
ಶಿವಮೊಗ್ಗ: ಅತ್ತಿಗೆಯ ಜೊತೆ ಅನೈತಿಕ ಸಂಬಂಧ ಆರೋಪ ಕೇಳಿಬಂದಿದ್ದು, ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. 43 ವರ್ಷದ ಮಂಜಪ್ಪ ಎಂಬಾತನನ್ನು ಹತ್ಯೆಗೈದು ಆರೋಪಿ ಆಂಜನೇಯ ಪರಾರಿಯಾಗಿದ್ದಾನೆ.
ಆಂಜನೇಯನ ಅತ್ತಿಗೆಯೊಂದಿಗೆ ಮಂಜಪ್ಪ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಶಿವಮೊಗ್ಗ ತಾಲೂಕಿನ ದೊಡ್ಡಮಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 2:12 pm, Tue, 19 November 19