AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾರಿ ತಪ್ಪಿದ ಪರಸ್ತ್ರೀಯಿಂದ.. ಮಸಣ ಸೇರಿದ ಪ್ರಿಯಕರ

ಹಾಸನ: ಅಕ್ರಮ ಸಂಬಂಧಕ್ಕೆ ಹಾತೊರೆದಿದ್ದ ವಿವಾಹಿತ ಮಹಿಳೆಯಿಂದಾಗಿ ಆಕೆಯ ಪ್ರಿಯಕರ ಅಸುನೀಗಿದ್ದಾನೆ. ಇನ್ನು, ಪತ್ನಿಯ ಹೇಯಕೃತ್ಯಗಳಿಂದ ನೊಂದ ಪತಿರಾಯ, ತನ್ನ ಪತ್ನಿಯ ಪ್ರಿಯಕರನನ್ನು ಕೊಂದು ಜೈಲು ಸೇರಿರುವ ಘಟನೆ ಹಾಸನದ ಗುಡ್ಡೆನಹಳ್ಳಿ ಬಳಿ ನಡೆದಿದೆ. ಗಂಡ ಕಿರಿಕ್​ ಪಾರ್ಟಿ, ಹೆಂಡ್ತಿ ದಾರಿ ತಪ್ಪಿದ್ದಳು, ನಡೆದಿದ್ದು ಕೊಲೆ! ಹಾಸನದ ಗುಡ್ಡೆನಹಳ್ಳಿ ನಿವಾಸಿ ಪ್ರತಾಪ್ 7 ವರ್ಷಗ ಹಿಂದೆ ಹರ್ಷಿತಾಳನ್ನ ಮದುವೆ ಆಗಿದ್ದ. ಪ್ರಾರಂಭದಲ್ಲಿ ಇವರಿಬ್ಬರ ಸಂಸಾರ ಚೆನ್ನಾಗೇ ಇತ್ತು. ಆದರೆ ಕೆಲವು ವರ್ಷಗಳು ಕಳೆದ ನಂತರ ಪ್ರತಾಪ್, ಹರ್ಷಿತಾ […]

ದಾರಿ ತಪ್ಪಿದ ಪರಸ್ತ್ರೀಯಿಂದ.. ಮಸಣ ಸೇರಿದ ಪ್ರಿಯಕರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 16, 2019 | 3:16 PM

Share

ಹಾಸನ: ಅಕ್ರಮ ಸಂಬಂಧಕ್ಕೆ ಹಾತೊರೆದಿದ್ದ ವಿವಾಹಿತ ಮಹಿಳೆಯಿಂದಾಗಿ ಆಕೆಯ ಪ್ರಿಯಕರ ಅಸುನೀಗಿದ್ದಾನೆ. ಇನ್ನು, ಪತ್ನಿಯ ಹೇಯಕೃತ್ಯಗಳಿಂದ ನೊಂದ ಪತಿರಾಯ, ತನ್ನ ಪತ್ನಿಯ ಪ್ರಿಯಕರನನ್ನು ಕೊಂದು ಜೈಲು ಸೇರಿರುವ ಘಟನೆ ಹಾಸನದ ಗುಡ್ಡೆನಹಳ್ಳಿ ಬಳಿ ನಡೆದಿದೆ.

ಗಂಡ ಕಿರಿಕ್​ ಪಾರ್ಟಿ, ಹೆಂಡ್ತಿ ದಾರಿ ತಪ್ಪಿದ್ದಳು, ನಡೆದಿದ್ದು ಕೊಲೆ! ಹಾಸನದ ಗುಡ್ಡೆನಹಳ್ಳಿ ನಿವಾಸಿ ಪ್ರತಾಪ್ 7 ವರ್ಷಗ ಹಿಂದೆ ಹರ್ಷಿತಾಳನ್ನ ಮದುವೆ ಆಗಿದ್ದ. ಪ್ರಾರಂಭದಲ್ಲಿ ಇವರಿಬ್ಬರ ಸಂಸಾರ ಚೆನ್ನಾಗೇ ಇತ್ತು. ಆದರೆ ಕೆಲವು ವರ್ಷಗಳು ಕಳೆದ ನಂತರ ಪ್ರತಾಪ್, ಹರ್ಷಿತಾ ಕೈಗೆ ಮಗುವೊಂದು ಕೊಟ್ಟು, ನಾಪತ್ತೆಯಾಗಿದ್ದ. ಆದರೆ ಆಗೊಮ್ಮೆ ಈಗೊಮ್ಮೆ ಮಾತ್ರ ಬಂದು ಹೋಗುತ್ತಿದ್ದ. ಇದ್ರಿಂದ ಹರ್ಷಿತಾಗೆ ಜೀವನ ಸಾಕು ಸಾಕಾಗಿತ್ತು. ಪ್ರತಾಪ್​ನನ್ನ ಮದುವೆ ಆಗಿ ತಪ್ಪು ಮಾಡಿಬಿಟ್ಟೆ ಅಂತಾ ಕೊರಗ್ತಿದ್ಲು. ಈ ನಡುವೆ ಆಕೆಗೆ ಕೃಷ್ಣ ಎಂಬವನ ಜೊತೆ ಸ್ನೇಹ ಕುದುರಿತ್ತು.

ಒಂದು ಮಗು ಇದ್ದರೂ ದಾರಿ ತಪ್ಪಿದ ಸುಂದರಿ ತನ್ನ ಮನೆ ಸಮೀಪವೇ ಇದ್ದ ಕೃಷ್ಣನ ಸ್ನೇಹ ಸಂಬಂಧ, ಮುಂದಿನ ದಿನಗಳಲ್ಲಿ ಸ್ನೇಹವನ್ನೂ ಮೀರಿದ್ದಾಗಿ ಮುಂದುವರಿಯುತ್ತೆ. ಈ ವಿಚಾರ ಹರ್ಷಿತಾಳ ಗಂಡ ಪ್ರತಾಪ್​ಗೆ ಗೊತ್ತಾಗುತ್ತೆ. ಈ ವೇಳೆ ಪತ್ನಿ ಹಾಗೂ ಆಕೆಯ ಪ್ರಿಯತಮ ಕೃಷ್ಣಗೆ ವಾರ್ನಿಂಗ್ ಕೊಡುತ್ತಾನೆ.

ಇದ್ರಿಂದ ಬೆದರಿದ ಹರ್ಷಿತಾ ಮನೆ ಖಾಲಿ ಮಾಡಿ ವಿಜಯನಗರ ಬಡಾವಣೆಗೆ ಹೋಗ್ತಾಳೆ. ಅಲ್ಲಿ ಸುಳ್ಳು ಹೇಳಿ, ಬಾಡಿಗೆ ಮನೆ ಮಾಡಿ ಕೃಷ್ಣನ ಜೊತೆ ಸೇರುತ್ತಾಳೆ. ಆದ್ರೆ, ಭಾನುವಾರ  ಆ ಮನೆಗೆ ದಿಢೀರನೆ ಬಂದ ಪ್ರತಾಪ, ಕೃಷ್ಣ ಹಾಗೂ ಹರ್ಷಿತಾ ಜೊತೆ ಇರುವುದನ್ನ ಕಂಡಿದ್ದಾನೆ. ಇದ್ರಿಂದ ಕೆರಳಿದ ಪ್ರತಾಪ್, ಕೃಷ್ಣನನ್ನ ಕೊಚ್ಚಿ ಕೊಂದು, ಮಡದಿ ಜೊತೆಗೆ ಎಸ್ಕೇಪ್ ಆಗಿದ್ದ. ತನಿಖೆ ನಡೆಸಿದ ಪೊಲೀಸರು ಪ್ರತಾಪ್​ನನ್ನ ಈಗ ಬಂಧಿಸಿದ್ದಾರೆ.

Published On - 9:07 am, Wed, 16 October 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ