ಡ್ರಗ್ಸ್​ ಸಂಕಷ್ಟ: ನಿಮಿಷಾಂಬ ದೇವಿ ಮೊರೆ ಹೋದ ಆ್ಯಂಕರ್ ಅನುಶ್ರೀ

ಮಂಡ್ಯ: ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿರುವ ಆ್ಯಂಕರ್ ಕಮ್ ನಟಿ ಅನುಶ್ರೀಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅನುಶ್ರೀ ನಿಮಿಷಾಂಬ ದೇವಿ ಮೊರೆ ಹೋಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್​ನಲ್ಲಿರುವ ನಿಮಿಷಾಂಬ ದೇವಿ ಸನ್ನಿಧಾನಕ್ಕೆ ಬಂದು ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅನುಶ್ರೀ ಕುಟುಂಬಸ್ಥರು, ಸ್ನೇಹಿತರ ಜೊತೆ ಆಗಮಿಸಿದ್ದಾರೆ. ತಾಯಿ ನಿಮಿಷಾಂಬೆಯ ಭಕ್ತಳಾಗಿರೋ ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್‌ನಲ್ಲಿ ಇತ್ತೀಚೆಗೆ ಸಿಸಿಬಿ ವಿಚಾರಣೆ ಎದುರಿಸಿದ್ದರು. ಅಲ್ಲದೆ ಡ್ರಗ್ಸ್ ಪ್ರಕರಣ ದಿನೇ ದಿನೇ ಅನೇಕ ತಿರುವುಗಳನ್ನು ಪಡೆಯುತ್ತಿದೆ. […]

ಡ್ರಗ್ಸ್​  ಸಂಕಷ್ಟ: ನಿಮಿಷಾಂಬ ದೇವಿ ಮೊರೆ ಹೋದ ಆ್ಯಂಕರ್ ಅನುಶ್ರೀ
Edited By:

Updated on: Oct 02, 2020 | 9:18 AM

ಮಂಡ್ಯ: ಡ್ರಗ್ಸ್​ ಪ್ರಕರಣದಲ್ಲಿ ಸಿಲುಕಿರುವ ಆ್ಯಂಕರ್ ಕಮ್ ನಟಿ ಅನುಶ್ರೀಗೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅನುಶ್ರೀ ನಿಮಿಷಾಂಬ ದೇವಿ ಮೊರೆ ಹೋಗಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್​ನಲ್ಲಿರುವ ನಿಮಿಷಾಂಬ ದೇವಿ ಸನ್ನಿಧಾನಕ್ಕೆ ಬಂದು ಹರಕೆ ಹೊತ್ತು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅನುಶ್ರೀ ಕುಟುಂಬಸ್ಥರು, ಸ್ನೇಹಿತರ ಜೊತೆ ಆಗಮಿಸಿದ್ದಾರೆ. ತಾಯಿ ನಿಮಿಷಾಂಬೆಯ ಭಕ್ತಳಾಗಿರೋ ಆ್ಯಂಕರ್ ಅನುಶ್ರೀ ಡ್ರಗ್ಸ್ ಕೇಸ್‌ನಲ್ಲಿ ಇತ್ತೀಚೆಗೆ ಸಿಸಿಬಿ ವಿಚಾರಣೆ ಎದುರಿಸಿದ್ದರು.

ಅಲ್ಲದೆ ಡ್ರಗ್ಸ್ ಪ್ರಕರಣ ದಿನೇ ದಿನೇ ಅನೇಕ ತಿರುವುಗಳನ್ನು ಪಡೆಯುತ್ತಿದೆ. ಹೀಗಾಗಿ ಡ್ರಗ್ಸ್ ಪ್ರಕರಣದ ಸಂಕಷ್ಟದಿಂದ ಪಾರು ಮಾಡುವಂತೆ ದೇವಿಯ ಮೊರೆ ಹೋಗಿದ್ದಾರೆ.

Published On - 9:17 am, Fri, 2 October 20

Follow Us