AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾದರಾಯನಪುರ ಗೂಂಡಾಗಿರಿ: ವೈದ್ಯರು, ಪೊಲೀಸ್ರನ್ನ ಸಾಯಿಸಲು ನಡೆದಿತ್ತಾ ಷಡ್ಯಂತ್ರ?

ಬೆಂಗಳೂರು: ಪಾದರಾಯನಪುರದಲ್ಲಿ ನಿನ್ನೆ ವೈದ್ಯರನ್ನು, ಪೊಲೀಸರನ್ನು ಸಾಯಿಸಲು ನಡೆದಿತ್ತಾ ಷಡ್ಯಂತ್ರ..? ದಾಂಧಲೆ ಹೆಸರಲ್ಲಿ ನಡೆಯಲಿತ್ತಾ ರಕ್ತದೋಕುಳಿ..? ಪುಂಡಾಟಕ್ಕೂ ಮುನ್ನ ರೆಡಿಯಾಗಿತ್ತಾ ಹತ್ಯೆಯ ಬಿಗ್ ಸ್ಕೆಚ್..? ಇಂಥದ್ದೊಂದು ಆಘಾತಕಾರಿ ವಿಚಾರ ಹೊರಬಂದಿದೆ. ಪೊಲೀಸ್ ಅಧಿಕಾರಿಯ ದೂರಿನನ್ವಯ FIR ದಾಖಲಾಗಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸುವಂತಾ ಮಾಹಿತಿ ಲಭ್ಯವಾಗಿದೆ. ಸಂಜೆ 6.30ರ ಸುಮಾರಿಗೆ ಸೀಲ್‌ಡೌನ್‌ ಭದ್ರತೆ ಕಾರ್ಯದಲ್ಲಿದ್ದೆವು. ಬಿಬಿಎಂಪಿ ವೈದ್ಯಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದರು. ಸುಮಾರು 58 ಮಂದಿಯನ್ನ ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ರು. ಮೊದಲು 15 ಜನರಿಗೆ ವಿಷಯ ತಿಳಿಸಿ […]

ಪಾದರಾಯನಪುರ ಗೂಂಡಾಗಿರಿ: ವೈದ್ಯರು, ಪೊಲೀಸ್ರನ್ನ ಸಾಯಿಸಲು ನಡೆದಿತ್ತಾ ಷಡ್ಯಂತ್ರ?
ಸಾಧು ಶ್ರೀನಾಥ್​
|

Updated on:Apr 20, 2020 | 5:48 PM

Share

ಬೆಂಗಳೂರು: ಪಾದರಾಯನಪುರದಲ್ಲಿ ನಿನ್ನೆ ವೈದ್ಯರನ್ನು, ಪೊಲೀಸರನ್ನು ಸಾಯಿಸಲು ನಡೆದಿತ್ತಾ ಷಡ್ಯಂತ್ರ..? ದಾಂಧಲೆ ಹೆಸರಲ್ಲಿ ನಡೆಯಲಿತ್ತಾ ರಕ್ತದೋಕುಳಿ..? ಪುಂಡಾಟಕ್ಕೂ ಮುನ್ನ ರೆಡಿಯಾಗಿತ್ತಾ ಹತ್ಯೆಯ ಬಿಗ್ ಸ್ಕೆಚ್..? ಇಂಥದ್ದೊಂದು ಆಘಾತಕಾರಿ ವಿಚಾರ ಹೊರಬಂದಿದೆ.

ಪೊಲೀಸ್ ಅಧಿಕಾರಿಯ ದೂರಿನನ್ವಯ FIR ದಾಖಲಾಗಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸುವಂತಾ ಮಾಹಿತಿ ಲಭ್ಯವಾಗಿದೆ. ಸಂಜೆ 6.30ರ ಸುಮಾರಿಗೆ ಸೀಲ್‌ಡೌನ್‌ ಭದ್ರತೆ ಕಾರ್ಯದಲ್ಲಿದ್ದೆವು. ಬಿಬಿಎಂಪಿ ವೈದ್ಯಾಧಿಕಾರಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದರು. ಸುಮಾರು 58 ಮಂದಿಯನ್ನ ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ರು. ಮೊದಲು 15 ಜನರಿಗೆ ವಿಷಯ ತಿಳಿಸಿ ಕ್ವಾರಂಟೈನ್‌ಗೆ ಕಳುಹಿಸಲಾಗಿತ್ತು.

ಇನ್ನುಳಿದ 43 ಜನರನ್ನ ಕ್ವಾರಂಟೈನ್‌ಗೆ ಕಳಿಸುವ ಸಮಯದಲ್ಲಿ ಗಲಾಟೆಯಾಗಿದೆ. ಸ್ಥಳಕ್ಕೆ ಬಂದ ಕೆಲವರು ಜನರನ್ನ ಏಕೆ ಕರೆದುಕೊಂಡು ಹೋಗ್ತಿದ್ದೀರಿ, ಇಲ್ಲೇ ಪರೀಕ್ಷೆ ಮಾಡಿ ಎಂದು ಗಲಾಟೆ ಮಾಡಲು ಮುಂದಾಗಿದ್ದರು. ವೈದ್ಯಾಧಿಕಾರಿಗಳು ಕ್ವಾರಂಟೈನ್‌ನ ಉದ್ದೇಶ ತಿಳಿಸಲು ಮುಂದಾದ್ರು. ಆದ್ರೆ, ಈ ವೇಳೆ ವಾಜಿದ್, ಇರ್ಫಾನ್, ಕಬೀರ್‌, ಇರ್ಷದ್ ಅಹ್ಮದ್, ಜಕ್ರಿಯಾ ಅಹಮದ್, ಫರ್ಜೂವಾ ಎಂಬುವವರು ಗಲಾಟೆ ಆರಂಭಿಸಿದ್ರು.

ಕೈಯಲ್ಲಿ ದೊಣ್ಣೆ, ಕಲ್ಲುಗಳನ್ನ ಹಿಡಿದುಕೊಂಡು ಬಂದಿದ್ರು: ಕೈಯಲ್ಲಿ ಕಲ್ಲುಗಳನ್ನ ಹಿಡಿದಿದ್ರು, ಕಬೀರ್‌ ಎಂಬಾತ ಚಾಕು ಹಿಡಿದಿದ್ದ. 50ರಿಂದ 60 ಯುವಕರು ದೊಣ್ಣೆ, ಕಲ್ಲುಗಳನ್ನ ಹಿಡಿದು ಬಂದಿದ್ದರು. ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೈಗಳಿಂದ ಹೊಡೆದು, ನನ್ನನ್ನು ತಳ್ಳಿದ್ದರು. ರಾತ್ರಿ ಸುಮಾರು 7.10ರ ವೇಳೆಗೆ ಬೀದಿ ದೀಪಗಳಿಗೆ ಕಲ್ಲು ಹೊಡೆದ್ರು. ಬೀದಿ ದೀಪಗಳನ್ನ ಒಡೆದು ಹಾಕಿ ನಮ್ಮ ಮೇಲೂ ಕಲ್ಲುಗಳನ್ನ ಎಸೆದರು. ಸೀಲ್‌ಡೌನ್‌ಗಾಗಿ ಕರ್ತವ್ಯ ನಿರ್ವಹಿಸಲು ಬ್ಯಾರಿಕೇಡ್‌ ಕಿತ್ತು ಬಿಸಾಕಿದ್ರು.

ನಂತರ 11ನೇ ಕ್ರಾಸ್‌ನ ಚೆಕ್‌ಪೋಸ್ಟ್‌ ಕಡೆಗೆ ಕೂಗುತ್ತಾ ನುಗ್ಗಿದ್ದರು. ವೈದ್ಯರನ್ನ, ಪೊಲೀಸರನ್ನ ಸಾಯಿಸದೇ ಬಿಡಬಾರದು, ಹೊಡೆಯಿರಿ ಎಂದು ಕೂಗಾಡುತ್ತಾ ಓಡಿ ಬಂದ್ರು. ಗುಂಪು ಎಸೆದ ಕಲ್ಲುಗಳಿಂದ ನನಗೆ, ಸಿಬ್ಬಂದಿಗೆ ಗಾಯಗಳಾಗಿವೆ. ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ರೂ ಗುಂಪು ಸೇರಿದ್ರು. ಉದ್ದೇಶಪೂರ್ವಕವಾಗಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯ ದೂರಿನನ್ವಯ FIR ದಾಖಲಾಗಿದೆ.

Published On - 3:01 pm, Mon, 20 April 20

ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ರಾಜ್ಯ ಕಾಂಗ್ರೆಸ್​ನಲ್ಲಿ ಸಂಚಲನ: ದಿಢೀರ್​ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಈ ಚಿನ್ನದ ನಿಧಿ ಸರ್ಕಾರಕ್ಕೆ ಸೇರಿದ್ದು, ಇದರ ಮೇಲೆ ಯಾರಿಗೂ ಹಕ್ಕಿಲ್ಲ
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರ ನಿಧಿಯೋ? ಪೂರ್ವಜರ ಆಸ್ತಿಯೋ?
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ
ಇಸ್ರೋದ ಪಿಎಸ್​ಎಲ್​ವಿ-ಸಿ62 ರಾಕೆಟ್​ನಲ್ಲಿ ತಾಂತ್ರಿಕ ದೋಷ