AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಸಕನ ಮಗನೆಂದು ನಂಬಿಸಿ, ರೇಪ್​ ಮಾಡ್ತಿದ್ದ ಎಂಬಿಎ ಪದವೀಧರ ಸಿಕ್ಕಿಬಿದ್ದ

ಬೆಂಗಳೂರು: ಶಾಸಕನ ಮಗ ಎಂದು ಹೆದರಿಸಿ ರೇಪ್ ಮಾಡಿದ್ದ ಆರೋಪಿಯನ್ನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಅರೋಪಿ. ಈತ ತಮಿಳುನಾಡಿನ ತಿರುಚ್ಚಿ ಮೂಲದ ಎಂಬಿಎ ಪದವೀಧರ. ಇವನ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ 6 ಪ್ರಕರಣಗಳು ತಮಿಳುನಾಡು, ಕರ್ನಾಟಕದಲ್ಲಿ ದಾಖಲಾಗಿವೆ. ಈತ ಪ್ರತಿಷ್ಠಿತ ಮಾಲ್, ಹೋಟೆಲ್​ಗಳಲ್ಲಿ ಯುವತಿಯರನ್ನು ಭೇಟಿ ಮಾಡಿ, ತಾನು ಮಾಲ್ ಮ್ಯಾನೇಜರ್, ಎಂ.ಡಿ. ಎಂದು ಹೇಳಿ ಪರಿಚಯ ಮಾಡಿಕೊಳ್ಳುತಿದ್ದ. ಬಳಿಕ ಯುವತಿಯರ ಹಿನ್ನೆಲೆ ತಿಳಿದು […]

ಶಾಸಕನ ಮಗನೆಂದು ನಂಬಿಸಿ, ರೇಪ್​ ಮಾಡ್ತಿದ್ದ ಎಂಬಿಎ ಪದವೀಧರ ಸಿಕ್ಕಿಬಿದ್ದ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Nov 22, 2019 | 2:39 PM

Share

ಬೆಂಗಳೂರು: ಶಾಸಕನ ಮಗ ಎಂದು ಹೆದರಿಸಿ ರೇಪ್ ಮಾಡಿದ್ದ ಆರೋಪಿಯನ್ನ ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಹಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಅರೋಪಿ. ಈತ ತಮಿಳುನಾಡಿನ ತಿರುಚ್ಚಿ ಮೂಲದ ಎಂಬಿಎ ಪದವೀಧರ. ಇವನ ವಿರುದ್ದ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ 6 ಪ್ರಕರಣಗಳು ತಮಿಳುನಾಡು, ಕರ್ನಾಟಕದಲ್ಲಿ ದಾಖಲಾಗಿವೆ.

ಈತ ಪ್ರತಿಷ್ಠಿತ ಮಾಲ್, ಹೋಟೆಲ್​ಗಳಲ್ಲಿ ಯುವತಿಯರನ್ನು ಭೇಟಿ ಮಾಡಿ, ತಾನು ಮಾಲ್ ಮ್ಯಾನೇಜರ್, ಎಂ.ಡಿ. ಎಂದು ಹೇಳಿ ಪರಿಚಯ ಮಾಡಿಕೊಳ್ಳುತಿದ್ದ. ಬಳಿಕ ಯುವತಿಯರ ಹಿನ್ನೆಲೆ ತಿಳಿದು ಕೆಲಸ ಕೊಡಿಸುವ ಆಫರ್ ನೀಡಿ, ಹಂತ ಹಂತವಾಗಿ ಯುವತಿಯರನ್ನು ತನ್ನತ್ತ ಸೆಳೆದು ಕೆಲಸ ಕೊಡಿಸುವುದಾಗಿ ನಂಬಿಸುತಿದ್ದ.

ಪ್ರತಿಷ್ಠಿತ ಹೊಟೆಲ್​ಗಳಲ್ಲಿ ಕೆಲಸದ ಸಂದರ್ಶನ ಇದೆ ಎಂದು ಕರೆಸಿಕೊಂಡು, ಹೋಟೆಲ್ ರೂಮ್ ಸೇರಿದ ಬಳಿಕ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ಮಾಡಿ, ಯುವತಿಯರ ಬಳಿ ಇದ್ದ ಮೊಬೈಲ್ ಹಣ ಒಡವೆಗಳನ್ನು ದೋಚಿದ ಬಳಿಕ, ತಾನು ಶಾಸಕನ ಮಗ. ಯಾರ ಬಳಿಯೂ ಈ ವಿಷಯವನ್ನು ಹೇಳಬಾರದು ಎಂದು ಹೆದರಿಸುತ್ತಿದ್ದಎಂದು ಪೊಲೀಸರು ತಿಳಿಸಿದ್ದಾರೆ.

Published On - 9:57 am, Fri, 22 November 19

Follow Us
ಮಗನಿಗೆ ಸಚಿವ ಸ್ಥಾನ ಸಿಕ್ಕಿದ ಖುಷಿಗೆ ಕಣ್ಣೀರಿಟ್ಟ ತಾಯಿ
ಮಗನಿಗೆ ಸಚಿವ ಸ್ಥಾನ ಸಿಕ್ಕಿದ ಖುಷಿಗೆ ಕಣ್ಣೀರಿಟ್ಟ ತಾಯಿ
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
‘ಯಾವುದು ಖಾತೆ ಕೊಟ್ಟರೂ ಕೆಲಸ ಮಾಡುತ್ತೇನೆ’: ಶಿವಲಿಂಗೇಗೌಡ
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
ಆಡಿಯೋ ವೈರಲ್​​ ಬಳಿಕವೂ ಸಿಕ್ಕಿದ ಸಚಿವ ಸ್ಥಾನ: ಜಮೀರ್​​ ಹೇಳಿದ್ದೇನು?
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
‘ಇದು ನಿರಾಶಾದಾಯಕ ಪಟ್ಟಿ’: ತನ್ವೀರ್ ಸೇಠ್ ತೀವ್ರ ಬೇಸರ
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಶೂಟಿಂಗ್ ವೇಳೆ ರಶ್ಮಿಕಾಗೆ ಗಾಯ; ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು?
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಮೂರೇ ದಿನಗಳಲ್ಲಿ ಕೆಆರ್​ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ
‘ಉಪೇಂದ್ರ ಕೂಡ ಚುನಾವಣೆ ಸ್ಪರ್ಧಿಸಬೇಕು’; ಇಂಗಿತ ವ್ಯಕ್ತಪಡಿಸಿದ ಪ್ರಿಯಾಂಕಾ