AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುನಾವಣಾ ಆಯೋಗಕ್ಕೆ ತಲೆಬಿಸಿಯಾದ ಪೊರಕೆ, ಮತದಾನಕ್ಕೆ 48 ಗಂಟೆ ಮೊದಲೇ ಮತಗಟ್ಟೆ ಸುತ್ತಮುತ್ತ ಪೊರಕೆ ಬ್ಯಾನ್

ಮತಗಟ್ಟೆಯಲ್ಲಿಯೂ ಪೊರಕೆ ಇಡದಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ಅಲ್ಲದೇ ಮತಗಟ್ಟೆ ಸುತ್ತಮುತ್ತ ಪೊರಕೆ ಬಳಸದಂತೆ ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ತಲೆಬಿಸಿಯಾದ ಪೊರಕೆ, ಮತದಾನಕ್ಕೆ 48 ಗಂಟೆ ಮೊದಲೇ ಮತಗಟ್ಟೆ ಸುತ್ತಮುತ್ತ ಪೊರಕೆ ಬ್ಯಾನ್
ಪೊರಕೆ
ಆಯೇಷಾ ಬಾನು
|

Updated on:May 03, 2023 | 9:08 AM

Share

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ಇದೇ ಮೇ10ರಂದು ಮತದಾನ ನಡೆಯಲಿದ್ದು, ಇದಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಯಾವುದೇ ತೊಂದರೆಗಳಾಗದಂತೆ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಆಯೋಗ(Election Commission) ಎಲ್ಲಾ ಕ್ರಮ ಕೈಗೊಂಡಿದೆ. ಚುನಾವಣಾ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ಹೇಗೆಲ್ಲ ಕಾರ್ಯನಿರ್ವಹಿಸಬೇಕು ಅಂತೆಲ್ಲ ತಿಳಿಸಿಕೊಟ್ಟಿದೆ. ಇನ್ನು ರಾಜಕೀಯ ಪಕ್ಷಗಳ ಮೇಲೂ ಆಯೋಗ ಹದ್ದಿನ ಕಣ್ಣು ಇಟ್ಟಿದ್ದು, ಅಕ್ರಮಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದೆ. ಇನ್ನು ಯಾವುದೇ ಕಾರಣಕ್ಕೂ ಮತದಾರರಿಗೆ ಆಮಿಷ ತೋರಿಸಬಾರದು ಎಂದು ಹೇಳಿದೆ. ಆದ್ರೆ, ಇದೀಗ ಚುನಾವಣಾ ಆಯೋಗಕ್ಕೆ ಪೊರಕೆ ತಲೆಬಿಸಿ ಎದುರಾಗಿದೆ.

ಹೌದು… ಪೊರಕೆ ಚಿಹ್ನೆಯನ್ನು ಆಮ್ ಆದ್ಮಿ ಪಕ್ಷ ಹೊಂದಿದ್ದು, ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧೆ ಮಾಡ್ತಿದೆ. ಇದರಿಂದ ಮತದಾನದ ದಿನ ಈ ಪಕ್ಷದ ಚಿಹ್ನೆಯಾದ ಪೊರಕೆಯಾಗಲಿ ಅಥವಾ ಅದರ ಚಿತ್ರವನ್ನ ಮರೆಮಾಚಬೇಕಾದ ಅನಿವಾರ್ಯತೆ ಆಯೋಗಕ್ಕೆ ಎದುರಾಗಿದೆ. ಮತದಾನದ ನಡೆಯುವ ದಿನ ಮತಗಟ್ಟೆ ಹಾಗೂ ಅದರ ಸುತ್ತಮುತ್ತ ಎಲ್ಲೂ ಪೊರಕೆ ಅಥವಾ ಪೊರಕೆಯ ಚಿತ್ರ ಕಾಣದಂತೆ ನೋಡಿಕೊಳ್ಳಬೇಕಿದೆ. ಇದರಿಂದ ಸ್ವಚ್ಛತೆಗೆ ಬೇಕೆ ಬೇಕಿರುವ ಪೊರಕೆಯ ಬಗ್ಗೆ ಚುನಾವಣಾ ಆಯೋಗ ಟೆನ್ಷನ್ ಮಾಡಿಕೊಂಡಿದ್ದು, ನೀತಿ ಸಂಹಿತ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದೇ ಆಯೋಗಕ್ಕೆ ದೊಡ್ಡ ತಲೆಬಿಸಿಗೆ ಕಾರಣವಾಗಿದೆ. ಹೀಗಾಗಿ ಮತದಾನದ 48 ಗಂಟೆ ಮೊದಲು ಮತಗಟ್ಟೆ ಸುತ್ತಮುತ್ತ ಹಾಗೂ ಮತಗಟ್ಟೆಲ್ಲಿ ಸ್ವಚ್ಛತೆಗೆ ಬೇಕೆ ಬೇಕಿರುವ ಪೊರಕೆಗೆ ಚುನಾವಣಾ ಆಯೋಗ ಗೇಟ್ ಪಾಸ್ ನೀಡಿದೆ.

ಇದನ್ನೂ ಓದಿ: Karnataka Assembly Elction: ಮೇ.05ರಿಂದ ಪ್ರಧಾನಿ ಮೋದಿ ಮೂರು ದಿನ ರಾಜ್ಯ ಪ್ರವಾಸ; ಇಲ್ಲಿದೆ ವೇಳಾಪಟ್ಟಿ

ಪೊರಕೆ ಮರೆ ಮಾಚುವುದು ಆಯೋಗಕ್ಕೆ ನಿಜವಾಗಿಯೂ ಸವಾಲಿನ ಕೆಲಸವಾಗಿದೆ. ಮತಗಟ್ಟೆಯಲ್ಲಿಯೂ ಪೊರಕೆ ಇಡದಂತೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಸೂಚನೆ ನೀಡಿದ್ದಾರೆ. ಅಲ್ಲದೇ ಮತಗಟ್ಟೆ ಸುತ್ತಮುತ್ತ ಪೊರಕೆ ಬಳಸದಂತೆ ಹೇಳಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷಗಳ ಚಿಹ್ನೆಯಾಗಲಿ ಅಥವಾ ಪ್ರತಿನಿಧಿಸುವ ವಸ್ತು ಮತ್ತು ಚಿತ್ರಗಳನ್ನ ಮತದಾರರಿಂದ ಮರೆ ಮಾಚಬೇಕಿದೆ. ಹೀಗಾಗಿ ಚುನಾವಣೆಯ ನಿಯಮದ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರಬಾರದು ಎಂಬ ಕಾರಣಕ್ಕೆ ಈ ಸೂಚನೆ ಹೊರಡಿಸಿದ್ದಾರೆ.

ಕಾಂಗ್ರೆಸ್ ಚಿಹ್ನೆ ಕೈ ಎಂದು ಕೈ ಕತ್ತರಿಸಲಾಗುವುದೇ?

ಶಿವಮೊಗ್ಗ ಏರ್​ಪೋರ್ಟ್ ಕೂಡ ಕಮಲಾಕಾರದಲ್ಲಿದ್ದು ಅದು ಕೂಡ ಮತದಾರರ ಮೇಲೆ ಪ್ರಭಾವ ಬೀರಬಹುದು ಹಾಗಾಗಿ ಶಿವಮೊಗ್ಗ ಏರ್​ಪೋರ್ಟ್ ಅನ್ನು ಕಾಣದಂತೆ ಪರದೆ ಮುಚ್ಚಬೇಕು ಎಂಬ ಕೂಗು ಕೆಲ ದಿನಗಳ ಹಿಂದೆ ಜೋರಾಗಿತ್ತು. ಇದಕ್ಕೆ ಕೆಲವರು ಕಾಂಗ್ರೆಸ್ ಚಿಹ್ನೆ ಕೈ ಎಂದು ಕೈ ಕತ್ತರಿಸಲಾಗುವುದೇ? ಎಂದು ಟೀಕೆ ಮಾಡಿದ್ದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:57 am, Wed, 3 May 23

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್