Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣಕ್ಕಾಗಿ ಜೀವದ ಗೆಳಯನಿಗೆ ಗುಂಡು, ಆರೋಪಿಗಳು ಅಂದರ್

ಮಂಗಳೂರು: ದುಡ್ಡಿನ ಮುಂದೆ ಯಾವ ಸಂಬಂಧವೂ ಲೆಕ್ಕಕ್ಕಿಲ್ಲ. ಎಂಥಾದ್ದೇ ಗಟ್ಟಿ ಸಂಬಂಧ ಆದ್ರೂ ಹಣದ ಮುಂದೆ ಕ್ಷಣಾರ್ಧದಲ್ಲಿ ಚೂರು ಚೂರಾಗಿ ಬಿಡುತ್ತೆ. ಅದೆಷ್ಟೋ ವರ್ಷಗಳ ಕಾಲ ಜೀವದ ಗೆಳೆಯರಂತೆ ವ್ಯವಹಾರ ಮಾಡಿದ್ರು. ಆದ್ರೆ, ಹಣ ಅನ್ನೋ ಭೂತ ಸ್ನೇಹಿತನ ರಕ್ತ ಹರಿಯುವಂತೆ ಮಾಡಿತು..! ನವೆಂಬರ್ 27 ಮುಸ್ಸಂಜೆ ಸಮಯ. ದಕ್ಷಿಣ ಕನ್ನಡ ಪತ್ತೂರು ನಗರ ಠಾಣಾ ವ್ಯಾಪ್ತಿಯ ಕಬಕ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು. ಜನ್ರೆಲ್ಲಾ ಏನಾಯ್ತು ಏನಾಯ್ತು ಅಂತಾ ಮನೆಬಿಟ್ಟು ಹೊರಗೆ ಓಡಿ ಬಂದಿದ್ರು. ಯಾಕಂದ್ರೆ, ದುಷ್ಕರ್ಮಿಗಳು […]

ಹಣಕ್ಕಾಗಿ ಜೀವದ ಗೆಳಯನಿಗೆ ಗುಂಡು, ಆರೋಪಿಗಳು ಅಂದರ್
Follow us
ಸಾಧು ಶ್ರೀನಾಥ್​
|

Updated on:Dec 03, 2019 | 1:28 PM

ಮಂಗಳೂರು: ದುಡ್ಡಿನ ಮುಂದೆ ಯಾವ ಸಂಬಂಧವೂ ಲೆಕ್ಕಕ್ಕಿಲ್ಲ. ಎಂಥಾದ್ದೇ ಗಟ್ಟಿ ಸಂಬಂಧ ಆದ್ರೂ ಹಣದ ಮುಂದೆ ಕ್ಷಣಾರ್ಧದಲ್ಲಿ ಚೂರು ಚೂರಾಗಿ ಬಿಡುತ್ತೆ. ಅದೆಷ್ಟೋ ವರ್ಷಗಳ ಕಾಲ ಜೀವದ ಗೆಳೆಯರಂತೆ ವ್ಯವಹಾರ ಮಾಡಿದ್ರು. ಆದ್ರೆ, ಹಣ ಅನ್ನೋ ಭೂತ ಸ್ನೇಹಿತನ ರಕ್ತ ಹರಿಯುವಂತೆ ಮಾಡಿತು..!

ನವೆಂಬರ್ 27 ಮುಸ್ಸಂಜೆ ಸಮಯ. ದಕ್ಷಿಣ ಕನ್ನಡ ಪತ್ತೂರು ನಗರ ಠಾಣಾ ವ್ಯಾಪ್ತಿಯ ಕಬಕ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು. ಜನ್ರೆಲ್ಲಾ ಏನಾಯ್ತು ಏನಾಯ್ತು ಅಂತಾ ಮನೆಬಿಟ್ಟು ಹೊರಗೆ ಓಡಿ ಬಂದಿದ್ರು. ಯಾಕಂದ್ರೆ, ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಎಸ್ಕೇಪ್ ಆಗಿದ್ರು.

ಅಷ್ಟಕ್ಕೂ ಆವತ್ತು ಕಬಕ ನಿವಾಸಿ ಅಬ್ದುಲ್ ಖಾದರ್ ಮೇಲೆ ಗುಂಡಿನ ದಾಳಿ ಆಗಿತ್ತು. ಎದೆಗೆ ಗುಂಡು ಬಿದ್ದು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡ್ತಿದ್ರು. ಸ್ಥಳಕ್ಕೆ ಬಂದಿದ್ದ ಜನರು ಇವ್ರನ್ನ ಆಸ್ಪತ್ರೆಗೆ ಸೇರಿಸಿದ್ರು. ಆದ್ರೆ, ಮುಸ್ಸಂಜೆ ಹೊತ್ತಲ್ಲಿ ಫೈರಿಂಗ್ ಮಾಡಿದ್ಯಾರು ಅನ್ನೋದೇ ಖಾಕಿಗೆ ದೊಡ್ಡ ಸವಾಲಾಗಿತ್ತು.

ಮೂವರು ದಾಳಿಕೋರರ ಹೆಡೆಮುರಿ ಕಟ್ಟಿದ ಖಾಕಿ..! ಆವತ್ತು ಕೇಸ್ ದಾಖಲಿಸಿಕೊಂಡು ಫೀಲ್ಡಿಗಿಳಿದಿದ್ದ ಪೊಲೀಸರಿಗೆ, ಗ್ರಾಮಸ್ಥರೆಲ್ಲಾ ಓರ್ವನ ಮೇಲೆ ಅನುಮಾನ ವ್ಯಕ್ತಪಡಿಸಿದ್ರು. ಅದ್ರ ಆಧಾರದ ಮೇಲೆ ಪುತ್ತೂರು ನಗರ ಠಾಣೆ ಪೊಲೀಸರು ಮೂವರ ಹೆಡೆಮುರಿಕಟ್ಟಿದ್ದಾರೆ. ಹಸನ್ ಸಾಧಿಕ್ ಮತ್ತೋರ್ವ, ಹನೀಫ್ ಜೋಗಿ ಮತ್ತು ಗುರುನಾರಾಯಣ್ ಕೈಗೆ ಕೋಳ ತೊಡಿಸಿದ್ದಾರೆ. ಪ್ರಕರಣದ ಇನ್ನೋರ್ವ ಆರೋಪಿಗಾಗಿ ಶೋಧ ಮುಂದುವರೆಸಿದ್ದಾರೆ.

ಹಣಕಾಸಿನ ವ್ಯವಹಾರಕ್ಕೆ ನಡೆದಿತ್ತು ಫೈರಿಂಗ್..! ಅಬ್ದುಲ್ ಖಾದರ್ ಕಲ್ಲುಕ್ವಾರಿ ಮಾಲೀಕ. ಹಸನ್ ಸಾಧಿಕ್, ಅಬ್ದುಲ್ ಖಾದರ್ ಮಧ್ಯೆ ಹಣದ ವ್ಯವಹಾರ ಇತ್ತಂತೆ. ಹೀಗಾಗಿ ಇಬ್ಬರ ನಡುವೆ ಆಗಾಗ ಗಲಾಟೆ ಆಗ್ತಿತ್ತಂತೆ. ಇದೇ ವಿಚಾರವಾಗಿ 2 ವರ್ಷದ ಹಿಂದಷ್ಟೇ ಕೇಸ್ ಪುತ್ತೂರು ನಗರಠಾಣೆ ಮೆಟ್ಟಿಲೇರಿತ್ತು. ಆಗ ಹಸನ ಸಾಧಿಕ್ ಅರೆಸ್ಟ್ ಆಗಿ ಕೆಲ ತಿಂಗಳ ಕಾಲ ಜೈಲುವಾಸ ಕೂಡ ಅನುಭವಿಸಿದ್ದ.

ಇದ್ರಿಂದ ಕೋಪಗೊಂಡಿದ್ದ ಹಸನ್, ಹೇಗಾದ್ರೂ ಮಾಡಿ ಅಬ್ದುಲ್ ಖಾದರ್​ನನ್ನು ಮುಗಿಸಬೇಕೆಂದು ಸ್ಕೆಚ್ ಹಾಕಿದ್ದ. ಅದ್ರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ನವೆಂಬರ್ 27ರಂದು ಮನೆಯಲ್ಲಿದ್ದ ಖಾದರ್ ಮೇಲೆ ಗುಂಡು ಹಾರಿಸಿದ್ದನಂತೆ.ಸದ್ಯ, ಗುಂಡಿನ ದಾಳಿಗೆ ಒಳಗಾಗಿರೋ ಖಾದರ್ ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೊಂದ್ಕಡೆ, ಆರೋಪಿಗಳನ್ನು ಬಂಧಿಸಿರೋ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ. ತಲೆಮರೆಸಿಕೊಂಡಿರೋ ಮತ್ತೋರ್ವ ಆರೋಪಿಗಾಗಿ ಖಾಕಿ ಶೋಧ ನಡೆಸಿದೆ.

Published On - 1:26 pm, Tue, 3 December 19

ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಈ ದಿನದ ವಿಶೇಷವೇನು? ನಿಮ್ಮ ರಾಶಿ ಭವಿಷ್ಯವೇನು? ಇಲ್ಲಿದೆ ನೋಡಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸೂಕ್ತ ವ್ಯವಸ್ಥೆ: ಪ್ರಲ್ಹಾದ್ ಜೋಶಿ
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​