‘ಇಂದ್ರಜಿತ್ ಸಾಮಾಜಿಕವಾಗಿ ಮಾಡಿದ್ದು ಸರಿ, ಆದ್ರೆ ಮೊದ್ಲು ಚೇಂಬರ್​ಗೆ ಬರಬೇಕಿತ್ತು’

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ನಮ್ಮ ಸದಸ್ಯನೆ. ಸಾಮಾಜಿಕವಾಗಿ ಇಂದ್ರಜಿತ್ ಮಾಡಿದ್ದು ಸರಿ, ಆದ್ರೆ ಮೊದಲು ಅವರು ಫಿಲ್ಮ್ ಚೇಂಬರ್​ಗೆ ಬರಬೇಕಿತ್ತು ಎಂದು ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅಭಿಪ್ರಾಯಪಟ್ಟಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ನಶೆ ದುರ್ಗಂಧ ತೇಲಿ ಬಂದಿರುವ ಹಿನ್ನೆಲೆಯಲ್ಲಿ ಇಂದು ಚೇಂಬರಿನಲ್ಲಿ ನಡೆದ ಮಹತ್ವದ ಸಭೆಯ ನಂತ್ರ ಮಾತ್ನಾಡಿದ ಚೇಂಬರಿನ ಹಿರಿಯ ಸದಸ್ಯ ಸಾರಾ ಗೋವಿಂದು ಆರೋಪ ಸಾಬೀತಾದ್ರೆ ಯಾರೇ ಆಗಿರಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂದ್ರಜಿತ್ ಮೊದಲು ಚೇಂಬರ್ ಗೆ ಬರಬೇಕಿತ್ತು. ಸುಮ್ಮನೆ ಯಾರ […]

‘ಇಂದ್ರಜಿತ್ ಸಾಮಾಜಿಕವಾಗಿ ಮಾಡಿದ್ದು ಸರಿ, ಆದ್ರೆ ಮೊದ್ಲು ಚೇಂಬರ್​ಗೆ  ಬರಬೇಕಿತ್ತು’
ಸಾಧು ಶ್ರೀನಾಥ್​

Updated on: Sep 02, 2020 | 1:16 PM

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಕೂಡ ನಮ್ಮ ಸದಸ್ಯನೆ. ಸಾಮಾಜಿಕವಾಗಿ ಇಂದ್ರಜಿತ್ ಮಾಡಿದ್ದು ಸರಿ, ಆದ್ರೆ ಮೊದಲು ಅವರು ಫಿಲ್ಮ್ ಚೇಂಬರ್​ಗೆ ಬರಬೇಕಿತ್ತು ಎಂದು ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ನಶೆ ದುರ್ಗಂಧ ತೇಲಿ ಬಂದಿರುವ ಹಿನ್ನೆಲೆಯಲ್ಲಿ ಇಂದು ಚೇಂಬರಿನಲ್ಲಿ ನಡೆದ ಮಹತ್ವದ ಸಭೆಯ ನಂತ್ರ ಮಾತ್ನಾಡಿದ ಚೇಂಬರಿನ ಹಿರಿಯ ಸದಸ್ಯ ಸಾರಾ ಗೋವಿಂದು ಆರೋಪ ಸಾಬೀತಾದ್ರೆ ಯಾರೇ ಆಗಿರಲಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂದ್ರಜಿತ್ ಮೊದಲು ಚೇಂಬರ್ ಗೆ ಬರಬೇಕಿತ್ತು. ಸುಮ್ಮನೆ ಯಾರ ಯಾರ ಮೇಲೋ ಆರೋಪ ಮಾಡಿದ್ರೆ ಸಾಲದು. ಆ ಆರೋಪ ಸಾಬೀತಾಗಲೇ ಬೇಕು. ಇದು ಚಿತ್ರರಂಗದ ಭವಿಷ್ಯ ಎಂದು ಅವರು ಹೇಳಿದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us