ಕೆಜಿಎಫ್​: ಜನರ ಬಳಿ ಹಣ ದೋಚುತ್ತಿದ್ದ ಸುಲಿಗೆಕೋರರು ಅರೆಸ್ಟ್​

ಕೋಲಾರ: ಕೆಜಿಎಫ್ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಜನರ ಬಳಿ ದರೋಡೆ ಮಾಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಬಂಧಿಸಿದ್ದಾರೆ. ಜೆ.ರೂಬಿ ಟೈಸನ್, ಎಲ್.ರಾಜೇಶ್ ಬೆಲ್ಲ, ಎಂ.ಪ್ರಕಾಶ್, ಎಂ.ಆಂಥೋಣಿ ಸೀನು ಬಂಧಿತ ಸುಲಿಗೆಕೋರರು. ಕೋಲಾರ, ಮಾಲೂರು, ಕೆಜಿಎಫ್ ಸೇರಿದಂತೆ ಹಲವೆಡೆ ಆರೋಪಿಗಳು ಜನರ ಬಳಿ ಸುಲಿಗೆ ಮಾಡುತ್ತಿದ್ದರು. ಕೆಜಿಎಫ್ ಎಸ್​ಪಿ ಎಂ.ಎಸ್. ಮೊಹಮ್ಮದ್ ಸುಜೀತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2 ಮೊಬೈಲ್, 8,700 ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.

ಕೆಜಿಎಫ್​: ಜನರ ಬಳಿ ಹಣ ದೋಚುತ್ತಿದ್ದ ಸುಲಿಗೆಕೋರರು ಅರೆಸ್ಟ್​

Updated on: May 02, 2020 | 9:44 AM

ಕೋಲಾರ: ಕೆಜಿಎಫ್ ಅಪರಾಧ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಜನರ ಬಳಿ ದರೋಡೆ ಮಾಡುತ್ತಿದ್ದ ನಾಲ್ವರು ಸುಲಿಗೆಕೋರರನ್ನು ಬಂಧಿಸಿದ್ದಾರೆ. ಜೆ.ರೂಬಿ ಟೈಸನ್, ಎಲ್.ರಾಜೇಶ್ ಬೆಲ್ಲ, ಎಂ.ಪ್ರಕಾಶ್, ಎಂ.ಆಂಥೋಣಿ ಸೀನು ಬಂಧಿತ ಸುಲಿಗೆಕೋರರು.

ಕೋಲಾರ, ಮಾಲೂರು, ಕೆಜಿಎಫ್ ಸೇರಿದಂತೆ ಹಲವೆಡೆ ಆರೋಪಿಗಳು ಜನರ ಬಳಿ ಸುಲಿಗೆ ಮಾಡುತ್ತಿದ್ದರು. ಕೆಜಿಎಫ್ ಎಸ್​ಪಿ ಎಂ.ಎಸ್. ಮೊಹಮ್ಮದ್ ಸುಜೀತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2 ಮೊಬೈಲ್, 8,700 ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.