ಈ ಕಲ್ಲು ತುಂಬಾನೇ Lucky ಅಂತಾ ಮಾರಲು ಹೊರಟ ರತ್ನತ್ರಯರು ಖಾಕಿ ವಶಕ್ಕೆ

ಬೆಂಗಳೂರು:ಇದು ಅದೃಷ್ಟದ ಕಲ್ಲು ಎಂದು ಮಾರಲು ಯತ್ನಿಸಿದ ಮೂವರು ಕಿರಾತಕರನ್ನು ಬ್ಯಾಡರಹಳ್ಳಿ‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್,ಹರೀಶ್,ತಿರುಪತಪ್ಪ ಬಂಧಿತ ಆರೋಪಿಗಳು. ಗ್ರೀನ್ ಅವೆಂಚರ್ಸ್ ಸ್ಟೋನ್ ಎಂದು ಅಂಜನಾನಗರ ಮುಖ್ಯ ರಸ್ತೆಯಲ್ಲಿ ಆರೋಪಿಗಳು ಮಾರಾಟದ ದಂಧೆಗಿಳಿದಿದ್ದರು. ಹಸಿರು ಬಣ್ಣದ ಕಲ್ಲನ್ನ ಮನೆಯಲ್ಲಿಟ್ಟರೆ ಅದೃಷ್ಟ ಖುಲಾಯಿಸುತ್ತೆ ಎಂದು ಜನರನ್ನು ನಂಬಿಸಿ, ಮಾರಲು ಯತ್ನಿಸಿದ್ದ ಈ ಖದೀಮರನ್ನು ಬ್ಯಾಡರಹಳ್ಳಿ‌ ಪೊಲೀಸರು ಖಚಿತ ಮಾಹಿತಿ‌ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳಿಂದ 1 ಕೆ.ಜಿ ತೂಕದ ಕಲ್ಲು ಹಾಗೂ ಆಟೋವನ್ನು ಸಹ ವಶಕ್ಕೆ […]

ಈ ಕಲ್ಲು ತುಂಬಾನೇ Lucky ಅಂತಾ ಮಾರಲು ಹೊರಟ ರತ್ನತ್ರಯರು ಖಾಕಿ ವಶಕ್ಕೆ

Updated on: Aug 26, 2020 | 5:25 PM

ಬೆಂಗಳೂರು:ಇದು ಅದೃಷ್ಟದ ಕಲ್ಲು ಎಂದು ಮಾರಲು ಯತ್ನಿಸಿದ ಮೂವರು ಕಿರಾತಕರನ್ನು ಬ್ಯಾಡರಹಳ್ಳಿ‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್,ಹರೀಶ್,ತಿರುಪತಪ್ಪ ಬಂಧಿತ ಆರೋಪಿಗಳು.

ಗ್ರೀನ್ ಅವೆಂಚರ್ಸ್ ಸ್ಟೋನ್ ಎಂದು ಅಂಜನಾನಗರ ಮುಖ್ಯ ರಸ್ತೆಯಲ್ಲಿ ಆರೋಪಿಗಳು ಮಾರಾಟದ ದಂಧೆಗಿಳಿದಿದ್ದರು. ಹಸಿರು ಬಣ್ಣದ ಕಲ್ಲನ್ನ ಮನೆಯಲ್ಲಿಟ್ಟರೆ ಅದೃಷ್ಟ ಖುಲಾಯಿಸುತ್ತೆ ಎಂದು ಜನರನ್ನು ನಂಬಿಸಿ, ಮಾರಲು ಯತ್ನಿಸಿದ್ದ ಈ ಖದೀಮರನ್ನು ಬ್ಯಾಡರಹಳ್ಳಿ‌ ಪೊಲೀಸರು ಖಚಿತ ಮಾಹಿತಿ‌ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಆರೋಪಿಗಳಿಂದ 1 ಕೆ.ಜಿ ತೂಕದ ಕಲ್ಲು ಹಾಗೂ ಆಟೋವನ್ನು ಸಹ ವಶಕ್ಕೆ ಪಡೆದಿದ್ದಾರೆ. ಘಟನೆಯ ನಂತರ ದಂಧೆಯ ಹಿಂದಿರುವ ಮಾಸ್ಟರ್ ಮೈಂಡ್ ಮನ್ಸೂರ್ ನಾಪತ್ತೆಯಾಗಿದ್ದು,ಪ್ರಮುಖ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us