ನಗರ್ತಪೇಟೆಯಲ್ಲಿ ಹವಾಲಾ ದಂಧೆಕೋರರ ಮೇಲೆ CCB ದಾಳಿ.. ಇಬ್ಬರು ಅಂದರ್

ಬೆಂಗಳೂರು: ಹವಾಲಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು CCB ಪೊಲೀಸರು ನಗರ್ತಪೇಟೆಯಲ್ಲಿ ಬಂಧಿಸಿದ್ದಾರೆ. ರಾಣಾ ಸಾಮ್ಲಾ ಮತ್ತು ಚೇತನ್ ಬಂಧಿತ ಹವಾಲಾ ದಂಧೆಕೋರರು. ರಾಣಾ ಸಾಮ್ಲಾ ಮತ್ತು ಚೇತನ್ ನಗರ್ತಪೇಟೆಯಲ್ಲಿ ಹವಾಲಾ ದಂಧೆಯಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ CCB ಅಧಿಕಾರಿಗಳು ದಾಳಿ ನಡೆಸಿದ್ದು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಬಂಧಿತರ ಬಳಿಯಿದ್ದ 4,50,800 ನಗದು ಹಾಗೂ 2 ಮೊಬೈಲ್​ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಬಂಧಿತರು ಹವಾಲಾ ದಂಧೆಯ ಹಣವನ್ನು ಕ್ರಿಕೆಟ್ ಬೆಟ್ಟಿಂಗ್​ನಲ್ಲೂ ಬಳಸಿದ್ದರು ಎಂದು ತಿಳಿದುಬಂದಿದೆ.

ನಗರ್ತಪೇಟೆಯಲ್ಲಿ ಹವಾಲಾ ದಂಧೆಕೋರರ ಮೇಲೆ CCB ದಾಳಿ.. ಇಬ್ಬರು ಅಂದರ್

Updated on: Oct 09, 2020 | 9:02 AM

ಬೆಂಗಳೂರು: ಹವಾಲಾ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು CCB ಪೊಲೀಸರು ನಗರ್ತಪೇಟೆಯಲ್ಲಿ ಬಂಧಿಸಿದ್ದಾರೆ. ರಾಣಾ ಸಾಮ್ಲಾ ಮತ್ತು ಚೇತನ್ ಬಂಧಿತ ಹವಾಲಾ ದಂಧೆಕೋರರು.

ರಾಣಾ ಸಾಮ್ಲಾ ಮತ್ತು ಚೇತನ್ ನಗರ್ತಪೇಟೆಯಲ್ಲಿ ಹವಾಲಾ ದಂಧೆಯಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ CCB ಅಧಿಕಾರಿಗಳು ದಾಳಿ ನಡೆಸಿದ್ದು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದಾರೆ. ಬಂಧಿತರ ಬಳಿಯಿದ್ದ 4,50,800 ನಗದು ಹಾಗೂ 2 ಮೊಬೈಲ್​ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಬಂಧಿತರು ಹವಾಲಾ ದಂಧೆಯ ಹಣವನ್ನು ಕ್ರಿಕೆಟ್ ಬೆಟ್ಟಿಂಗ್​ನಲ್ಲೂ ಬಳಸಿದ್ದರು ಎಂದು ತಿಳಿದುಬಂದಿದೆ.