AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿ ಕೊಂದು ಆಕೆಯ ಹಣೆಗೆ ಸಿಂಧೂರವಿಟ್ಟು ವಿಡಿಯೋ ಮಾಡಿ ಪತಿಯೂ ಆತ್ಮಹತ್ಯೆ: ಕ್ಷುಲ್ಲಕ ಕಾರಣಕ್ಕೆ ದಂಪತಿ ದಾರುಣ ಅಂತ್ಯ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್‌ನಲ್ಲಿ ಪತ್ನಿಯನ್ನು ಕೊಂದು ಬಳಿಕ ಪತಿಯೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹದ ಕಾರಣ ಒಡಿಶಾ ಮೂಲದ ಈ ದಂಪತಿ ದುರಂತ ಅಂತ್ಯ ಕಂಡಿದ್ದಾರೆ. ಕೊಲೆ ಮಾಡಿದ ಬಳಿಕ ಪತ್ನಿಯ ಹಣೆಗೆ ಸಿಂಧೂರವಿಟ್ಟು ವಿಡಿಯೋ ಮಾಡಿದ್ದ ವ್ಯಕ್ತಿ, ಡೆತ್‌ ನೋಟ್ ಬರೆದಿಟ್ಟು ಬಳಿಕ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಸೂರ್ಯನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪತ್ನಿ ಕೊಂದು ಆಕೆಯ ಹಣೆಗೆ ಸಿಂಧೂರವಿಟ್ಟು ವಿಡಿಯೋ ಮಾಡಿ ಪತಿಯೂ ಆತ್ಮಹತ್ಯೆ: ಕ್ಷುಲ್ಲಕ ಕಾರಣಕ್ಕೆ ದಂಪತಿ ದಾರುಣ ಅಂತ್ಯ
ಮೃತ ದಂಪತಿImage Credit source: Tv9 Kannada
ರಾಮು, ಆನೇಕಲ್​
| Edited By: |

Updated on: Mar 02, 2026 | 3:07 PM

Share

ಆನೇಕಲ್​​, ಮಾರ್ಚ್​​ 02: ಪತ್ನಿಯನ್ನು ಕೊಂದು ಬಳಿಕ ತಾನೂ ನೇಣುಬಿಗಿದುಕೊಂಡು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹೀಲಲಿಗೆಯಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಒಡಿಶಾ ಮೂಲದ ಮಂಜುಳಾಳನ್ನು ಕೊಂದು ದೀಪಂತ್ ತಾನೂ ಪ್ರಾಣ ಬಿಟ್ಟಿದ್ದಾನೆ. ದಂಪತಿ ಬೊಮ್ಮಸಂದ್ರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಕಳೆದ ಬುಧವಾರ ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ಹೋಗಿ ಮಂಜುಳಾ ಮೇಲೆ ದೀಪಂತ್​ ಹಲ್ಲೆ ನಡೆಸಿದ್ದ. ಈ ವೇಳೆ ಮಂಜುಳಾ ಪ್ರಾಣ ಬಿಟ್ಟಿದ್ದಾಳೆ. ಬಳಿಕ ಶವದ ಮುಂದೆ ಕಣ್ಣೀರು ಹಾಕಿ ವಿಡಿಯೋ ಮಾಡಿದ್ದ ದೀಪಂತ್, ಮಂಜುಳಾ ಹಣೆಗೆ ಸಿಂಧೂರವಿಟ್ಟಿದ್ದ. ಬಳಿಕ ಒಡಿಶಾ ಭಾಷೆಯಲ್ಲಿ ಡೆತ್​ನೋಟ್​ ಬರೆದು ತಾನು ಕೂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಅನುಮಾನಗೊಂಡ ಮನೆ ಮಾಲೀಕ ಕಿಟಕಿಯಲ್ಲಿ ನೋಡಿದಾಗ ಮಂಜುಳಾ ಮತ್ತು ದೀಪಂತ್​​ ಇಬ್ಬರೂ ಮೃತಪಟ್ಟಿರುವ ವಿಚಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ. ಕಳೆದ ಶುಕ್ರವಾರವೇ ಮನೆ ಮಾಲಿಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ! ಪತ್ನಿಯೇ ಕೊಂದಿರುವ ಶಂಕೆ

ಮಹಿಳೆಯರ ಮೇಲೆ ಹಲ್ಲೆ

ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಗ್ರಾಮದಲ್ಲಿ ದೇವಸ್ಥಾನದ ಜಾಗದಲ್ಲಿ ಮೇವು ಇಟ್ಟಿದ್ದಕ್ಕೆ ಮಹಿಳೆಯರ ಮೇಲೆ ಹಲ್ಲ ನಡೆಸಿರುವ ಘಟನೆ ನಡೆದಿದೆ. ನಾಗನಾಥ ದೇವಸ್ಥಾನದ ಆವರಣದಲ್ಲಿ ಮೇವು ಇಟ್ಟಿದ್ದ ಮಹಿಳೆಯರಿಗೆ, ಅವನ್ನು ತೆಗೆಯುವಂತೆ ಕೆಲ ಪುಡಿ ರೌಡಿಗಳು ಧಮ್ಕಿ ಹಾಕಿ, ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ಕಾಕತಿ ಪೊಲೀಸರು ಸ್ಪಂದಿಸದ ಹಿನ್ನೆಲೆ ಹರಿದ ಸೀರೆಯಲ್ಲಿಯೇ ಪೊಲೀಸ್ ಕಮಿಷನರ್ ಭೆಟಿಯಾಗಲು ಮಹಿಳೆಯರು ತೆರಳಿದ್ದು, ಇವರಿಗೆ ಸ್ಥಳಿಯ ರೈತ ಮುಖಂಡರು ಸಾಥ್​​ ನೀಡಿದ್ದಾರೆ. ಪ್ರಿಯಾಂಕಾ ಸಾವಂತ್ ಮತ್ತು ಉಮಾ ಸಾವಂತ್ ಮೇಲೆ ಶಿವಾಜಿ ಬೋಗಾನ್, ಶಿವಾಜಿ ಪಾಟೀಲ್, ಜಯವಂತ ಸಾವಂತ್, ನವನಾಥ್ ಗಾವಡೆ ಮತ್ತು ಸುನೀಲ್ ಗಾವಡೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us