‘ಅವರನ್ನ ಪಾರ್ಟಿಯಲ್ಲಿ ಭೇಟಿಯಾಗಿರಬಹುದು, ಆದರೆ ಅಷ್ಟು ನೆನಪಾಗ್ತಿಲ್ಲ’

ಬೆಂಗಳೂರು: ಡ್ರಗ್ಸ್​ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ದ್ವಿವೇದಿಯನ್ನ CCB ಅಧಿಕಾರಿಗಳು ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿಚಾರಣೆಗೆ ಒಳಪಡಿಸಿದರು. ಇನ್​ಸ್ಪೆಕ್ಟರ್​ಗಳಾದ ಅಂಜುಮಾಲಾ ನಾಯಕ್​ ಹಾಗೂ ಪುನೀತ್‌ರಿಂದ ವಿಚಾರಣೆ ನಡೆಸಲಾಯಿತು. ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ನಟಿಗೆ ಇತರೆ ಬಂಧಿತ ಆರೋಪಿಗಳ ಜೊತೆಗಿನ ಸಂಪರ್ಕದ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ರವಿಶಂಕರ್, ಪ್ರಶಾಂತ್ ರಂಕಾ, ಲೂಮ್ ಪೆಪ್ಪರ್ ಮತ್ತು ರಾಹುಲ್ ಜೊತೆಗೆ ಸಂಪರ್ಕವಿದ್ದ ಬಗ್ಗೆ ಸಹ ವಿಚಾರಣೆ ನಡೆಸಿದ್ದಾರೆ. ರಾಗಿಣಿ ಎಲ್ಲರನ್ನೂ ಭೇಟಿಯಾಗಿರುವುದಕ್ಕೆ […]

‘ಅವರನ್ನ ಪಾರ್ಟಿಯಲ್ಲಿ ಭೇಟಿಯಾಗಿರಬಹುದು, ಆದರೆ ಅಷ್ಟು ನೆನಪಾಗ್ತಿಲ್ಲ’

Updated on: Sep 06, 2020 | 6:03 PM

ಬೆಂಗಳೂರು: ಡ್ರಗ್ಸ್​ ಪ್ರಕರಣದಲ್ಲಿ ಬಂಧಿಯಾಗಿರುವ ನಟಿ ರಾಗಿಣಿ ದ್ವಿವೇದಿಯನ್ನ CCB ಅಧಿಕಾರಿಗಳು ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿಚಾರಣೆಗೆ ಒಳಪಡಿಸಿದರು. ಇನ್​ಸ್ಪೆಕ್ಟರ್​ಗಳಾದ ಅಂಜುಮಾಲಾ ನಾಯಕ್​ ಹಾಗೂ ಪುನೀತ್‌ರಿಂದ ವಿಚಾರಣೆ ನಡೆಸಲಾಯಿತು.
ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ ಅಧಿಕಾರಿಗಳು ನಟಿಗೆ ಇತರೆ ಬಂಧಿತ ಆರೋಪಿಗಳ ಜೊತೆಗಿನ ಸಂಪರ್ಕದ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ ರವಿಶಂಕರ್, ಪ್ರಶಾಂತ್ ರಂಕಾ, ಲೂಮ್ ಪೆಪ್ಪರ್ ಮತ್ತು ರಾಹುಲ್ ಜೊತೆಗೆ ಸಂಪರ್ಕವಿದ್ದ ಬಗ್ಗೆ ಸಹ ವಿಚಾರಣೆ ನಡೆಸಿದ್ದಾರೆ.

ರಾಗಿಣಿ ಎಲ್ಲರನ್ನೂ ಭೇಟಿಯಾಗಿರುವುದಕ್ಕೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡು ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಪಾರ್ಟಿಯಲ್ಲಿ ಅವರನ್ನ ಭೇಟಿಯಾಗಿರಬಹುದು. ನನಗೆ ಅಷ್ಟು ನೆನಪಾಗ್ತಿಲ್ಲ ಅಂತಾ ರಾಗಿಣಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರಂತೆ.