AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ನಾನಲ್ಲ: ಮಣಿಕಂಠ ರಾಠೋಡ್​ಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ

ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ಅಲ್ಲ ನಾನು. ನನ್ನನ್ನು ಯಾರೂ ಕೆಣಕಲ್ಲ, ಕೆಣಕಿದ್ರೆ ಉತ್ತರ ಕೊಡದೆ ಬಿಡುವುದಿಲ್ಲ ಎಂದು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್​ಗೆ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.

ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ನಾನಲ್ಲ: ಮಣಿಕಂಠ ರಾಠೋಡ್​ಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ
ಮಣಿಕಂಠ ರಾಠೋಡ್, ಮಲ್ಲಿಕಾರ್ಜುನ ಖರ್ಗೆ
ಗಂಗಾಧರ​ ಬ. ಸಾಬೋಜಿ
|

Updated on: May 07, 2023 | 4:37 PM

Share

ಕಲಬುರಗಿ: ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ಅಲ್ಲ ನಾನು. ನನ್ನನ್ನು ಯಾರೂ ಕೆಣಕಲ್ಲ, ಕೆಣಕಿದ್ರೆ ಉತ್ತರ ಕೊಡದೆ ಬಿಡುವುದಿಲ್ಲ ಎಂದು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್​ಗೆ (Manikanta Rathod) ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು. ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ನನಗೆ ಒಂದು ಕಿವಿಮಾತು ಹೇಳಿದ್ದಾರೆ. ಒಬ್ಬನೇ ಮಗ ಇದ್ದೀಯಾ, ಧೈರ್ಯದಿಂದ ಇರು ಎಂದಿದ್ದಾರೆ. ಕಳೆದ 53 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ನಾನು ಚಿಕ್ಕವನಿದ್ದಾಗ ತಾಯಿ, ತಂಗಿ, ಚಿಕ್ಕಪ್ಪನನ್ನು ಕಳೆದುಕೊಂಡೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದವನು ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದರು.

ದೇಶದ ಸ್ವತಂತ್ರ್ಯಕ್ಕಾಗಿ ಆರ್​ಎಸ್​ಎಸ್, ಬಿಜೆಪಿ ಹೋರಾಟ ಮಾಡಿಲ್ಲ

ರಾಜ್ಯ ಅಭಿವೃದ್ಧಿಯಾಗಬೇಕಂದ್ರೆ 40% ಸರ್ಕಾರ ತೆಗೆಯಬೇಕು. ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಅಂತ ಪ್ರಧಾನಿ ಮೋದಿ ಕೇಳುತ್ತಾರೆ. ನಾವು 70 ವರ್ಷ ಏನು ಮಾಡದಿದ್ರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ದೇಶದ ಸ್ವತಂತ್ರ್ಯಕ್ಕಾಗಿ ಆರ್​ಎಸ್​ಎಸ್, ಬಿಜೆಪಿ ಹೋರಾಟ ಮಾಡಿಲ್ಲ ಎಂದರು.

ಇದನ್ನೂ ಓದಿ: ಹೆಲ್ಮೆಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಬೈಕ್​​ನಲ್ಲಿ ಹೊರಟ ರಾಹುಲ್​ ಗಾಂಧಿ: ಡೆಲಿವರಿ ಬಾಯ್ ಜೊತೆ ಸಂವಾದ

ಕಾಂಗ್ರೆಸ್​ಗೆ ಬೈದ್ರೆ ದೇಶದ ಅಭಿವೃದ್ಧಿಯಾಗುತ್ತಾ? 

ಆರ್​ಎಸ್​ಎಸ್​ನವರು ಸರ್ಕಾರಿ ನೌಕರಿ, ಒಳ್ಳೊಳ್ಳೆ ಹುದ್ದೆಗೆ ಹೋದರು. ಆದರೆ ಸಾಮಾನ್ಯ ಜನರು ಸ್ವತಂತ್ರ ಕ್ಕಾಗಿ ಹೋರಾಟ ಮಾಡಿದರು. ದಿನಕ್ಕೆ ನಾಲ್ಕು ನಾಲ್ಕು ಜಾಕೇಟ್ ಪ್ರಧಾನಿ ಹಾಕುತ್ತಾರೆ. ಮೋದಿ ಅವರ ಜಾಕೇಟ್ ಮಾತ್ರ ಪ್ರಸಿದ್ಧಿಯಾಗಿದೆ. ಕೇವಲ ಕಾಂಗ್ರೆಸ್​ಗೆ ಬೈದ್ರೆ ದೇಶದ ಅಭಿವೃದ್ಧಿಯಾಗುತ್ತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​ನವರು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ, ಅದು ಸುಡದೇ ಬಿಡುವುದಿಲ್ಲ ಎಂದ ಸಚಿವ ಆರ್​ ಅಶೋಕ್​​

ಕರ್ನಾಟಕ ಜನರು ನನಗೆ ಮತ ನೀಡಿ ಎಂದ ಮಲ್ಲಿಕಾರ್ಜುನ ಖರ್ಗೆ

ನಾನು ಕರ್ನಾಟಕ, ಕಲಬುರಗಿ ಮಗನಿದ್ದೇನೆ. ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ. ಕರ್ನಾಟಕ ಜನರು ನನಗೆ ಮತ ನೀಡಬೇಕು. ಮೋದಿ ಗುಜರಾತ್​ನಿಂದ ಬಂದು ಹೇಗೆ ಇಲ್ಲಿ ಸುಪುತ್ರರಾಗುತ್ತಾರೆ. ಮೋದಿ ಗಲ್ಲಿಗಲ್ಲಿಗೆ ಬಂದು ಅಡ್ಡಾಡುತ್ತಿದ್ದಾರೆ. ಅವರಿಗೆ ಸೋಲಿನ ನಡುಕ ಹುಟ್ಟಿದೆ. ಒಬ್ಬ ಪ್ರಧಾನ ಮಂತ್ರಿ ಪ್ರಚಾರಕ್ಕೆ ಇಷ್ಟೊಂದು ಸಲ ಬರೋದಾ ಎಂದು ಕಿಡಿಕಾರಿದರು.

ಮಣಿಪುರದಲ್ಲಿ ಬೆಂಕಿ ಹತ್ತಿದೆ, ಕಾಶ್ಮೀರದಲ್ಲಿ ಯೋಧರು ಸತ್ತಿದ್ದಾರೆ. ಅಲ್ಲಿಗೆ ಹೋಗದೆ, ಚುನಾವಣೆಗಾಗಿ ಇಲ್ಲಿಗೆ ಬಂದಿದ್ದಾರೆ. ಪ್ರಧಾನಿ ಮೋದಿ ನಾನು ಬಡವ, ಹಿಂದುಳಿದವರು ಅಂತಾರೆ. ನಾನು ನಿಮಗಿಂತ ಬಡವ ಇದ್ದೇನೆ. ಮುಂದಿನ ಇಂಜಿನ್ ಹಳಿ ತಪ್ಪಿದೆ. ಹೀಗಾಗಿ ಹಿಂದಿನ ಇಂಜಿನ್ ಕೂಡ ಹಳಿ ತಪ್ಪಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ