ಸಕ್ಕರೆ ಕಾಯಿಲೆ ಇರುವವರು ಉಪವಾಸ ವ್ರತ ಮಾಡಬಹುದೇ?

|

Updated on: Oct 18, 2023 | 12:55 PM

ಉಪವಾಸ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅನೇಕ ಅಧ್ಯಯನಗಳು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ. ಆದರೆ, ನೀವು ಮಧುಮೇಹಿಗಳಾಗಿದ್ದರೆ ಉಪವಾಸ ಮಾಡಬಹುದಾ?

ಸಕ್ಕರೆ ಕಾಯಿಲೆ ಇರುವವರು ಉಪವಾಸ ವ್ರತ ಮಾಡಬಹುದೇ?
ಮಧುಮೇಹ
Image Credit source: iStock
Follow us on

ಮಧುಮೇಹವು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಾಧಿಸುವ ಸಾಮಾನ್ಯ ರೋಗಗಳಲ್ಲಿ ಒಂದಾಗಿದೆ. ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಬಹಳ ಹೆಚ್ಚಿದೆ. ನೀವು ಮಧುಮೇಹಿಗಳಾಗಿದ್ದರೆ ನಿಮ್ಮ ಜೀವನಶೈಲಿಯನ್ನು ಮಾರ್ಪಡಿಸುವ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬೇಕು. ಇಲ್ಲವಾದರೆ, ಈ ಸಮಸ್ಯೆ ಬೇರೆ ರೋಗಗಳನ್ನೂ ಆಹ್ವಾನಿಸಬಹುದು. ಇದೀಗ ನವರಾತ್ರಿ ಆರಂಭವಾಗಿದೆ. ನವರಾತ್ರಿ ಸಂದರ್ಭದಲ್ಲಿ ಬಹುತೇಕರು ಉಪವಾಸ ವ್ರತ ಮಾಡುತ್ತಾರೆ. ಆದರೆ, ಮಧುಮೇಹ ಇರುವವರು ಬಹಳ ಸಮಯ ಹಸಿದುಕೊಂಡು ಇರಬಾರದು. ಹೀಗಾಗಿ, ಮಧುಮೇಹ ಇರುವವರು ಉಪವಾಸ ಮಾಡಬಹುದೇ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮಧುಮೇಹ ಹೊಂದಿರುವ ಜನರಿಗೆ ದೀರ್ಘ ಸಮಯದ ಉಪವಾಸ ಇರುವಂತಿಲ್ಲ ಎಂದು ವೈದ್ಯರು ಸೂಚಿಸುತ್ತಾರೆ. ಉಪವಾಸ ಇದ್ದರೆ ಇದು ಹೈಪೊಗ್ಲಿಸಿಮಿಯಾ ಅಪಾಯವನ್ನು ಹೆಚ್ಚಿಸುತ್ತದೆ. ಅಂದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಗಳು ಅಪಾಯಕಾರಿಯಾಗಿ ಕಡಿಮೆಯಾಗಬಹುದು.

ನವರಾತ್ರಿಯ ಸಮಯದಲ್ಲಿ ಹೆಚ್ಚಿನ ಜನರು 9 ದಿನಗಳ ಕಾಲ ಉಪವಾಸವನ್ನು ಆಚರಿಸುತ್ತಾರೆ. ಜನರು ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರವನ್ನು ತ್ಯಜಿಸುತ್ತಾರೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಆಹಾರ ಸೇವಿಸುತ್ತಾರೆ. ಮುಖ್ಯವಾಗಿ ನೀರು, ಹಣ್ಣುಗಳು ಮತ್ತು ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸುತ್ತಾರೆ.

ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಿಸಲು ಮುಖಕ್ಕೆ ಜೇನುತುಪ್ಪ ಹಚ್ಚಿ ನೋಡಿ

ಉಪವಾಸವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅನೇಕ ಅಧ್ಯಯನಗಳು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಸೂಚಿಸುತ್ತದೆ. ಆದರೆ, ನೀವು ಮಧುಮೇಹಿಗಳಾಗಿದ್ದರೆ, ನವರಾತ್ರಿ ಉಪವಾಸವು ನಿಮ್ಮ ಆರೋಗ್ಯಕ್ಕೆ ಸೂಕ್ತವಲ್ಲ. ಅಕಾರ್ಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ. ಮುಕುಂದ್ ಸಿಂಗ್ ಪ್ರಲಾರ, ನವರಾತ್ರಿಯಲ್ಲಿ ದೀರ್ಘಾವಧಿ ಉಪವಾಸ ಮಾಡುವುದು ಮಧುಮೇಹಿಗಳಿಗೆ ಸಾಕಷ್ಟು ತೊಂದರೆಗಳನ್ನು ಉಂಟುಮಾಡಬಹುದು.

ದೀರ್ಘಾವಧಿಯವರೆಗೆ ಉಪವಾಸ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶದಲ್ಲಿ ಏರಿಳಿತಗಳನ್ನು ಉಂಟುಮಾಡಬಹುದು. ಇದು ಕಡಿಮೆ ಮತ್ತು ಅಧಿಕ ರಕ್ತದ ಸಕ್ಕರೆಯ ಅಂಶಗಳಿಗೆ ಕಾರಣವಾಗುತ್ತದೆ. ಮಧುಮೇಹ ಹೊಂದಿರುವ ಅನೇಕ ವ್ಯಕ್ತಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಇನ್ಸುಲಿನ್ ಅನ್ನು ಅವಲಂಬಿಸಿರುತ್ತಾರೆ. ಉಪವಾಸದ ಸಮಯದಲ್ಲಿ ಆಹಾರ ಪದ್ಧತಿಯಲ್ಲಿನ ಬದಲಾವಣೆಯನ್ನು ಸರಿಹೊಂದಿಸಲು ಸಮಯಗಳು, ಪ್ರಮಾಣಗಳು ಅಥವಾ ಔಷಧಿಗಳ ಪ್ರಕಾರಗಳನ್ನು ಸರಿಹೊಂದಿಸುವುದು ಅಗತ್ಯವಾಗಬಹುದು.

ಇದನ್ನೂ ಓದಿ: World Anaesthesia Day 2023: ಆಪರೇಷನ್​ಗೆ ಅನಸ್ತೇಷಿಯಾದಿಂದ ಏನು ಪ್ರಯೋಜನ? ಅರಿವಳಿಕೆಯ ಅಪಾಯಗಳೇನು?

ಆದರೆ, ನೀವು ನವರಾತ್ರಿಯ ಉಪವಾಸ ಮಾಡಲೇಬೇಕೆಂದು ನಿರ್ಧರಿಸಿದರೆ, ನೀವು ಮಧುಮೇಹಿಗಳಾಗಿದ್ದರೆ ಈ ಕೆಲವು ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳಿ.

– ಉಪವಾಸ ಆರಂಭಿಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.

– ಉಪವಾಸದ ಸಮಯದಲ್ಲಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ. ಅದು ಹೆಚ್ಚು ಅಥವಾ ಕಡಿಮೆ ಆಗದಂತೆ ನೋಡಿಕೊಳ್ಳಿ.

– ನಿರ್ಜಲೀಕರಣವನ್ನು ತಡೆಗಟ್ಟಲು ಉಪವಾಸವಿಲ್ಲದ ಅವಧಿಯಲ್ಲಿ ಸಾಕಷ್ಟು ನೀರು ಕುಡಿಯಿರಿ.

– ಉಪವಾಸವಿಲ್ಲದ ಸಮಯದಲ್ಲಿ ಗ್ಲೂಕೋಸ್‌ನ ನಿಧಾನ ಬಿಡುಗಡೆಯನ್ನು ಒದಗಿಸುವ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಪೌಷ್ಟಿಕಾಂಶದ, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರಗಳನ್ನು ಸೇವಿಸಿ.

– ಸೂರ್ಯಾಸ್ತದ ನಂತರ ಉಪವಾಸವನ್ನು ಮುರಿಯುವಾಗ, ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹಠಾತ್ ಸ್ಪೈಕ್​ಗಳನ್ನು ತಡೆಗಟ್ಟಲು ಸಮತೋಲಿತ ಮತ್ತು ಆರೋಗ್ಯಕರ ಊಟವನ್ನು ಸೇವಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ