AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯನಿಂದ ಪತ್ನಿ ಕೊಲೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್​: ಆರೋಪಿ ಡಾಕ್ಟರ್​ಗಿತ್ತು ಮತ್ತೊಬ್ಬಳ ಸ್ನೇಹ

ವೈದ್ಯನಿಂದ ಪತ್ನಿ ಕೊಲೆ ಕೇಸ್​ಗೆ ಸ್ಫೋಟಕ ಟ್ವಿಸ್ಟ್​: ಆರೋಪಿ ಡಾಕ್ಟರ್​ಗಿತ್ತು ಮತ್ತೊಬ್ಬಳ ಸ್ನೇಹ

ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ಪ್ರಸನ್ನ ಹೆಗಡೆ|

Updated on: Oct 15, 2025 | 5:40 PM

Share

ಬೆಂಗಳೂರಲ್ಲಿ ವೈದ್ಯನೇ ಪತಿಯನ್ನ ಕೊಂದಿದ್ದ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮತ್ತೊಬ್ಬ ವೈದ್ಯೆ ಜೊತೆ ಆರೋಪಿಗೆ ಗೆಳೆತನ ಇತ್ತು ಎಂಬ ವಿಷಯ ತನಿಖೆವೇಳೆ ಗೊತ್ತಾಗಿದ್ದು, ಕೊಲೆಯಲ್ಲಿ ವೈದ್ಯನ ಗೆಳತಿಯ ಪಾತ್ರದ ಬಗ್ಗೆಯೂ ಪರಿಶೀಲನೆ ನಸಡೆಸಲಾಗುತ್ತಿದೆ. ಕೊಲೆಗೆ ಪತ್ನಿಯ ಅನಾರೋಗ್ಯವೇ ನಿಜವಾದ ಕಾರಣವಾ ಅಥವಾ ಬೇರೆ ಕಾರಣ ಇತ್ತಾ ಎಂಬ ಬಗ್ಗೆ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು, ಅಕ್ಟೋಬರ್​ 15: ವೈದ್ಯ ಡಾ.ಮಹೇಂದ್ರರೆಡ್ಡಿಯಿಂದ ಪತ್ನಿ ಡಾ.ಕೃತಿಕಾರೆಡ್ಡಿ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪತ್ನಿಗೆ ಅನಾರೋಗ್ಯ ಹಿನ್ನಲೆ ಇಂಜೆಕ್ಷನ್​ ನೀಡಿ ವೈದ್ಯ ಪತಿಯೇ ಕೊಲೆ ಮಾಡಿದ್ದಾನೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ  ಮತ್ತೊಬ್ಬಳು ವೈದ್ಯೆ ಜೊತೆ ಆರೋಪಿ ಡಾ.ಮಹೇಂದ್ರರೆಡ್ಡಿಗೆ ಗೆಳೆತನ ಇತ್ತು. ಹೀಗಾಗಿ ಆತ ಕೃತಿಕಾಗೆ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ ತಿಳಿದುಬಂದಿದೆ. ಹೀಗಾಗಿ ಕೃತಿಕಾ ಕೊಲೆಗೆ ಅನಾರೋಗ್ಯವೇ ನಿಜವಾದ ಕಾರಣವಾ ಅಥವಾ ಬೇರೆ ಕಾರಣ ಇತ್ತಾ ಎಂಬ ಬಗ್ಗೆ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಕೊಲೆಯಲ್ಲಿ ಮಹೇಂದ್ರರೆಡ್ಡಿ ಗೆಳತಿಯ ಪಾತ್ರದ ಬಗ್ಗೆಯೂ ಪರಿಶೀಲನೆ ನಸಡೆಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.