AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕನ ಗುದದ್ವಾರಕ್ಕೆ ನಳಿಕೆ ಹಾಕಿ ಗಾಳಿ ತುಂಬಿದ ಗಿರಣಿ ಕೆಲಸಗಾರರು; 2 ದಿನ ಯಾತನೆ ಅನುಭವಿಸಿ ಮೃತಪಟ್ಟ ಹುಡುಗ

ಮೃತ ಬಾಲಕನ ತಂದೆ ಮೂವರ ವಿರುದ್ಧ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಿದ್ದಾರೆ.

ಬಾಲಕನ ಗುದದ್ವಾರಕ್ಕೆ ನಳಿಕೆ ಹಾಕಿ ಗಾಳಿ ತುಂಬಿದ ಗಿರಣಿ ಕೆಲಸಗಾರರು; 2 ದಿನ ಯಾತನೆ ಅನುಭವಿಸಿ ಮೃತಪಟ್ಟ ಹುಡುಗ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on:Mar 09, 2021 | 5:47 PM

Share

ಬರೇಲಿ: ಮನುಷ್ಯನ ಕ್ರೌರ್ಯಕ್ಕೆ ಮಿತಿಯೇ ಇಲ್ಲವಾ? ಈ ಘಟನೆಯ ಬಗ್ಗೆ ಕೇಳಿದರೆ ಹೀಗೊಂದು ಪ್ರಶ್ನೆ ಮನಸಲ್ಲಿ ಮೂಡುತ್ತದೆ. ಏರ್​ ಕಂಪ್ರೆಸರ್​​ನ ನಳಿಕೆಯನ್ನು 16ವರ್ಷದ ಹುಡುಗನ ಗುದದ್ವಾರದಲ್ಲಿ ಸಿಲುಕಿಸಿ ಗಾಳಿಯನ್ನು ಹಾಕಿದ್ದಾರೆ. ಇದರಿಂದ ಬಾಲಕನ ಗುದನಾಳ ಉಬ್ಬಿಕೊಂಡು, ಆತ ಮೃತಪಟ್ಟಿದ್ದಾನೆ. ಇದು ನಡೆದಿದ್ದು ಉತ್ತರ ಪ್ರದೇಶದ ಪಿಲಿಭಿತ್​​ ಜಿಲ್ಲೆಯಲ್ಲಿ.

ಪಿಲಿಭಿತ್​​ನ ಅಕ್ಕಿ ಗಿರಣಿಯೊಂದರಲ್ಲಿ ಈ ಹುಡುಗ ಕೆಲಸ ಮಾಡುತ್ತಿದ್ದಾರೆ. ಇದೇ ಮಿಲ್​​ನ ಮೂವರು ಕೆಲಸಗಾರರು ಮಾರ್ಚ್​ 4ರಂದು ತನ್ನ ಮಗನ ಗುದದ್ವಾರದ ಒಳಗೆ ಏರ್​ ಕಂಪ್ರೆಸರ್​​ನ ನಳಿಕೆಯನ್ನು ಹಾಕಿ ಗಾಳಿ ತುಂಬಿದ್ದಾರೆ ಎಂದು ಮೃತ ಬಾಲಕನ ತಂದೆ ಆರೋಪಿಸಿದ್ದಾರೆ. ಮಾರ್ಚ್​ 4ರಂದು ನನ್ನ ಮಗ ಊಟ ಮಾಡಲು ಹೊರಟಿದ್ದಾಗ, ಅಮಿತ್​, ಸೂರಜ್​ ಮತ್ತು ಕಮಲೇಶ್​ ಎಂಬ ಮೂವರು ಕೆಲಸಗಾರರು ಆತನನ್ನು ಎಳೆದುಕೊಂಡು ಹೋಗಿದ್ದಾರೆ. ಅಮಿತ್​ ಮತ್ತು ಸೂರಜ್​ ಬಾಲಕನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಕಮಲೇಶ್ ಎಂಬಾತ ನಳಿಕೆಯನ್ನು ಹಾಕಿ, ಗಾಳಿ ತುಂಬಿದ್ದಾನೆ ಎಂದು ಹೇಳಿದ್ದಾರೆ.

ಚಿಕಿತ್ಸೆ ಫಲಿಸಲಿಲ್ಲ ಇನ್ನು ಬಾಲಕನ ಗುದದ್ವಾರದಲ್ಲಿ ಗಾಳಿಯನ್ನು ತುಂಬುತ್ತಿದ್ದಂತೆ ಆತನ ಆರೋಗ್ಯದಲ್ಲಿ ಏರುಪೇರಾಯಿತು. ಸುತ್ತಮುತ್ತಲೂ ಇದ್ದವರು ಕೂಡಲೇ ಬರೇಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ವೈದ್ಯರು ನೀಡಿದ ಚಿಕಿತ್ಸೆ ವಿಫಲವಾಯಿತು. ಬಾಲಕನ ಸಾವು ತುಂಬ ಯಾತನಾಮಯವಾಗಿತ್ತು. ಎರಡುದಿನ ನೋವು ಅನುಭವಿಸಿ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಅರೆಸ್ಟ್​ ಮೃತ ಬಾಲಕನ ತಂದೆ ಮೂವರ ವಿರುದ್ಧ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದರಲ್ಲಿ ಇಬ್ಬರನ್ನು ಈಗಾಗಲೇ ಬಂಧಿಸಿದ್ದಾರೆ. ಆದರೆ ಬಾಲಕನ ಗುದನಾಳಕ್ಕೆ ಗಾಳಿ ತುಂಬಿದ ಆರೋಪಿ ಕಮಲೇಶ್​ ಇನ್ನೂ ಸಿಕ್ಕಿಲ್ಲ. ಅವನ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಥಣಿಸಂದ್ರದ 16 ಮಸೀದಿಗಳಿಂದ ಶಬ್ದ ಮಾಲಿನ್ಯ ಆರೋಪ: ಪೊಲೀಸ್ ಆಯುಕ್ತರಿಗೆ ಹೈಕೋರ್ಟ್ ನೋಟಿಸ್

Video Viral: ಯುವತಿಯ ಕಪಾಳಕ್ಕೆ ಹೊಡೆದ ಮಹಿಳಾ ಪಿಎಸ್‌ಐ! ವಾಹನ ತಪಾಸಣೆ ವೇಳೆ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿ ಘಟನೆ

Published On - 5:44 pm, Tue, 9 March 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್