AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ -ಮತ್ತೊಬ್ಬ ನಟ ತಪ್ಪೊಪ್ಪಿಗೆ?

ಬೆಂಗಳೂರು: ಯಾವುದೇ ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ ಎಂದು ಮತ್ತೊಬ್ಬ ನಟ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿಕೊಂಡಿರುವಿದಾಗಿ ತಿಳಿದುಬಂದಿದೆ.  ಲಾಕ್‌ಡೌನ್‌ ಸಮಯದಲ್ಲಿ ಮೂರು-ನಾಲ್ಕು ಬಾರಿ ಕೊಕೇನ್‌ ಸೇವಿಸಿರುವುದಾಗಿ CCB ಅಧಿಕಾರಿಗಳ ಬಳಿ ನಟ ದಿಗಂತ್‌ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಮನೆಯಲ್ಲಿ ನಾನು ಕೊಕೇನ್‌ ಸೇವಿಸಿಲ್ಲ. ತಂದೆ-ತಾಯಿ ಎದುರು ಕೊಕೇನ್‌ ಸೇವಿಸಲಾಗಲ್ಲ. ಸ್ನೇಹಿತರ ಮನೆಯಲ್ಲಿ ಸ್ನೇಹಿತರೊಂದಿಗೆ ಸೇರಿ ಕೊಕೇನ್ ಸೇವಿಸಿದ್ದೇನೆ ಎಂದು ದೂಧ್‌ಪೇಡಾ ದಿಗಂತ್‌ ತಪ್ಪೊಪ್ಪಿಗೆ ನೀಡಿದ್ದಾರಂತೆ. ಕೊಕೇನ್​ ನೈಜೀರಿಯಾ ಮೂಲದ […]

ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ -ಮತ್ತೊಬ್ಬ ನಟ ತಪ್ಪೊಪ್ಪಿಗೆ?
KUSHAL V
|

Updated on:Sep 23, 2020 | 4:29 PM

Share

ಬೆಂಗಳೂರು: ಯಾವುದೇ ಕೆಲ್ಸವಿರಲಿಲ್ಲ, ಡಿಪ್ರೆಷನ್​ನಲ್ಲಿದ್ದೆ.. ಸ್ನೇಹಿತರ ಜೊತೆ ಕೊಕೇನ್​ ಸೇವಿಸಿದೆ ಎಂದು ಮತ್ತೊಬ್ಬ ನಟ ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹೇಳಿಕೊಂಡಿರುವಿದಾಗಿ ತಿಳಿದುಬಂದಿದೆ.  ಲಾಕ್‌ಡೌನ್‌ ಸಮಯದಲ್ಲಿ ಮೂರು-ನಾಲ್ಕು ಬಾರಿ ಕೊಕೇನ್‌ ಸೇವಿಸಿರುವುದಾಗಿ CCB ಅಧಿಕಾರಿಗಳ ಬಳಿ ನಟ ದಿಗಂತ್‌ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮನೆಯಲ್ಲಿ ನಾನು ಕೊಕೇನ್‌ ಸೇವಿಸಿಲ್ಲ. ತಂದೆ-ತಾಯಿ ಎದುರು ಕೊಕೇನ್‌ ಸೇವಿಸಲಾಗಲ್ಲ. ಸ್ನೇಹಿತರ ಮನೆಯಲ್ಲಿ ಸ್ನೇಹಿತರೊಂದಿಗೆ ಸೇರಿ ಕೊಕೇನ್ ಸೇವಿಸಿದ್ದೇನೆ ಎಂದು ದೂಧ್‌ಪೇಡಾ ದಿಗಂತ್‌ ತಪ್ಪೊಪ್ಪಿಗೆ ನೀಡಿದ್ದಾರಂತೆ. ಕೊಕೇನ್​ ನೈಜೀರಿಯಾ ಮೂಲದ ಪ್ರಜೆಗಳ ಮೂಲಕ ಸ್ನೇಹಿತನೊಬ್ಬ ತರಿಸಿದ್ದ. ಹೀಗಾಗಿ, ಎಲ್ಲರೂ ಒಟ್ಟಿಗೆ ಸೇರಿ ಕೊಕೇನ್‌ ಸೇವಿಸಿದ್ದೆವು ಎಂದು ತನಿಖಾಧಿಕಾರಿಗಳಿಂದ ವಿಚಾರಣೆ ವೇಳೆ ದಿಗಂತ್‌ ಹೇಳಿಕೆ ಕೊಟ್ಟಿದ್ದಾರಂತೆ.

ಸಾಕ್ಷ್ಯಗಳ ಸಮೇತ ಸಿಸಿಬಿ ಇಂಟರೋಗೇಶನ್: ಇನ್ನು ವಿಚಾರಣೆ ವೇಳೆ ದಿಗಂತ್​ ಮೊದಲ ಸಲ ಹೇಳಿದ್ದ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಈಗಿನ ಹೇಳಿಕೆಗಳು ಕೊಡುತ್ತಿದ್ದಾರಂತೆ. ಈ ಬಾರಿ ಸಾಕ್ಷ್ಯಗಳನ್ನ ಮುಂದಿಟ್ಟು ಪ್ರಶ್ನೆ ಕೇಳುತ್ತಿರುವ ಅಧಿಕಾರಿಗಳು ಆರೋಪಿ ಬೆನಾಲ್ಡ್ ವುಡ್ಡೆನಾ ಹೇಳಿಕೆ ಆಧರಿಸಿ ದಿಗಂತ್ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿ ಬೆನಾಲ್ಡ್ ವಿಚಾರಣೆ ವೇಳೆ ದಿಗಂತ್ ಹೆಸರು ಪ್ರಸ್ತಾಪವಾಗಿದ್ದು ಹೀಗಾಗಿ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮೊದಲ ಬಾರಿ ನಡೆದ ವಿಚಾರಣೆಯಲ್ಲಿ ಕೂಲ್ ಆಗಿ ಬಂದಿದ್ದ ದಿಗಂತ್ ಈ ಬಾರಿ ಸಪ್ಪೆ ಮುಖ ಇಟ್ಟುಕೊಂಡು ಬಂದಿದ್ದರು ಎಂದು ಹೇಳಲಾಗಿದೆ.

‘ನನ್ನ ಕೆರಿಯರ್ ಹಾಳಾಗತ್ತೆ ಮತ್ತೆ ಕರೆಯಬೇಡಿ ಪ್ಲೀಸ್’ ನಟ ದಿಗಂತ್ ವಿಚಾರಣೆ ವೇಳೆ ನನ್ನ ಕೆರಿಯರ್ ಹಾಳಾಗತ್ತೆ. ನನ್ನನ್ನ ಮತ್ತೆ ಕರೆಯಬೇಡಿ ಪ್ಲೀಸ್ ಎಂದು ಕೇಳಿಕೊಂಡಿದ್ದಾರಂತೆ. ಆಗ, ವಿಚಾರಣೆ ಮುಗಿಸಿ ನೀವು ಹೊರಡಿ. ಮತ್ತೆ ಅವಶ್ಯಕತೆ ಬಿದ್ದರೆ ನಾವು ಕರೆಯುತ್ತೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರಂತೆ.

ಪದೇ ಪದೇ ಈ ರೀತಿ ವಿಚಾರಣೆಗೆ ಬರೋದ್ರಿಂದ ನನ್ನ ಕೆರಿಯರ್​ಗೆ ಡ್ಯಾಮೆಜ್ ಆಗತ್ತೆ ಸರ್. ನನ್ನ ಬಗ್ಗೆ ತಪ್ಪು ಸಂದೇಶ ರವಾನೆಯಾದಂತಾಗುತ್ತೆ. ಏನೇ ಇದ್ರೂ ಒಂದೇ ಸಲ ವಿಚಾರಿಸಿ ಪ್ಲೀಸ್, ಉತ್ತರಿಸುತ್ತೇನೆ ಎಂದು ದಿಗಂತ್ ಮನವಿ ಮಾಡಿಕೊಂಡಿದ್ದಾರಂತೆ. ಅವಶ್ಯಕತೆ ಇದ್ದಾಗ ಬರಲೇಬೇಕಾಗುತ್ತೆ ಎಂದು ಅಧಿಕಾರಿಗಳು ತಾಕೀತು ಮಾಡಿದ್ದಾರೆ.

ಕೊಕೇನ್‌ ತಲುಪಿಸಿದ ನೈಜೀರಿಯಾ ಪ್ರಜೆಗಳು ಎಸ್ಕೇಪ್‌ ಇನ್ನು ದಿಗಂತ್‌ ಮತ್ತು ನಟನ ಸ್ನೇಹಿತರಿಗೆ ಕೊಕೇನ್‌ ತಲುಪಿಸಿದ ನೈಜೀರಿಯಾ ಪ್ರಜೆಗಳು ಎಸ್ಕೇಪ್‌ ಆಗಿದ್ದಾರಂತೆ. ನಟ ದಿಗಂತ್‌ರನ್ನು ಮೊದಲ ಬಾರಿ ವಿಚಾರಣೆಗೆ ಕರೆದ ಸಮಯದಲ್ಲೇ ಎಸ್ಕೇಪ್‌ ಆಗಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ, ಮೊಬೈಲ್‌ ಸ್ವಿಚ್‌ ಆಫ್​ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ವಿಚಾರಣೆ ವೇಳೆ ದಿಗಂತ್‌ ಮೊಬೈಲ್‌ನಲ್ಲಿ ನೈಜಿರಿಯಾ ಪ್ರಜೆಗಳ ಮಾಹಿತಿ ಸಿಕ್ಕಿತ್ತು. ಹಾಗಾಗಿ, ನೈಜೀರಿಯಾ ಪ್ರಜೆಗೆ ದಿಗಂತ್​ ಮೊಬೈಲ್‌ ಮೂಲಕ ಸಂಪರ್ಕಿಸಿರುವ ಬಗ್ಗೆ ವಿಚಾರಣೆ ನಡೆಸಲಾಯಿತಂತೆ. ಇಬ್ಬರ ನಡುವೆ ಮೊಬೈಲ್‌ಗಳಲ್ಲಿ ಕೋಡ್‌ವರ್ಡ್‌ ಮೂಲಕ ಮೆಸೇಜ್‌ ಕಮ್ಯುನಿಕೇಷನ್​‌ ಆಗಿತ್ತು ಎಂಬ ಮಾಹಿತಿ ದೊರೆತಿದೆ.

ಆದರೆ, ಈ ವಿಚಾರವಾಗಿ ಸೂಕ್ತ ಉತ್ತರ ನೀಡದೆ ತಬ್ಬಿಬ್ಬಾದ ದಿಗಂತ್‌ ಕೊಕೇನ್‌ ಸಂಬಂಧ ಉತ್ತರಿಸಲು ತನಿಖಾಧಿಕಾರಿಗಳ ಬಳಿ ಸಮಯ ಕೋರಿದ್ದಾರಂತೆ.

Published On - 4:09 pm, Wed, 23 September 20

Follow Us
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು