಳನ್ನು ರಚನೆ ಮಾಡಲಾಗಿದೆ. ದಯಾನಂದ ಸಾಗರ […]

ಕ್ರಿಮಿನಲ್ ಚಟುವಟಿಕೆ ತಡೆಗೆ ವಿಭಿನ್ನ ಪ್ರಯತ್ನ: ಏರಿಯಾ ಯುವಕರ ಜೊತೆ ಪೊಲೀಸರ ಕ್ರಿಕೆಟ್​

Updated on: Feb 04, 2020 | 3:11 PM

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರಾಧ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಹೀಗಾಗಿ ಅಪರಾಧಗಳನ್ನು ತಡೆಗಟ್ಟಲು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, ಕ್ರಿಮಿನಲ್ ಚಟುವಟಿಕೆ ಹೆಚ್ಚಿರುವ ಏರಿಯಾದ ಯುವಕರೊಂದಿಗೆ ಕ್ರಿಕೆಟ್ ಆಯೋಜನೆ ಮಾಡಿದ್ದಾರೆ.

ನಗರದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯ ಆಯೋಜನೆ‌ ಮಾಡಲಾಗಿದೆ. ಅಪರಾಧ ಚಟುವಟಿ ಹಾಗೂ ಗುಂಪುಗಾರಿಕೆ ಹೆಚ್ಚಿರುವ ಏರಿಯಾಗಳಿಂದ ಟೀಂಗಳನ್ನು ರಚನೆ ಮಾಡಲಾಗಿದೆ. ದಯಾನಂದ ಸಾಗರ ಕಾಲೇಜು ಮೈದಾನದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಕ್ರಿಕೆಟ್ ಪಂದ್ಯ ನಡೆದಿದೆ. ಈ ಮೂಲಕ ಪೊಲೀಸರೊಂದಿಗೆ ಸಾಮರಸ್ಯ ಮೂಡಿಸಲು ನೂತನ ಪ್ರಯತ್ನಕ್ಕೆ ಪೊಲೀಸರು ಮುಂದಾಗಿದ್ದಾರೆ.



Published On - 1:24 pm, Tue, 4 February 20