AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದ್ರಾಬಾದ್ ತೋರಿಸ್ತೀನಿ ಅಂತಾ ಹೆತ್ತಮ್ಮನನ್ನು ಯಮಪುರಿಗೆ ಕಳಿಸಿದ ಪುತ್ರಿ, ಯಾಕೆ ಗೊತ್ತಾ?

ಬೆಂಗಳೂರು: ಯುವತಿಯೊಬ್ಬಳ ಕ್ರೌರ್ಯವನ್ನ ಕಂಡು ಬೆಂಗಳೂರಿಗರು ಈ ಚಳಿಯಲ್ಲೂ ತಣ್ಣಗೆ ಬೆವತಿದ್ದಾರೆ. ಹೈದರಾಬಾದ್ ತೋರಿಸ್ತೀನಿ ಅಂತಾ ಹೆತ್ತಮ್ಮ ಮತ್ತು ಸ್ವಂತ ತಮ್ಮನನ್ನು ಪುಸಲಾಯಿಸಿ, ಸಿದ್ಧಗೊಳಿಸಿದ್ದ ಯಮಪುತ್ರಿ ತಾಯಿಯನ್ನು ಸೀದಾ ಯಮಪುರಿಗೆ ಕಳುಹಿಸಿದ್ದಾಳೆ. ಹೆತ್ತೊಡಲಿಗೆ ಅಮೃತವಾಗಬೇಕಿದ್ದ ಅಮೃತಾ ವಿಷವನ್ನೇ ಉಣ್ಣಿಸಿದ್ದಳು.. ಮಗಳು ಅಮೃತಾ ಟೆಕ್ಕಿ. ಕೈ ತುಂಬಾ ಸಂಬಳ ತರುತ್ತಿದ್ದಾಳೆ. ಈಗ ಹೈದರಾಬಾದ್​ ಬೇರೆ ತೋರಿಸ್ತೀನಿ ಅಂತಿದ್ದಾಳೆ. ಮಗಳು ಅಂದ್ರೆ ಹೀಗಿರಬೇಕು ಎಂದು ಹೆತ್ತಮ್ಮ ನಿರ್ಮಲಾ ತಮ್ಮ ಪುತ್ರ ಹರೀಶ್ ಜೊತೆ ಸಂತೋಷ ಹಂಚಿಕೊಂಡಿದ್ದರು. ಆದ್ರೆ ಹೆತ್ತೊಡಲಿಗೆ ಅಮೃತವಾಗಬೇಕಿದ್ದ […]

ಹೈದ್ರಾಬಾದ್ ತೋರಿಸ್ತೀನಿ ಅಂತಾ ಹೆತ್ತಮ್ಮನನ್ನು ಯಮಪುರಿಗೆ ಕಳಿಸಿದ ಪುತ್ರಿ, ಯಾಕೆ ಗೊತ್ತಾ?
ಸಾಧು ಶ್ರೀನಾಥ್​
|

Updated on:Feb 04, 2020 | 12:02 PM

Share

ಬೆಂಗಳೂರು: ಯುವತಿಯೊಬ್ಬಳ ಕ್ರೌರ್ಯವನ್ನ ಕಂಡು ಬೆಂಗಳೂರಿಗರು ಈ ಚಳಿಯಲ್ಲೂ ತಣ್ಣಗೆ ಬೆವತಿದ್ದಾರೆ. ಹೈದರಾಬಾದ್ ತೋರಿಸ್ತೀನಿ ಅಂತಾ ಹೆತ್ತಮ್ಮ ಮತ್ತು ಸ್ವಂತ ತಮ್ಮನನ್ನು ಪುಸಲಾಯಿಸಿ, ಸಿದ್ಧಗೊಳಿಸಿದ್ದ ಯಮಪುತ್ರಿ ತಾಯಿಯನ್ನು ಸೀದಾ ಯಮಪುರಿಗೆ ಕಳುಹಿಸಿದ್ದಾಳೆ.

ಹೆತ್ತೊಡಲಿಗೆ ಅಮೃತವಾಗಬೇಕಿದ್ದ ಅಮೃತಾ ವಿಷವನ್ನೇ ಉಣ್ಣಿಸಿದ್ದಳು.. ಮಗಳು ಅಮೃತಾ ಟೆಕ್ಕಿ. ಕೈ ತುಂಬಾ ಸಂಬಳ ತರುತ್ತಿದ್ದಾಳೆ. ಈಗ ಹೈದರಾಬಾದ್​ ಬೇರೆ ತೋರಿಸ್ತೀನಿ ಅಂತಿದ್ದಾಳೆ. ಮಗಳು ಅಂದ್ರೆ ಹೀಗಿರಬೇಕು ಎಂದು ಹೆತ್ತಮ್ಮ ನಿರ್ಮಲಾ ತಮ್ಮ ಪುತ್ರ ಹರೀಶ್ ಜೊತೆ ಸಂತೋಷ ಹಂಚಿಕೊಂಡಿದ್ದರು. ಆದ್ರೆ ಹೆತ್ತೊಡಲಿಗೆ ಅಮೃತವಾಗಬೇಕಿದ್ದ ಅಮೃತಾ ವಿಷವನ್ನೇ ಉಣ್ಣಿಸಿದ್ದಾಳೆ. ಯಾಕೆ ಗೊತ್ತಾ? ಮೂರು ದಿನಗಳ ಹಿಂದೆ ಸವಿನಿದ್ರೆಯಲ್ಲಿ ಪಕ್ಕದಲ್ಲೇ ಮಲಗಿದ್ದ ತನ್ನನ್ನು ಹೆತ್ತ ತಾಯಿ ಎಂಬುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ, ಚಾಕುವಿನಿಂದ ಕೊಚ್ಚಿ ಕೊಚ್ಚಿ ಸಾಯಿಸಿದ್ದಳು ಪಾಪಿ ಮಗಳು. ಅದಾದ ನಂತರ ಒಡಹುಟ್ಟಿದ ತಮ್ಮನನ್ನೂ ಸಾಯಿಸಿಬಿಡಲು ಯತ್ನಿಸಿದ್ದಾಳೆ.

ಆದ್ರೆ ಸೋದರ ಸದ್ಯ ಬಚಾವಾಗಿದ್ದಾನೆ. ತಮ್ಮನನ್ನೂ ಸಾಯಿಸುವಾಗ ಅಮಾಯಕ ತಮ್ಮ ಕೇಳಿದ್ದಕ್ಕೆ ತನಗೆ ಸಿಕ್ಕಾಪಟ್ಟೆ ಸಾಲ ಇದೆ. ಮನೆ ಮರ್ಯಾದೆ ಹರಾಜು ಆಗುತ್ತದೆ. ಅದಕ್ಕೇ ಅಮ್ಮನನ್ನೂ ಸಾಯಿಸಿಬಿಟ್ಟೆ. ಈಗ ನಿನ್ನನ್ನೂ.. ಅಂತಾ ಬಡಬಡಿಸಿದ್ದಳು.

ಸಿಸಿಟಿವಿ ಎಂಬ ಮಾಯಾವಿಯಿಂದ ಇಡೀ ಪ್ರಕರಣಕ್ಕೆ ರೋಚಕ ತಿರುವು ಇದಾದ ಮೇಲೆ ಏನಾಯಿತು ಎಂಬುದಕ್ಕೆ ಪ್ರಕರಣದ ರೋಚಕ ತಿರುವಿಗೆ ಕಾರಣವಾಗಿದೆ. ಸಿಸಿಟಿವಿ ಎಂಬ ಮಾಯಾವಿ ಇಡೀ ಪ್ರಕರಣಕ್ಕೆ ರೋಚಕ ತಿರುವು ಕೊಟ್ಟಿದೆ. ತಾಯಿ ಹತ್ಯೆಯ ಹಿಂದಿದೆ ಪ್ರೇಮ್ ಕಹಾನಿ.. ಕೊಲೆ ಬಳಿಕ ಮನೆಯಿಂದ ಹೊರಟ ಅಮೃತಾ ಎಂಬ ಮತಿಹೀನ ಪುತ್ರಿ, ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.

ಟೆಕ್ಕಿ ಅಮೃತಾಳನ್ನ ಅವಳ ಮನೆ ಸಮೀಪದಿಂದಲೇ ಯುವಕನೊಬ್ಬ ಪಿಕ್ ಅಪ್ ಮಾಡಿರುವುದು ಸಿಸಿಟಿವಿ ಕ್ಯಾಪ್ಚರ್​ ಮಾಡಿದೆ. ಪಲ್ಸರ್ ಬೈಕ್ ನಲ್ಲಿ ಬಂದು ಕಾದು ಕುಳಿತಿದ್ದವ ಅಮೃತಾಳ ಜೊತೆ ಎಸ್ಕೇಪ್ ಆಗಿದ್ದಾನೆ. ಆರೋಪಿ ಅಮೃತಾ ತಾಯಿಯನ್ನೇ ಕೊಂದು, ಬಳಿಕ ಯುವಕನ ಜೊತೆ ಬೈಕ್ ಏರಿ ಪರಾರಿಯಾಗಿದ್ದಾಳೆ.

ಅಮೃತಾ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಅದೂ ಒಂದಲ್ಲ ಎರಡಲ್ಲ ಮೂರು ಆ್ಯಂಗಲ್​ಗಳಲ್ಲಿ ಪರಾರಿಯಾಗುವ ದೃಶ್ಯಗಳು ಸೆರೆಯಾಗಿವೆ. ಸದ್ಯ ಸಿಸಿಟಿವಿ ಆಧರಿಸಿ ಕೆಆರ್ ಪುರಂ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

Published On - 11:09 am, Tue, 4 February 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!