AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಗಳನ್ನು ಫಿದಾ ಮಾಡಿರುವ ಕ್ರೇಜಿಸ್ಟಾರ್ ಹೊಸ ಲುಕ್ | Fans go gaga over Crazy Star Ravichandran’s new look

ಕೊರೊನಾ ಪಿಡುಗು ಸೃಷ್ಟಿಸಿದ ಲಾಕ್​ಡೌನ್​ಗಳಿಂದಾಗಿ ಚಿತ್ರಮಂದಿರಗಳೆಲ್ಲ ಸುಮಾರು 6 ತಿಂಗಳು ಕಾಲ ಮುಚ್ಚಿದ್ದವು. ಈಗಷ್ಟೇ ಥಿಯೇಟರ್​ಗಳು ಕ್ರಮೇಣ ಒಂದೊಂದಾಗಿ ಪ್ರದರ್ಶನಗಳನ್ನು ಆರಂಭಿಸಿವೆ. ಏತನ್ಮಧ್ಯೆ ಹೊಸ ಸಿನಿಮಾಗಳು ಲಾಂಚ್ ಆಗುತ್ತಿದ್ದು ಕೆಲ ಚಿತ್ರಗಳ ಚಿತ್ರೀಕರಣ ಕೂಡ ಆರಂಭವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಸ ಫಿಲ್ಮ್ ‘ಕನ್ನಡಿಗ’ದ ಶೂಟಿಂಗ್ ಸಹ ಶುರುವಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಹೊಸ ಬಗೆಯ ಪಾತ್ರವೊಂದರಲ್ಲಿ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ. ಅವರು ಇದುವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ‘ಕನ್ನಡಿಗ’ ಚಿತ್ರದಲ್ಲಿನ ಪಾತ್ರ ಭಿನ್ನವಾಗಿದೆಯಂತೆ. ಅವರು […]

ಅಭಿಮಾನಿಗಳನ್ನು ಫಿದಾ ಮಾಡಿರುವ ಕ್ರೇಜಿಸ್ಟಾರ್ ಹೊಸ ಲುಕ್ | Fans go gaga over Crazy Star Ravichandran's new look
ಅರುಣ್​ ಕುಮಾರ್​ ಬೆಳ್ಳಿ
|

Updated on:Nov 09, 2020 | 9:17 PM

Share

ಕೊರೊನಾ ಪಿಡುಗು ಸೃಷ್ಟಿಸಿದ ಲಾಕ್​ಡೌನ್​ಗಳಿಂದಾಗಿ ಚಿತ್ರಮಂದಿರಗಳೆಲ್ಲ ಸುಮಾರು 6 ತಿಂಗಳು ಕಾಲ ಮುಚ್ಚಿದ್ದವು. ಈಗಷ್ಟೇ ಥಿಯೇಟರ್​ಗಳು ಕ್ರಮೇಣ ಒಂದೊಂದಾಗಿ ಪ್ರದರ್ಶನಗಳನ್ನು ಆರಂಭಿಸಿವೆ. ಏತನ್ಮಧ್ಯೆ ಹೊಸ ಸಿನಿಮಾಗಳು ಲಾಂಚ್ ಆಗುತ್ತಿದ್ದು ಕೆಲ ಚಿತ್ರಗಳ ಚಿತ್ರೀಕರಣ ಕೂಡ ಆರಂಭವಾಗಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹೊಸ ಫಿಲ್ಮ್ ‘ಕನ್ನಡಿಗ’ದ ಶೂಟಿಂಗ್ ಸಹ ಶುರುವಾಗಿದೆ.

ಈ ಚಿತ್ರದಲ್ಲಿ ರವಿಚಂದ್ರನ್ ಹೊಸ ಬಗೆಯ ಪಾತ್ರವೊಂದರಲ್ಲಿ ಡಿಫರೆಂಟ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ. ಅವರು ಇದುವರೆಗೆ ನಿರ್ವಹಿಸಿರುವ ಪಾತ್ರಗಳಿಗಿಂತ ‘ಕನ್ನಡಿಗ’ ಚಿತ್ರದಲ್ಲಿನ ಪಾತ್ರ ಭಿನ್ನವಾಗಿದೆಯಂತೆ. ಅವರು ನಿರ್ವಹಿಸುತ್ತಿರುವ ಪಾತ್ರದ ಹೆಸರು ಗುಣಭದ್ರ ಎಂದು ಗೊತ್ತಾಗಿದೆ. ಬಿಳಿ ಪಂಚೆ, ತಲೆ ಮೇಲೆ ಮುಂಡಾಸು ಮತ್ತು ಮುಖದ ಮೇಲೆ ಗಿರಿಜಾ ಮೀಸೆ ಹೊತ್ತ ರವಿಚಂದ್ರನ್ ಅವರ ಇಮೇಜ್ ಅಭಿಮಾನಿಗಳ ಕುತೂಹಲ ಕೆರಳಿಸುವದರೊಂದಿಗೆ ವೈರಲ್ ಕೂಡ ಆಗಿಬಿಟ್ಟಿದೆ.

ಐತಿಹಾಸಿಕ ಕಥಾ ಹಂದರವುಳ್ಳ ಚಿತ್ರವನ್ನು ಬಿ.ಎಂ ಗಿರಿರಾಜ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಖ್ಯಾತ ಬಾಲಿವುಡ್ ನಟ ಟಾಮ್ ಆಲ್ಟರ್ ಅವರ ಮಗ ಜೆಮೀ ಆಲ್ಟರ್, ಕನ್ನಡಇಂಗ್ಲಿಷ್ ನಿಘಂಟು ರಚಿಸಿದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು. ‘ಕೆಜಿಎಫ್’ ಚಿತ್ರಕ್ಕೆ ಸಂಗೀತ ನೀಡಿದ ರವಿ ಬಸ್ರೂರ್ ‘ಕನ್ನಡಿಗ’ ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಲಿದ್ದಾರೆ.

ರವಿಚಂದ್ರನ್ ಖುದ್ದು ಈ ಸಿನಿಮಾದ ಬಗ್ಗೆ ಬಹಳ ರೋಮಾಂಚಿತರಾಗಿದ್ದು ಇದರಲ್ಲಿರುವಂಥ ಪಾತ್ರವನ್ನು ಹಿಂದೆಂದೂ ಮಾಡಿಲ್ಲವೆಂದು ಹೇಳಿದ್ದಾರೆ.

Published On - 9:16 pm, Mon, 9 November 20

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ