Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಿಯತಮನೇ ದರೋಡೆ ಮಾಡಿದ್ದ, ತಿಳಿಯದೆ ಗರ್ಲ್​ಫ್ರೆಂಡೇ ದೂರು ನೀಡಿದ್ದಳು!

ತನ್ನ ಗರ್ಲ್ ಫ್ರೆಂಡ್​ನ ಸ್ನೇಹಿತೆಯ ಬಾಯ್ ಫ್ರೆಂಡ್ ತಂದಿದ್ದ ಚಿನ್ನಾಭರಣಕ್ಕೆ ಬಾಯಿಬಿಟ್ಟ ಖದೀಮ ಆತ ತಂದಿದ್ದ ಚಿನ್ನಾಭರಣವನ್ನು ದೋಚಿ ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತನ್ನ ಲವರ್ ಸ್ನೇಹಿತೆಯ ಬಾಯ್ ಫ್ರೆಂಡ್​ಗೆ ಹೆದರಿಸಿ ಚಿನ್ನಾಭರಣ ದೋಚಿದ್ದು ಸ್ನೇಹಿತೆ ಜೊತೆಗೆ ಆಗಮಿಸಿ ತನ್ನ ಬಾಯ್ ಫ್ರೆಂಡ್ ವಿರುದ್ಧವೇ ಯುವತಿ ದೂರು ನೀಡಿದ್ದಾಳೆ.

ಪ್ರಿಯತಮನೇ ದರೋಡೆ ಮಾಡಿದ್ದ, ತಿಳಿಯದೆ ಗರ್ಲ್​ಫ್ರೆಂಡೇ ದೂರು ನೀಡಿದ್ದಳು!
ಚಂದ್ರಲೇಔಟ್ ಪೊಲೀಸರು ವಶಕ್ಕೆ ಪಡೆದುಕೊಂಡ ಚಿನ್ನಾಭರಣ
Follow us
ಆಯೇಷಾ ಬಾನು
| Updated By: Praveen Sahu

Updated on:Mar 23, 2021 | 12:40 PM

ಬೆಂಗಳೂರು: ತನ್ನ ಗರ್ಲ್ ಫ್ರೆಂಡ್​ನ ಸ್ನೇಹಿತೆಯ ಬಾಯ್ ಫ್ರೆಂಡ್ ತಂದಿದ್ದ ಚಿನ್ನಾಭರಣಕ್ಕೆ ಬಾಯಿಬಿಟ್ಟ ಖದೀಮ ಆತ ತಂದಿದ್ದ ಚಿನ್ನಾಭರಣವನ್ನು ದೋಚಿ ಜೈಲು ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತನ್ನ ಲವರ್ ಸ್ನೇಹಿತೆಯ ಬಾಯ್ ಫ್ರೆಂಡ್​ಗೆ ಹೆದರಿಸಿ ಚಿನ್ನಾಭರಣ ದೋಚಿದ್ದಾನೆ. ಆದರೆ ಸ್ನೇಹಿತೆಯ ಜೊತೆಗೆ ಆಗಮಿಸಿದ ಯುವತಿ.. ತನ್ನ ಬಾಯ್ ಫ್ರೆಂಡ್ ವಿರುದ್ಧ ದೂರು ನೀಡಿ, ಸ್ನೇಹಿತೆಗೆ ನ್ಯಾಯ ಒದಗಿಸಿದ್ದಾಳೆ.

ಈ ಸಂಬಂಧ ಜಾಕಿರ್ ಹುಸೇನ್ (30), ಶಾಬಾಜ್ ಖಾನ್(25), ಫಾಜಿಲ್ (23) ಸೇರಿ ಮೂವರನ್ನು ಚಂದ್ರ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 3 ಲಕ್ಷ ಬೆಲೆಬಾಳುವ 102.3 ಗ್ರಾಂ ಚಿನ್ನಾಭರಣ, ಒಂದು ಆ್ಯಕ್ಸಿಸ್ ಬೈಕ್ ವಶಕ್ಕೆ ಪಡೆಯಲಾಗಿದೆ. ಇದೇ ತಿಂಗಳ 13 ರಂದು ಚಂದ್ರ ಲೇಔಟ್​ನ ಭೈರವೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.

ಘಟನೆ ವಿವರ: ಮಾಯಿ ಮತ್ತು ಆಕೆಯ ಬಾಯ್ ಫ್ರೆಂಡ್ ಆರೋಪಿ ಜಾಕಿರ್ ಹುಸೇನ್ ಇಬ್ಬರೂ ಮಾಯಿಯ ಸ್ನೇಹಿತೆ ನಯನಾಳನ್ನು ಭೇಟಿ ಮಾಡಿ ಅವಳ ಜೊತೆ ಕಾಲಕಳೆಯುತ್ತಿರುತ್ತಾರೆ. ಈ ವೇಳೆ ನಗರ್ತ ಪೇಟೆಯ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ, ಪಶ್ಚಿಮ ಬಂಗಾಳ ಮೂಲದ ಸಪನ್ ಮಿಥ್ಯ ಎಂಬ ಯುವಕ ತನ್ನ ಪ್ರೇಯಸಿಯನ್ನು ಭೇಟಿ ಮಾಡಲು ಬಂದಿರುತ್ತಾನೆ.

ಪಶ್ಚಿಮ ಬಂಗಾಳ ಚುನಾವಣೆಗೆ ಹೋಗೊ ಮುನ್ನ ತನ್ನ ಪ್ರೀತಿಯ ಪ್ರೇಯಸಿ ನಯನಾಳ ಭೇಟಿಗೆ ಬಂದ ಸಪನ್, 3 ಲಕ್ಷ ಮೌಲ್ಯದ 2 ನೆಕ್ಲೆಸ್ ಮತ್ತು ಒಂದು ಬ್ರೇಸ್ ಲೆಟ್ ಕೂಡ ತಂದಿದ್ದ. ಇದನ್ನು ಗಮನಿಸಿದ ಮಾಯಿ ಬಾಯ್ ಫ್ರೆಂಡ್ ಜಾಕಿರ್ ಹುಸೇನ್ ತನ್ನ ಇಬ್ಬರು ಸ್ನೇಹಿತರ ಜೊತೆ ಹೋಗಿ ಸಪನ್​ಗೆ ಬೆದರಿಸಿ ಅವನ ಬಳಿ ಇದ್ದ ಚಿನ್ನಾಭರಣ, ಹಣ ಕಿತ್ತು ಪರಾರಿಯಾಗಿದ್ದ. ಇದ್ಯಾವುದೂ ತಿಳಿಯದ, ಗಮನಿಸಿ.. ಇದ್ಯಾವುದೂ ತಿಳಿಯದ ಮಾಯಿ ತನ್ನ ಸ್ನೇಹಿತೆ ನಯನ ಜೊತೆಗೆ ಬಂದು ಚಂದ್ರ ಲೇಔಟ್ ಠಾಣೆಯಲ್ಲಿ ದರೋಡೆ ಸಂಬಂಧ ದೂರು ದಾಖಲಿಸುತ್ತಾರೆ. ಬಳಿಕ ತನಿಖೆಗೆ ಇಳಿದ ಚಂದ್ರ ಲೇಔಟ್ ಠಾಣೆ ಪೊಲೀಸರು ಜಾಕೀರ್ ಹುಸೇನ್ ಸೇರಿ ಮೂವರನ್ನು ಬಂಧಿಸಿದ್ದಾರೆ….

bengaluru robbery

ಶಾಬಾಜ್ ಖಾನ್, ಜಾಕಿರ್ ಹುಸೇನ್, ಫಾಜಿಲ್

ಇದನ್ನೂ ಓದಿ: ಬಾಗಲಗುಂಟೆ ಠಾಣೆ ಪೊಲೀಸರ ಕಾರ್ಯಾಚರಣೆ ಯಶಸ್ವಿ; ಇಬ್ಬರು ದರೋಡೆಕೋರರ ಬಂಧನ

Published On - 12:25 pm, Tue, 23 March 21

ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ಪಕ್ಷದ ಸಂಘಟನೆ ವಿಜಯೇಂದ್ರ ನೇತೃತ್ವದಲ್ಲಿ ನಮ್ಮಆದ್ಯತೆಯಾಗಿದೆ: ಶ್ರೀರಾಮುಲು
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ದೇಗುಲದ ಭಕ್ತಿಗೀತೆ ಸೌಂಡ್ ಕಡಿಮೆ ಮಾಡುವಂತೆ ಮುಸ್ಲಿಂ ಯುವಕರಿಂದ ಅವಾಜ್
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ನೋಯ್ಡಾದಲ್ಲಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ರಾಜ್ಯ ಘಟಕವನ್ನು ಯಡಿಯೂರಪ್ಪ ಕುಟುಂಬಕ್ಕೆ ಲೀಸ್​ಗೆ ನೀಡಿರುವಂತಿದೆ:ಯತ್ನಾಳ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ನಿವೃತ್ತಿ ಪ್ಲಾನ್ ಘೋಷಿಸಲು ಮೋದಿ ಆರ್‌ಎಸ್‌ಎಸ್ ಕಚೇರಿಗೆ ಭೇಟಿ;ಸಂಜಯ್ ರಾವತ್
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಮೊದಲ ಬಾರಿ ಶಾಸಕನಾದಾಗಿನಿಂದ ನಾನು ಪಕ್ಷದ ಶಿಸ್ತಿನ ಸಿಪಾಯಿ: ತುಕಾರಾಂ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ