
ಬೆಂಗಳೂರು: ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಶೀಟರ್ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಐವರು ಆರೋಪಿಗಳು ಅರೆಸ್ಟ್ ಆಗಿದ್ದು ಸಿಸಿಬಿ ಪೊಲೀಸರು ಆರೋಪಿಗಳಿಂದ ಕಳ್ಳತನದ ಮಾಲನ್ನು ಜಪ್ತಿ ಮಾಡಿದ್ದಾರೆ.
ಸಾಧಿಕ್, ಮುಬಾರಕ್, ಸೈಯದ್ ಹನೀಫ್, ಮಹಮ್ಮದ್ ಇಮ್ರಾನ್, ಅಕ್ರಮ್ ಪಾಷಾ ಬಂಧಿತ ಆರೋಪಿಗಳು. ಇವರು ಎಚ್.ಎ.ಎಲ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು. ಈ ವೇಳೆ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಬಂಧಿತರಿಂದ 4 ಬೈಕ್ ಹಾಗೂ ಕಳ್ಳತನದ ಮಾಲುಗಳನ್ನು ವಶಕ್ಕೆ ಪಡೆಯಲಾಗಿದೆ. ಇವರ ಮೇಲೆ ಎಚ್.ಎ.ಎಲ್ ಠಾಣೆಯಲ್ಲಿ ದರೋಡೆ ಪ್ರಕರಣ, ಬಾಣಸವಾಡಿಯಲ್ಲಿ ಬೈಕ್ ಕಳುವು ಪ್ರಕರಣ ದಾಖಲಾಗಿದೆ.