IPS ಅಂತೇಳಿ ಮದುವೆಯಾದ, ಬಳಿಕ ಪೊಲೀಸರ ಅತಿಥಿಯಾದ

ಕೊಡಗು: ಐಪಿಎಸ್ ಅಧಿಕಾರಿ ಎಂದು ನಂಬಿಸಿ ಯುವತಿಯನ್ನು ಮದುವೆಯಾಗಿದ್ದ ನಕಲಿ ಐಪಿಎಸ್‌ ಅಧಿಕಾರಿ ಮತ್ತು ಆತನ ಸ್ನೇಹಿತರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿಯನ್ನು ಕೇರಳ ಮೂಲದ ತ್ರಿಶೂರ್ ಮಿಥುನ್ ವಿವಾಹವಾಗಿದ್ದ. ಅಲ್ಲದೆ, ಪತ್ನಿ ಮನೆಯವ್ರಿಗೆ ತಾನು ಐಪಿಎಸ್ ಅಧಿಕಾರಿ ಅಂತಾ ನಂಬಿಸಲು ಸ್ನೇಹಿತರ ಜೊತೆ ಬಂದು ಪೊಲೀಸ್ ಸಮವಸ್ತ್ರ ಸಹ ಖರೀದಿ ಮಾಡಿದ್ದ. ತವರು ಮನೆಗೆ ವಾಪಸ್ ಬಂದಿದ್ದ ಯುವತಿಗೆ ಪತಿಯ ವಂಚನೆ ಬಯಲಾಗಿದೆ. ವಂಚನೆ ಬಗ್ಗೆ ಗೊತ್ತಾದ ಬಳಿಕ ಯುವತಿ […]

IPS ಅಂತೇಳಿ ಮದುವೆಯಾದ, ಬಳಿಕ ಪೊಲೀಸರ ಅತಿಥಿಯಾದ
ಸಾಧು ಶ್ರೀನಾಥ್​

Updated on: Nov 10, 2019 | 5:37 PM

ಕೊಡಗು: ಐಪಿಎಸ್ ಅಧಿಕಾರಿ ಎಂದು ನಂಬಿಸಿ ಯುವತಿಯನ್ನು ಮದುವೆಯಾಗಿದ್ದ ನಕಲಿ ಐಪಿಎಸ್‌ ಅಧಿಕಾರಿ ಮತ್ತು ಆತನ ಸ್ನೇಹಿತರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿಯನ್ನು ಕೇರಳ ಮೂಲದ ತ್ರಿಶೂರ್ ಮಿಥುನ್ ವಿವಾಹವಾಗಿದ್ದ. ಅಲ್ಲದೆ, ಪತ್ನಿ ಮನೆಯವ್ರಿಗೆ ತಾನು ಐಪಿಎಸ್ ಅಧಿಕಾರಿ ಅಂತಾ ನಂಬಿಸಲು ಸ್ನೇಹಿತರ ಜೊತೆ ಬಂದು ಪೊಲೀಸ್ ಸಮವಸ್ತ್ರ ಸಹ ಖರೀದಿ ಮಾಡಿದ್ದ. ತವರು ಮನೆಗೆ ವಾಪಸ್ ಬಂದಿದ್ದ ಯುವತಿಗೆ ಪತಿಯ ವಂಚನೆ ಬಯಲಾಗಿದೆ. ವಂಚನೆ ಬಗ್ಗೆ ಗೊತ್ತಾದ ಬಳಿಕ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ನಾಪೋಕ್ಲು ಪೊಲೀಸರು ನಕಲಿ IPS ಅಧಿಕಾರಿ ತ್ರಿಶೂರ್ ಮಿಥುನ್ ಹಾಗೂ ಆತನ ಸ್ನೇಹಿತರಾದ ಮನೋಜ್‌, ಅಬುತಾಹಿರ್ ಮತ್ತು ವಿನೋದ್​ನನ್ನು ಬಂಧಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us