ನಟ ಆಹುತಿ ರಾಜಶೇಖರ್​ಗೆ ಕೊರೊನಾ ಸೋಂಕು, ತಾರಾ ಪತ್ನಿಯೂ ಗಂಭೀರ

ಹೈದರಾಬಾದ್: ಆಹುತಿ, ಅಂಕುಶಂ ಅಂತಹ ಸಿನಿಮಾಗಳಲ್ಲಿ ಅತ್ಯದ್ಭುತವಾಗಿ ನಟಿಸಿದ ಡಾ. ವಿ. ರಾಜಶೇಖರ್​ಗೆ ಇತ್ತೀಚೆಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ. 54 ವರ್ಷದ ಡಾ. ರಾಜಶೇಖರ್ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆತಂಕದ ವಿಚಾರವೆಂದರೆ ಅವರ ತಾರಾ ಪತ್ನಿ ಜೀವಿತಾಗೂ ಕೊರೊನಾ ತಗುಲಿದೆ. ಅದಕ್ಕೂ ಮುನ್ನ.. ತಾರಾ ದಂಪತಿಯ ಇಬ್ಬರು ಪುತ್ರಿಯರಿಗೂ ಕೊರೊನಾ ಸೋಂಕು ತಗುಲಿ, ಅವರಿಬ್ಬರೂ ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಆದರೆ ರಾಜಶೇಖರ್ ಮತ್ತು ಜೀವಿತಾ ಮಾತ್ರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ ಗಂಭೀರ […]

ನಟ ಆಹುತಿ ರಾಜಶೇಖರ್​ಗೆ ಕೊರೊನಾ ಸೋಂಕು, ತಾರಾ ಪತ್ನಿಯೂ ಗಂಭೀರ
ಸಾಧು ಶ್ರೀನಾಥ್​

Updated on: Oct 22, 2020 | 6:42 PM

ಹೈದರಾಬಾದ್: ಆಹುತಿ, ಅಂಕುಶಂ ಅಂತಹ ಸಿನಿಮಾಗಳಲ್ಲಿ ಅತ್ಯದ್ಭುತವಾಗಿ ನಟಿಸಿದ ಡಾ. ವಿ. ರಾಜಶೇಖರ್​ಗೆ ಇತ್ತೀಚೆಗೆ ಮಹಾಮಾರಿ ಕೊರೊನಾ ಸೋಂಕು ತಗುಲಿದೆ. 54 ವರ್ಷದ ಡಾ. ರಾಜಶೇಖರ್ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆತಂಕದ ವಿಚಾರವೆಂದರೆ ಅವರ ತಾರಾ ಪತ್ನಿ ಜೀವಿತಾಗೂ ಕೊರೊನಾ ತಗುಲಿದೆ.

ಅದಕ್ಕೂ ಮುನ್ನ.. ತಾರಾ ದಂಪತಿಯ ಇಬ್ಬರು ಪುತ್ರಿಯರಿಗೂ ಕೊರೊನಾ ಸೋಂಕು ತಗುಲಿ, ಅವರಿಬ್ಬರೂ ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ. ಆದರೆ ರಾಜಶೇಖರ್ ಮತ್ತು ಜೀವಿತಾ ಮಾತ್ರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ.

ತಮಿಳುನಾಡಿನ ಪೊಲೀಸ್ ಅಧಿಕಾರಿಯ ಪುತ್ರ ಡಾ. ರಾಜಶೇಖರ್ ವರದರಾಜನ್ ಮೂಲತಃ ವೈದ್ಯರಾಗಿದ್ದು, 30 ವರ್ಷಕ್ಕೂ ಹೆಚ್ಚು ಕಾಲದಿಂದ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ತಲಂಬ್ರಾಲು, ಶೃತಿಲಯಲು, ಆಹುತಿ, ಅಂಕುಶಂ, ಮಗಾಡು, ಅಲ್ಲರಿ ಪ್ರಿಯುಡು, ಅನ್ನ, ಸೂರ್ಯುಡು, ಶಿವಯ್ಯ, ಮನಸುನ್ನ ಮಾರಾಜು, ಮಾ ನ್ನಯ್ಯ, ಎವಡೈತೆ ನಾಕೇಂಟಿ ಮತ್ತು ಗೋರಿಂಟಾಕು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

Published On - 5:35 pm, Thu, 22 October 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us