AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರೆ ಮಾತ್ರೆ ಸೇವಿಸುವುದರಿಂದ ಸಮಸ್ಯೆಗಳು ಒಂದಾ, ಎರಡಾ..?

ಜೀವನದಲ್ಲಿ ಸಮಸ್ಯೆಗಳು ಸಹಜ. ಇದನ್ನು ಎದುರಿಸಿ ಮುಂದೆ ಸಾಗುವುದೇ ಬದುಕಿಗೊಂದು ಅರ್ಥ ಸಿಕ್ಕಂತೆ. ಸಾಮಾನ್ಯವಾಗಿ ಬದುಕಿನಲ್ಲಿ ಪ್ರೀತಿ ಪಾತ್ರರನ್ನು ಕಳೆದು ಕೊಂಡಾಗ ಅಥವಾ ಇತರ ಸಾಮಾಜಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುತ್ತಾರೆ. ಕೆಲವರು ಇದರಿಂದ ಬೇಗ ಹೊರಬಂದರೆ, ಇನ್ನು ಕೆಲವರು ಒತ್ತಡದಲ್ಲಿ ಸಿಲುಕಿ ಅನುಭವಿಸುತ್ತಿರುತ್ತಾರೆ. ಈ ವೇಳೆಯಲ್ಲಿ ನಿದ್ರೆ ಮಾತ್ರೆಗಳನ್ನು ಮನೋವೈದ್ಯರೇ ಅಂತಹ ವ್ಯಕ್ತಿಗಳಿಗೆ ನೀಡುತ್ತಾರೆ.

ನಿದ್ರೆ ಮಾತ್ರೆ ಸೇವಿಸುವುದರಿಂದ ಸಮಸ್ಯೆಗಳು ಒಂದಾ, ಎರಡಾ..?
ಮಾತ್ರೆಗಳನ್ನು ಜೀವನ ಪೂರ್ತಿ ತೆಗೆದುಕೊಂಡರೆ ಅಧಿಕ ರಕ್ತದೊತ್ತಡ, ಕಿಡ್ನಿ ಸೇರಿದಂತೆ ಹಲವು ದೈಹಿಕ ಸಮಸ್ಯೆಗಳು ಉದ್ಭವಾಗುತ್ತದೆ.
sandhya thejappa
|

Updated on:Nov 30, 2020 | 5:49 PM

Share

ಯಾವಾಗಪ್ಪಾ ಬೆಳಗಾಗುತ್ತೆ ಅನ್ನೋ ಜನರಿಗೆ ನಿದ್ರೆ ಸಮಸ್ಯೆ ಖಂಡಿತಾ ಇರುತ್ತೆ. ಆದರೆ ಈ ಸಮಸ್ಯೆಗೆ ಕಾರಣ ಖಿನ್ನತೆ. ಪ್ರತಿನಿತ್ಯ ನಿದ್ರೆ ಬಾರದೆ ಮನೋವೈದ್ಯ ಸಲಹೆ ಪಡೆದು ಮಾತ್ರೆ ಸೇವಿಸುವವರಿಗೆ ಈ ನಿದ್ರೆಗುಳಿಗೆಗಳಿಂದಾಗುವ ಸಮಸ್ಯೆಗಳ ಬಗ್ಗೆ ಗಂಭೀರ ಚಿಂತನೆ ಇರುವುದಿಲ್ಲ.

ಜೀವನದಲ್ಲಿ ಸಮಸ್ಯೆಗಳು ಸಹಜ. ಇದನ್ನು ಎದುರಿಸಿ ಮುಂದೆ ಸಾಗುವುದರಿಂದ ಬದುಕಿಗೊಂದು ಅರ್ಥ ಸಿಗುತ್ತದೆ. ಜನ ಸಾಮಾನ್ಯವಾಗಿ ವೈಯಕ್ತಿಕ ಸಮಸ್ಯೆಗಳು ಅಥವಾ ಇತರ ಸಾಮಾಜಿಕ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗುತ್ತಾರೆ. ಇದಕ್ಕೆ ಲೇಟೆಸ್ಟ್​ ಆಗಿ ರಾಜಕೀಯ ಒತ್ತಡವೂ ಸೇರಿದೆ. ಕೆಲವರು ಇದರಿಂದ ಬೇಗ ಹೊರಬಂದರೆ, ಇನ್ನು ಕೆಲವರು ಒತ್ತಡದಲ್ಲಿ ಸಿಲುಕಿ ಯಾತನೆ ಪಡುತ್ತಿರುತ್ತಾರೆ. ಈ ವೇಳೆಯಲ್ಲಿ ಮನೋವೈದ್ಯರೇ ಅಂತಹ ವ್ಯಕ್ತಿಗಳಿಗೆ ನಿದ್ರೆ ಮಾತ್ರೆಗಳನ್ನು ನೀಡುತ್ತಾರೆ.

ನಿದ್ರೆ ಮಾತ್ರೆಗಳಿಂದಾಗುವ ಸಮಸ್ಯೆಗಳೇನು?

ನಿದ್ರೆಯಿಂದ ವಂಚಿತರಾದ ಜನರು ಮನೋವೈದ್ಯರಿಂದ ಮಾತ್ರೆಗಳನ್ನು ಪಡೆಯುತ್ತಾರೆ. ಸೀಮಿತ ಅವಧಿಯ ವರೆಗೆ ಇದನ್ನು ತೆಗೆದುಕೊಂಡರೆ ಜೀವಕ್ಕೆ ಅಪಾಯವಿಲ್ಲ. ಕೆಲವರು ಹೆಚ್ಚು ಕಾಲದವೆರೆಗೆ ತೆಗೆದುಕೊಂಡಾಗ ಬಿಪಿಗೆ ಸಂಬಂಧಿಸಿದ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿ ಹೆಚ್ಚಾಗುತ್ತದೆ ಎಂದು ಕೆಲ ಅಧ್ಯಯನ ಮೂಲಕ ತಿಳಿದಿದೆ.

ಮಾತ್ರೆಗಳನ್ನು (Sleeping Pills) ಜೀವನ ಪೂರ್ತಿ ತೆಗೆದುಕೊಂಡರೆ ಅಧಿಕ ರಕ್ತದೊತ್ತಡ, ಕಿಡ್ನಿ ಸೇರಿದಂತೆ ಹಲವು ದೈಹಿಕ ಸಮಸ್ಯೆಗಳು ಉದ್ಭವಾಗುತ್ತದೆ. ಕೆಲವರು ಖಿನ್ನತೆಯಿಂದ ಹೊರಬರಲು  ಒಂದೇ ಬಾರಿ ಹತ್ತು ಹದಿನೈದು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. 0.25 ಎಂಜಿ ಡೋಸೇಜ್ ಇರುವ  ಮಾತ್ರೆಗಳನ್ನು ಒಂದೇ ಬಾರಿ ತೆಗೆದುಕೊಂಡಾಗ 2 ರಿಂದ 3 ದಿನಗಳ ಕಾಲ ಆರೋಗ್ಯ ತಪ್ಪುತ್ತಾರೆ. ಆದರೆ ಜೀವಕ್ಕೆ ಆಪಾಯವಿಲ್ಲ. ಜಾಸ್ತಿ ಡೊಸೇಜ್ ಇರುವ ಮಾತ್ರೆಗಳನ್ನು ಸೇವಿಸಿದಾಗ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ  ಎಂದು ಆಪ್ತ ಸಮಾಲೋಚಕಿ ಸೌಜನ್ಯ ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ.

ಮಾತ್ರೆಗಳನ್ನು (Sleeping Tablets) ನಿಲ್ಲಿಸಿದ ಬಳಿಕ ನಿದ್ರೆ ಕೊರತೆ ಮತ್ತೆ ಉಂಟಾದರೆ ಹಿಂದೆ ಪಡೆಯುತ್ತಿದ್ದ ಡೊಸೇಜ್​ಗಿಂತ ಹೆಚ್ಚು ಡೊಸೇಜ್ ಇರುವ ಮಾತ್ರೆಯನ್ನು ವೈದ್ಯರು ನೀಡುತ್ತಾರೆ. ಕೆಲವೊಮ್ಮೆ ಮಕ್ಕಳು ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ನಿದ್ರೆ ಮಾತ್ರೆಗಳನ್ನು ನೀಡದೆ, ಅವರಿಗೆ ಕೆಲವೊಂದು ಚಟುವಟಿಕೆಗಳ ಮೂಲಕ ಸಹಜ ಸ್ಥಿತಿಗೆ ತರಲು ಹಲವು ಪ್ರಯತ್ನಗಳು ವೈದ್ಯರಿಂದ ನಡೆಯುತ್ತದೆ ಎಂದರು.

Published On - 3:22 pm, Mon, 30 November 20

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ