ವಿರೇನ್ ಖನ್ನಾನ ವಿಚಾರಣೆ ಶುರು ಮಾಡಿದ ಸಿಸಿಬಿ ಅಧಿಕಾರಿಗಳು

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲೊಬ್ಬನೆಂದು ಪರಿಗಣಿಸಲಾಗಿರುವ ವಿರೇನ್ ಖನ್ನಾನ ನಾಲ್ಕು ದಿನಗಳ ಕಸ್ಟಡಿಗ ಪಡೆದಿರುವ ಸಿಸಿಬಿ ಅಧಿಕಾರಿಗಳು ಅವನನ್ನು ಇಂದು ಕಚೇರಿಗೆ ಕರೆತಂದು ವಿಚಾರಣೆ ಆರಂಭಿಸಿದರು. ದೆಹಲಿ ಮೂಲದ ಖನ್ನಾ ಡ್ರಗ್ಸ್‌ ಪಾರ್ಟಿಗಳನ್ನ ಆಯೋಜನೆ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಶುಕ್ರವಾರವಾರದಂದು ಸಿಸಿಬಿಯ ಇಬ್ಬರು ಇನ್ಸ್​ಪೆಕ್ಟರ್​ಗಳು ಆತನನ್ನು ದೆಹಲಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದರು. ಖನ್ನಾನನ್ನು ಸಿಸಿಬಿ ಕಚೇರಿಗೆ ಕರೆತಂದಾಗ ಅವನ ಮುಖದಲ್ಲಿ ಆತಂಕವಾಗಲೀ, ಭಯವಾಗಲೀ ಕಾಣಿಸಲಿಲ್ಲ. ಪೊಲೀಸರ ವಶದಲ್ಲಿದ್ರೂ ಖನ್ನಾ ದರ್ಪದಿಂದ ವರ್ತಿಸುತ್ತಿದ್ದ ಮತ್ತು ಮಾಧ್ಯಮದವರ […]

ವಿರೇನ್ ಖನ್ನಾನ ವಿಚಾರಣೆ ಶುರು ಮಾಡಿದ ಸಿಸಿಬಿ ಅಧಿಕಾರಿಗಳು
ಅರುಣ್​ ಕುಮಾರ್​ ಬೆಳ್ಳಿ

Updated on: Sep 05, 2020 | 9:15 PM

ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲೊಬ್ಬನೆಂದು ಪರಿಗಣಿಸಲಾಗಿರುವ ವಿರೇನ್ ಖನ್ನಾನ ನಾಲ್ಕು ದಿನಗಳ ಕಸ್ಟಡಿಗ ಪಡೆದಿರುವ ಸಿಸಿಬಿ ಅಧಿಕಾರಿಗಳು ಅವನನ್ನು ಇಂದು ಕಚೇರಿಗೆ ಕರೆತಂದು ವಿಚಾರಣೆ ಆರಂಭಿಸಿದರು.

ದೆಹಲಿ ಮೂಲದ ಖನ್ನಾ ಡ್ರಗ್ಸ್‌ ಪಾರ್ಟಿಗಳನ್ನ ಆಯೋಜನೆ ಮಾಡುತ್ತಿದ್ದನೆಂದು ಆರೋಪಿಸಲಾಗಿದೆ. ಶುಕ್ರವಾರವಾರದಂದು ಸಿಸಿಬಿಯ ಇಬ್ಬರು ಇನ್ಸ್​ಪೆಕ್ಟರ್​ಗಳು ಆತನನ್ನು ದೆಹಲಿಯಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದರು.

ಖನ್ನಾನನ್ನು ಸಿಸಿಬಿ ಕಚೇರಿಗೆ ಕರೆತಂದಾಗ ಅವನ ಮುಖದಲ್ಲಿ ಆತಂಕವಾಗಲೀ, ಭಯವಾಗಲೀ ಕಾಣಿಸಲಿಲ್ಲ. ಪೊಲೀಸರ ವಶದಲ್ಲಿದ್ರೂ ಖನ್ನಾ ದರ್ಪದಿಂದ ವರ್ತಿಸುತ್ತಿದ್ದ ಮತ್ತು ಮಾಧ್ಯಮದವರ ಮೇಲೆ ಕೂಗಾಡಿದ. ವಿಚಾರಣೆ ಸಂದರ್ಭದಲ್ಲೂ ಅವನು ಬಾಯಿ ಬಿಚ್ಚುತ್ತಿಲ್ಲವೆಂದು ಮೂಲಗಳಿಂದ ಗೊತ್ತಾಗಿದೆ.

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us