ಒಬ್ಬ ವ್ಯಕ್ತಿ ಸಾಯುವ ಮೊದಲು ಈ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾನೆ! ಇಲ್ಲಿದೆ ಮಾಹಿತಿ

ಒಬ್ಬ ವ್ಯಕ್ತಿಯು ಸಾವಿಗೆ ಹತ್ತಿರವಾಗುತ್ತಿದ್ದಂತೆ ಆತನ ಕೆಲವು ಇಂದ್ರಿಯಗಳು ನಿಷ್ಕ್ರಿಯಗೊಳ್ಳುತ್ತದೆ ಎಂದು ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಉಪಶಾಮಕ ಆರೈಕೆ ತಜ್ಞರು ಹೇಳಿದ್ದಾರೆ. ರೋಗಿಯು ತನ್ನ ಕೊನೆಯ ದಿನಗಳಲ್ಲಿ ಮೊದಲು ಹಸಿವು ಮತ್ತು ಬಾಯಾರಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ, ನಂತರ ಮಾತು ಮತ್ತು ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳಿದ್ದಾರೆ.

ಒಬ್ಬ ವ್ಯಕ್ತಿ ಸಾಯುವ ಮೊದಲು ಈ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾನೆ! ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Edited By:

Updated on: Apr 25, 2023 | 4:57 PM

ಪ್ರೀತಿಪಾತ್ರರನ್ನು ಕಳೆದುಕೊಳ್ಳುವುದು ಮತ್ತು ಯಾರಾದರೂ ನಮ್ಮನ್ನು ಅಗಲಿ ಹೋಗುವ ಸಂದರ್ಭ ಊಹಿಸಲಾಗದಷ್ಟು ನೋವನ್ನು ಉಂಟು ಮಾಡುತ್ತದೆ. ವ್ಯಕ್ತಿಯು ಸಾಯುವ ಮೊದಲು ನಾನು ಸಾಯುತ್ತಿದ್ದೇನೆ ಎಂಬ ಸೂಚನೆಗಳು ಆತನ ಅರಿವಿಗೆ ಬರುತ್ತದೆಯಂತೆ ಎಂದು ಹೇಳುವ ಮಾತುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಕೇಳಿರುತ್ತೇವೆ. ಒಬ್ಬ ವ್ಯಕ್ತಿಯ ಅಂತ್ಯ ಸಮೀಪಿಸುತ್ತಿದೆ ಎಂದಾಗ ಆತ ಹೇಗೆ ಭಾವಿಸುತ್ತಾನೆ ಮತ್ತು ಯಾವ ಇಂದ್ರಿಯಗಳನ್ನು ಆತ ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ ಎಂಬುದರ ಕುರಿತು ಸ್ಟಾನ್ ಫೋರ್ಡ್ ವಿಶ್ವವಿದ್ಯಾನಿಲಯದ ಉಪಶಾಮಕ ಆರೈಕೆ ತಜ್ಞರು ಹೇಳಿದ್ದಾರೆ. ಒಬ್ಬ ರೋಗಿಯು ಸಾಯುವ ಮೊದಲು ಅನುಕ್ರಮವಾಗಿ ಯಾವೆಲ್ಲಾ ಇಂದ್ರಿಯಗಳನ್ನು ಕಳೆದುಕೊಳ್ಳುತ್ತಾ ಬರುತ್ತಾನೆ ಎಂಬುದನ್ನು ತಜ್ಞರು ಪಟ್ಟಿ ಮಾಡಿದ್ದಾರೆ.

ಪೆಲ್ಲಿಯೆಟಿವ್ ಕೇರ್ ಪ್ರೋಸ್ಪೆಕ್ಟಿವ್ (ಉಪಶಮನ ಆರೈಕೆ ದೃಷ್ಟಿಕೋನ) ಪುಸ್ತಕದಲ್ಲಿ ಬರೆಯುತ್ತಾ, ರೋಗಿಯು ತಾನು ಸಾಯುವ ಕೊನೆಯ ದಿನಗಳಲ್ಲಿ ಮೊದಲಿಗೆ ಹಸಿವು ಮತ್ತು ಬಾಯಾರಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತಾನೆ. ನಂತರ ಮಾತು ಮತ್ತು ದೃಷ್ಟಿಯನ್ನು ಕಳೆದುಕೊಳ್ಳುತ್ತಾನೆ. ಇದರ ನಂತರ ರೋಗಿಯು ಕಳೆದುಕೊಳ್ಳುವ ಇಂದ್ರಿಯಗಳೆಂದರೆ ಸ್ಪರ್ಶ ಮತ್ತು ಶ್ರವಣ ಇಂದ್ರೀಯಗಳು ಎಂದು ತಜ್ಞರು ಹೇಳಿದ್ದಾರೆ. ವ್ಯಕ್ತಿಯು ಮಾತನಾಡುವ ಸಾಮರ್ಥ್ಯವನ್ನು ಕಳೆದುಕೊಂಡ ನಂತರ ಸಾಯುವಾಗ ಆ ವ್ಯಕ್ತಿ ಯಾವ ಭಾವನೆಯನ್ನು ಅನುಭವಿಸುತ್ತಾನೆ ಎಂದು ಹೇಳಲು ಕಷ್ಟಕರವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ: Health Tips: ಆರೋಗ್ಯ ಸಲಹೆ- ಬೆಳಿಗ್ಗೆ ಸಮಯ ಟಿಫಿನ್ ತಿಂದ ಮೇಲೆ ನೀವು ಸ್ನಾನ ಮಾಡುತ್ತಿದ್ದೀರಾ? ಮೊದಲು ಈ ವಿಷಯಗಳನ್ನು ತಿಳಿಯಿರಿ!

ಇದು ಕೋಮ ಸ್ಥಿತಿಗೆ ಹೋಗುವಾಗ ಆಗಿರುತ್ತದೆಯೇ?

ಇದು ಪ್ರಜ್ಞಾಹೀನ ಸ್ಥಿತಿಯಲ್ಲಿ ಕೋಮಾಗೆ ಹೋಗುವ ಹಾಗೆ ಇರುವುದಿಲ್ಲ. ಅವೆರಡು ಒಂದೇ ಅಲ್ಲ ಆದರೆ ಕನಸಿನ ಸ್ಥಿತಿಯಂತೆ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕೆಲವು ವ್ಯಕ್ತಿಗಳು ಅಥವಾ ರೋಗಿಗಳು ಚಂಡಮಾರುತ ಬರುತ್ತಿದೆ, ಸಾಗರದ ಅಲೆಗಳು ಅಪ್ಪಲಿಸಿದಂತಾಗುತ್ತದೆ ಎಂದು ವಿವರಿಸಬಹುದು. ಕ್ರಮೇಣ ಅವರು ಎತ್ತರಕ್ಕೆ ಏರುತ್ತಾರೆ.  ಜೀವನದ ಅಂತ್ಯದ ಪ್ರಕ್ರಿಯೆಯ ಭಾಗವಾಗಿ ರೋಗಿಗಳು ತಮ್ಮ ಇಂದ್ರಿಯಗಳನ್ನು ಕಳೆದುಕೊಳ್ಳಬಹುದು.

ವ್ಯಕ್ತಿಯ ಜೀವನದ ಕೊನೆಯ ಹಂತದಲ್ಲಿ ಆತನಿಗೆ ಬಿಳಿ ಬೆಳಕಿನ ಅನುಭವ ಉಂಟಾಗುತ್ತದೆ. ಈ ಅನುಭವವು ಮೆದುಳಿನಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳಿಂದ ಬರುತ್ತದೆ ಎಂದು ಹೇಳಲಾಗುತ್ತದೆ. ಮೆದುಳಿನ ಕೆಲವು ಭಾಗಗಳು ಸಾಯುವಾಗ ಇದು ಸಂಭವಿಸುತ್ತದೆ. ಮತ್ತು ದೃಷ್ಟಿ ವ್ಯವಸ್ಥೆಯ ಭಾಗಗಳು ಓವರ್ಡ್ರೈವ್​ಗೆ ಹೋಗಬಹುದು. ಇದರ ಪರಿಣಾಮವಾಗಿ ರೋಗಿಗಳು ಸಾವಿಗೆ ಸಮೀಪಿಸುತ್ತಿರುವಾಗ ಬಿಳಿ ಬೆಳಕು ಅಥವಾ ಪ್ರಪಾತಗಳನ್ನು ನೋಡಲು ಆರಂಭಿಸುತ್ತಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:23 pm, Tue, 25 April 23

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us