Sign In

By signing in or creating an account, you agree with Associated Broadcasting Company's Terms & Conditions and Privacy Policy.

NCERT Textbook Controversy: ಶಾಲಾ ಪಠ್ಯಪುಸ್ತಕದಲ್ಲಿ ಮೊಘಲರ ಅಧ್ಯಾಯವನ್ನು ಕೈಬಿಟ್ಟ NCERT; ಸ್ಪಷ್ಟನೆ ನೀಡಿದ ಅಧಿಕಾರಿ

ತರಗತಿಗಳಾದ್ಯಂತ ಕೆಲವು ಪಠ್ಯಪುಸ್ತಕದಲ್ಲಿ ಕೆಲವು ಅಧ್ಯಾಯಗಳು ಪುನರಾವರ್ತಿಸುತ್ತಿವೆ ಎಂದು ತಜ್ಞರು ಭಾವಿಸಿದ್ದಾರೆ ಎಂಬುದನ್ನು ಒತ್ತಿಹೇಳುತ್ತಾ, ವಿದ್ಯಾರ್ಥಿಗಳ ಮೇಲಿನ ವಿಷಯದ ಹೊರೆಯನ್ನು ಕಡಿಮೆ ಮಾಡಲು ಕೆಲವು ಭಾಗಗಳನ್ನು ತೆಗೆದುಹಾಕಲಾಗಿದೆ ಎಂದು NCERT ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

NCERT Textbook Controversy: ಶಾಲಾ ಪಠ್ಯಪುಸ್ತಕದಲ್ಲಿ ಮೊಘಲರ ಅಧ್ಯಾಯವನ್ನು ಕೈಬಿಟ್ಟ NCERT; ಸ್ಪಷ್ಟನೆ ನೀಡಿದ ಅಧಿಕಾರಿ
NCERT Textbook Controversy, official reactionImage Credit source: NDTV
Follow us
ನಯನಾ ಎಸ್​ಪಿ
|

Updated on:Apr 04, 2023 | 6:51 PM

NCERT, ಶಾಲಾ ಶಿಕ್ಷಣದ ಕೇಂದ್ರ ಮತ್ತು ರಾಜ್ಯದ ಉನ್ನತ ಸಲಹಾ ಸಂಸ್ಥೆ ಅಧಿಕಾರಿ, ಇಂದು (ಏಪ್ರಿಲ್ 4) ಕೋವಿಡ್​ನಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ (Students) ಸಹಾಯ ಮಾಡಲು ಕೆಲವು ಅಧ್ಯಾಯಗಳನ್ನು ತೆಗೆದು (Textbook Revision) ಹಾಕಲಾಗಿದೆ, ಇದರಲ್ಲಿ ಯಾವುದೇ ರಾಜಕೀಯ (Political) ಉದ್ದೇಶವಿಲ್ಲ ಎಂದು ಹೇಳಿದರು. ಶಾಲಾ ಪಠ್ಯಪುಸ್ತಕಗಳಲ್ಲಿ ಈ ಎರಡು ಅಧ್ಯಾಯಗಳನ್ನು ತೆಗೆದುಹಾಕಿರುವುದಕ್ಕೆ NCERT ಮಂಡಳಿ ಟೀಕೆಗಳನ್ನು ಎದುರಿಸುತ್ತಿದೆ. ಇದು ‘ಕಿಂಗ್ಸ್ ಅಂಡ್ ಕ್ರಾನಿಕಲ್ಸ್’ ಮತ್ತು ‘ದಿ ಮೊಘಲ್ ಕೋರ್ಟ್ಸ್’ ಅಧ್ಯಾಯಗಳನ್ನು CBSE ಮಧ್ಯಕಾಲೀನ ಇತಿಹಾಸದ 12ನೇ ತರಗತಿಯ ಪಠ್ಯಪುಸ್ತಕಗಳಿಂದ ಕೈಬಿಟ್ಟಿದೆ.

“ಕಳೆದ ವರ್ಷವೂ ನಾವು ವಿವರಿಸಿದಂತೆ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸಾಕಷ್ಟು ಕಲಿಕೆಯ ನಷ್ಟವಾಗಿದೆ ಮತ್ತು ವಿದ್ಯಾರ್ಥಿಗಳು ಸಾಕಷ್ಟು ಆಘಾತಕ್ಕೆ ಒಳಗಾಗಿದ್ದಾರೆ. ಒತ್ತಡಕ್ಕೊಳಗಾದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಸಮಾಜ ಮತ್ತು ರಾಷ್ಟ್ರದ ಜವಾಬ್ದಾರಿ ಎಂದು ಭಾವಿಸಲಾಗಿದೆ. ಆದ್ದರಿಂದ ಪಠ್ಯಪುಸ್ತಕಗಳಲ್ಲಿನ ವಿಷಯದ ಹೊರೆ ಕಡಿಮೆ ಮಾಡಬೇಕಿದೆ” ಎಂದು ಎನ್‌ಸಿಇಆರ್‌ಟಿಯ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಎನ್‌ಡಿಟಿವಿಗೆ ತಿಳಿಸಿದರು.

ವಿಷಯಗಳು ಮತ್ತು ತರಗತಿಗಳಾದ್ಯಂತ ಕೆಲವು ಅಧ್ಯಾಯಗಳು ಪುನರಾವರ್ತಿಸುತ್ತಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಒತ್ತಿಹೇಳುತ್ತಾ, ಮಕ್ಕಳು ಆಘಾತಕಾರಿ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದಾರೆ ಮತ್ತು ಹೆಚ್ಚಿನ ಒತ್ತಡದಲ್ಲಿದ್ದಾರೆ ಹಾಗಾಗಿ ವಿದ್ಯಾರ್ಥಿಗಳ ಮೇಲಿನ ವಿಷಯದ ಹೊರೆಯನ್ನು ಕಡಿಮೆ ಮಾಡಲು ಕೆಲವು ಭಾಗಗಳನ್ನು ತೆಗೆದುಹಾಕಲಾಗಿದೆ ಎಂದು ಸಕ್ಲಾನಿ ಹೇಳಿದರು.

ಯಾವುದೇ ಹೊಸ ಪಠ್ಯಪುಸ್ತಕಗಳನ್ನು NCERT ಪರಿಚಯಿಸಿಲ್ಲ, ಮತ್ತು ಕಳೆದ ವರ್ಷ ಮಾಡಿದ ಪರಿಷ್ಕರಣೆಗಳು, ಕಳೆದ ವರ್ಷ ಸಲಹಾ ಮಂಡಳಿಯು ಸುದೀರ್ಘವಾಗಿ ಸಮರ್ಥಿಸಿದ್ದು, ಈ ಶೈಕ್ಷಣಿಕ ವರ್ಷವೂ ಮುಂದುವರಿಯುತ್ತದೆ ಎಂದು ಸಕ್ಲಾನಿ ಹೇಳಿದರು.

“ಈ ನಿರ್ಧಾರ ಸಂಪೂರ್ಣವಾಗಿ ವೃತ್ತಿಪರವಾಗಿದೆ, ಇದರಲ್ಲಿ ಯಾವುದೇ ರಾಜಕೀಯಾಭಿಲ್ಲ” ಎಂದು ಸಕ್ಲಾನಿ ಹೇಳಿದರು. ನಿರ್ದಿಷ್ಟ ಸಿದ್ಧಾಂತಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಲಾಗಿದೆ ಎಂಬ ಆರೋಪಗಳನ್ನು ಎನ್‌ಸಿಇಆರ್‌ಟಿ ನಿರ್ದೇಶಕರು ಬಲವಾಗಿ ತಿರಸ್ಕರಿಸಿದರು.

“ಒಂದು ನಿರ್ದಿಷ್ಟ ಸಿದ್ಧಾಂತಕ್ಕೆ ಸರಿಹೊಂದುವಂತೆ ಪಠ್ಯಪುಸ್ತಕಗಳನ್ನು ಪುನಃ ಬರೆಯಲಾಗುತ್ತಿದೆ ಎಂಬುದು ಸಂಪೂರ್ಣವಾಗಿ ನಕಲಿ ಮತ್ತು ಆಧಾರರಹಿತ ವಾದವಾಗಿದೆ. ಎನ್‌ಸಿಇಆರ್‌ಟಿ ಕಳೆದ ವರ್ಷ ಮೂರು ತಿಂಗಳ ಕಾಲ ಪ್ರಕ್ರಿಯೆ ಮತ್ತು ತೆಗೆದುಹಾಕಲಾದ ವಿಷಯದ ವಿವರವಾದ ವಿವರಣೆಯನ್ನು ನೀಡಿದ್ದರಿಂದ ಈಗ ಈ ಚರ್ಚೆಯನ್ನು ತರಲು ಯಾವುದೇ ತರ್ಕವಿಲ್ಲ. . ಇದರಲ್ಲಿ ಯಾವುದೇ ಪಕ್ಷಪಾತವಿಲ್ಲ. ಇದು ಕೆಲವು ಜನರ ಊಹೆಯಾಗಿದೆ, ಏಕೆ ಎಂದು ನನಗೆ ತಿಳಿದಿಲ್ಲ,” ಎಂದು ಸಕ್ಲಾನಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಪರ್ಲ್ ಅಕಾಡೆಮಿ ಯುಜಿ, ಪಿಜಿ ಕೋರ್ಸ್‌ಗಳಿಗೆ ವಿದ್ಯಾರ್ಥಿವೇತನವನ್ನು ಪ್ರಾರಂಭಿಸಿದೆ; ಇಲ್ಲಿದೆ ಸಂಪೂರ್ಣ ಮಾಹಿತಿ

2022 ರ ಆರಂಭದಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಏಪ್ರಿಲ್‌ನಲ್ಲಿ ತನ್ನ ಪಠ್ಯಕ್ರಮವನ್ನು ಪರಿಷ್ಕರಿಸಿದಾಗ ಅನೇಕ ಬದಲಾವಣೆಗಳನ್ನು ಘೋಷಿಸಲಾಯಿತು. ಇದು ಕೆಲವು ವಿವಾದಕ್ಕೆ ಕಾರಣವಾಯಿತು. CBSE ಅಡಿಯಲ್ಲಿ ಶಾಲೆಗಳಲ್ಲದೆ, ಕೆಲವು ರಾಜ್ಯ ಮಂಡಳಿಗಳು NCERT ಪಠ್ಯಪುಸ್ತಕಗಳನ್ನು ಬಳಸುತ್ತವೆ.

ಬದಲಾವಣೆಗಳನ್ನು ಪಟ್ಟಿ ಮಾಡುತ್ತಾ, ಎನ್‌ಸಿಇಆರ್‌ಟಿ ಟಿಪ್ಪಣಿಯಲ್ಲಿ, “ಪಠ್ಯಪುಸ್ತಕಗಳ ವಿಷಯವನ್ನು ವಿವಿಧ ಕಾರಣಗಳಿಗಾಗಿ ಪರಿಷ್ಕರಿಸಲಾಗಿದೆ, ಒಂದೇ ತರಗತಿಯಲ್ಲಿನ ಇತರ ವಿಷಯಗಳಲ್ಲಿ ಈ ಅದ್ಯಾಯ ಪುನರಾವರ್ತಿಸುವುದಿಲ್ಲ, ಕೆಳಗಿನ ಅಥವಾ ಹೆಚ್ಚಿನ ತರಗತಿಗಳಲ್ಲಿ ಇದೇ ರೀತಿಯ ವಿಷಯವನ್ನು ಸೇರಿಸಲಾಗಿದೆ.” ಎಂದು ತಿಳಿಸಿದೆ.

Published On - 6:49 pm, Tue, 4 April 23

VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಹೊಸ ದಾಖಲೆ... ಕೇವಲ 26 ರನ್ ಬಾರಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಧೋನಿ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಉತ್ಸವಗಳ ಸಂದರ್ಭ ಪಾನಕ ಹಾಗೂ ಮಜ್ಜಿಗೆ ನೀಡುವುದರ ಹಿಂದಿನ ಅಧ್ಯಾತ್ಮಿಕ ರಹಸ್ಯ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಚಂದ್ರ ವೃಶ್ಚಿಕ ರಾಶಿಯಲ್ಲಿ ಸಂಚರಿಸುವ ಈ ದಿನದ ಭವಿಷ್ಯ ಇಲ್ಲಿ ತಿಳಿಯಿರಿ
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬೆಂಗಳೂರು ಹೈವೇಯಲ್ಲಿ 3 ಬಾರಿ ಪಲ್ಟಿಯಾದ ನೀರಿನ ಟ್ಯಾಂಕರ್; ವಿಡಿಯೋ ವೈರಲ್
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ಬಂಗಾಳದಲ್ಲಿ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ದೇವರ ಮೊರೆ ಹೋದ ಸಿಎಸ್​ಕೆ ತಂಡ; ಗೈರಾದ ಧೋನಿ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಸನ್‌ರೈಸರ್ಸ್ ಹೈದರಾಬಾದ್ ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಬೆಂಕಿ ದುರಂತ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ
ಶಾಸಕರು ಬಯಸಿದರೆ ಶಿವಕುಮಾರ್ ಸಿಎಂ ಆಗುವುದನ್ನು ಯಾರು ತಡೆದಾರು? ರಾಯರೆಡ್ಡಿ