ದ್ವೇಷದಿಂದ ಪಾಯಲ್ ಕೊಲೆ: ಜಿಮ್ ಟ್ರೈನರ್ ಜೇಮ್ಸ್​ಗೆ ಜೀವಾವಧಿ ಜೈಲು

ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್​ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ. ಜೆ.ಪಿ. ನಗರದಲ್ಲಿ 2010 ರ ಡಿಸೆಂಬರ್ ನಲ್ಲಿ ಅಸ್ಸಾಂ ಮೂಲದ ಪಾಯಲ್ ಸುರೇಖಾ ಅವರ ಹತ್ಯೆ ನಡೆದಿತ್ತು. ಜಿಮ್ ಟ್ರೈನರ್ ಜೇಮ್ಸ್ ಕುಮಾರ್ ರಾಯ್ ಮೇಲೆ ಕೊಲೆ ಆರೋಪ […]

ದ್ವೇಷದಿಂದ ಪಾಯಲ್ ಕೊಲೆ: ಜಿಮ್ ಟ್ರೈನರ್ ಜೇಮ್ಸ್​ಗೆ ಜೀವಾವಧಿ ಜೈಲು
ಸಾಧು ಶ್ರೀನಾಥ್​

Updated on: Nov 11, 2019 | 1:08 PM

ಬೆಂಗಳೂರು: ಗಂಡನ ಮೇಲಿನ ದ್ವೇಷಕ್ಕೆ ಟಿಕ್ಕಿ ಪತ್ನಿ ಪಾಯಲ್ ಸುರೇಖಾ ಅವರನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇಮ್ಸ್ ಕುಮಾರ್ ರಾಯ್ ಅಪರಾಧಿ ಎಂದು ಬೆಂಗಳೂರಿನ ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಅಪರಾಧಿ ಜೇಮ್ಸ್​ಗೆ ಜೀವಾವಧಿ ಜೈಲು ಶಿಕ್ಷೆ ಮತ್ತು 1 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದೆ.

ಜೆ.ಪಿ. ನಗರದಲ್ಲಿ 2010 ರ ಡಿಸೆಂಬರ್ ನಲ್ಲಿ ಅಸ್ಸಾಂ ಮೂಲದ ಪಾಯಲ್ ಸುರೇಖಾ ಅವರ ಹತ್ಯೆ ನಡೆದಿತ್ತು. ಜಿಮ್ ಟ್ರೈನರ್ ಜೇಮ್ಸ್ ಕುಮಾರ್ ರಾಯ್ ಮೇಲೆ ಕೊಲೆ ಆರೋಪ ಕೇಳಿಬಂದಿತ್ತು. ಪ್ರಕರಣದ ಕುರಿತು ಬೆಂಗಳೂರಿನ ಸಿಬಿಐ ಕೋರ್ಟ್ ಇಂದು ತೀರ್ಪು ನೀಡಿದೆ. ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿತ್ತು.

ಪತಿ ಮೇಲಿನ ದ್ವೇಷಕ್ಕೆ ಪಾಯಲ್ ಸುರೇಖಾ ಅವರನ್ನ ಜಿಮ್ ಟ್ರೈನರ್ ಜೇಮ್ಸ್ ಕೊಲೆ ಮಾಡಿದ್ದ ಎಂಬ ಆರೋಪದ ಮೇಲೆ ಅಂದಿನ ಇನ್ಸ್ ಪೆಕ್ಟರ್ ಕೆ. ಉಮೇಶ್ ನೇತೃತ್ವದ ತಂಡ ಆರೋಪಿಯನ್ನ ಬಂಧಿಸಿತ್ತು.

ಆರೋಪಿಯೇ ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ. ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಸಿಬಿಐ ಕೂಡಾ ಜೇಮ್ಸ್ ವಿರುದ್ಧವೇ ಆರೋಪಪಟ್ಟಿ ದಾಖಲಿಸಿತ್ತು. ಸಿಬಿಐ ಪರ ಎಸ್ ಪಿಪಿ ಶಿವಾನಂದ ಪೆರ್ಲ ವಾದಿಸಿದ್ದರು.

ಪ್ರಕರಣದ ವೃತ್ತಾಂತ:

ಜೆಪಿ ನಗರದಲ್ಲಿ 2010ರ ಡಿಸೆಂಬರ್ ನಲ್ಲಿ ನಡೆದಿದ್ದ ಕೊಲೆ ಇಡೀ ಬೆಂಗಳೂರನ್ನೇ ತಲ್ಲಣಗೊಳಿಸಿದ್ದ ಕೊಲೆ ಪ್ರಕರಣಬೆಂಗಳೂರು ಪೊಲೀಸರಿಂದ ಆರೋಪಿ ಜೆಮ್ಸ್​ನ ಬಂಧನಅಂದಿನ ಇನ್ಸ್​ಪೆಕ್ಟರ್​ ಎಸ್​.ಕೆ.ಉಮೇಶ್​ ಬಂಧಿಸಿದ್ದರು. ಆದ್ರೆ ಆರೋಪಿ ಆತ ಅಲ್ಲ ಎಂದು ಕೊಲೆಯಾದ ಸುರೇಖಾ ತಂದೆ ಆರೋಪ ಮಾಡಿದ್ದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ತಂದೆ ದೀನ್​ದಯಾಳ್​ ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದ್ದರು. ಬೆಂಗಳೂರು ಪೊಲೀಸರ ತನಿಖೆ ಸರಿ ಇಲ್ಲವೆಂದೂ, ಸುರೇಖಾಳ ಗಂಡನೇ ಕೊಲೆ ಮಾಡಿದ್ದಾನೆ ಎಂದು ಸುರೇಖಾ ಪೋಷಕರು ಆರೋಪಿಸಿದ್ದರು. ಪೋಷಕರ ಒತ್ತಡದಿಂದ ತನಿಖೆಯನ್ನ ಸಿಬಿಐಗೆ ಒಪ್ಪಿಸಲಾಗಿತ್ತು. ಇದೀಗ ಸಿಬಿಐ ತನಿಖೆಯಿಂದ ಜೇಮ್ಸ್​ ಆರೋಪಿ ಎಂದು ಸಾಬೀತಾಗಿದ್ದು, ಈ ಮೂಲಕ ಬೆಂಗಳೂರು ಪೊಲೀಸರ ತನಿಖೆ ಸರಿ ಎಂಬುದೂ ಇದೀಗ ಸಾಬೀತಾಗಿದೆ.

Published On - 2:29 pm, Wed, 6 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us