ಯಜಮಾನ್ರೋತ್ಸವಕ್ಕೆ 50 ದಿನ ಬಾಕಿ, ಅಭಿಮಾನಿಗಳ ಸಂಭ್ರಮ ಶುರು!

ಬೆಂಗಳೂರು: ದರ್ಶನ್, ಸುದೀಪ್, ಪುನೀತ್ ರಾಜಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ 50, 100 ದಿನ ಮೊದಲಿನಿಂದ್ಲೇ ಆಚರಿಸೋಕೆ ಶುರುವಿಟ್ಕೊಳ್ತಾರೆ. ಆದ್ರೆ ಇದೇ ಮೊದಲ ಬಾರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬವನ್ನ 50 ದಿನ ಇರುವಂತೆ ಸಂಭ್ರಮಿಸಲು ಶುರು ಮಾಡಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನ ಅಗಲಿ 11 ವರ್ಷಗಳಾಗಿವೆ. ಆದ್ರೂ ಅಭಿಮಾನಿಗಳ ಜನಮಾನಸದಿಂದ ಡಾ.ವಿಷ್ಣುವರ್ಧನ್ ಮರೆಯಾಗಿಲ್ಲ. ಒಂದ್ವೇಳೆ ವಿಷ್ಣು ದಾದಾ ಇದ್ದಿದ್ದರೆ ಇದೇ ಸೆಪ್ಟೆಂಬರ್ 18ರಂದು 70ನೇ ಜನ್ಮದಿನವನ್ನ ಆಚರಿಸಿಕೊಳ್ಳುತ್ತಿದ್ದರು. ಆದ್ರೀಗ ಅವನ ದೈಹಿಕ […]

ಯಜಮಾನ್ರೋತ್ಸವಕ್ಕೆ 50 ದಿನ ಬಾಕಿ, ಅಭಿಮಾನಿಗಳ ಸಂಭ್ರಮ ಶುರು!
ಸಾಧು ಶ್ರೀನಾಥ್​

Updated on: Jul 30, 2020 | 9:06 PM

ಬೆಂಗಳೂರು: ದರ್ಶನ್, ಸುದೀಪ್, ಪುನೀತ್ ರಾಜಕುಮಾರ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನ 50, 100 ದಿನ ಮೊದಲಿನಿಂದ್ಲೇ ಆಚರಿಸೋಕೆ ಶುರುವಿಟ್ಕೊಳ್ತಾರೆ. ಆದ್ರೆ ಇದೇ ಮೊದಲ ಬಾರಿಗೆ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬವನ್ನ 50 ದಿನ ಇರುವಂತೆ ಸಂಭ್ರಮಿಸಲು ಶುರು ಮಾಡಿದ್ದಾರೆ.

ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನ ಅಗಲಿ 11 ವರ್ಷಗಳಾಗಿವೆ. ಆದ್ರೂ ಅಭಿಮಾನಿಗಳ ಜನಮಾನಸದಿಂದ ಡಾ.ವಿಷ್ಣುವರ್ಧನ್ ಮರೆಯಾಗಿಲ್ಲ. ಒಂದ್ವೇಳೆ ವಿಷ್ಣು ದಾದಾ ಇದ್ದಿದ್ದರೆ ಇದೇ ಸೆಪ್ಟೆಂಬರ್ 18ರಂದು 70ನೇ ಜನ್ಮದಿನವನ್ನ ಆಚರಿಸಿಕೊಳ್ಳುತ್ತಿದ್ದರು. ಆದ್ರೀಗ ಅವನ ದೈಹಿಕ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ಹುಟ್ಟುಹಬ್ಬವನ್ನ ಆಚರಿಸೋಕೆ ಸಜ್ಜಾಗಿದ್ದಾರೆ. ಹೀಗಾಗಿ ನಿರ್ದೇಶಕ ಕೃಷ್ಣ ತಮ್ಮ ಟ್ವಿಟರ್ ಖಾತೆಯಲ್ಲಿ 50 ಡೇಸ್ ಫಾರ್ ವಿಷ್ಣು ಬರ್ತ್​ಡೇ ಅನ್ನೋ ಪೋಸ್ಟರ್ ಅನ್ನ ಹಂಚಿಕೊಂಡಿದ್ದಾರೆ.

ಈ ಬಾರಿ ಸಾಹಸ ಸಿಂಹನ ಹುಟ್ಟುಹಬ್ಬವನ್ನ ಯಜಮಾನ್ರೋತ್ಸವ ಅಂತ ಹೆಸರಿಸಿದ್ದು, ಅದ್ಧೂರಿಯಾಗಿ ಆಚರಿಸಿಲು ವಿಷ್ಣು ಅಭಿಮಾನಿಗಳು ಸಜ್ಜಾಗಿದ್ದಾರೆ. ಒಂದ್ಕಡೆ ವಿಷ್ಣು ದಾದಾ 70ನೇ ಹುಟ್ಟುಹಬ್ಬ ಅನ್ನೋದಾದ್ರೆ, ಇನ್ನೊಂದ್ಕಡೆ 50 ದಿನ ಮೊದಲಿಂದ್ಲೇ ಸಂಭ್ರಮ ಆರಂಭ ಆಗಿರೋದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

Published On - 6:19 pm, Thu, 30 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us