Quitting smoking: ಧೂಮಪಾನ ಸೇವನೆ ಕಡಿಮೆಯಾಗುತ್ತಿದೆ! ಯಾಕೆ ಗೊತ್ತಾ? ಏನಿದೆ ಸದ್ಯದ ಚಿತ್ರಣ?

Quit Smoking: ಇಲ್ಲೊಂದು ಜಾಣ್ಮೆಯ ನುಡಿ ಹೇಳಬೇಕು ಅಂದರೆ ಜನರು, ವಿಶೇಷವಾಗಿ ಯುವಕರು, ಸಾಮಾನ್ಯವಾಗಿ ಗೆಳೆಯರ ಒತ್ತಡದಿಂದಾಗಿ, ಪರಿಸ್ಥಿತಿಗಳ ಒತ್ತಡದಿಂದಾಗಿ ಧೂಮಪಾನವನ್ನು ಪ್ರಾರಂಭಿಸುತ್ತಾರೆ. ಒಮ್ಮೆ ಆರಂಭಿಸಿದರೆ ನಿಲ್ಲಿಸುವುದು ಕಷ್ಟವಾಗುತ್ತದೆ. ತಂಬಾಕು ಧೂಮಪಾನ ಪ್ರಾರಂಭಿಸಿದ ನಂತರ ಅದನ್ನು ಬಿಟ್ಟುಬಿಡುವುದಕ್ಕೆ ಪ್ರಯತ್ನಿಸುವುದಕ್ಕಿಂತಾ ಎಂದಿಗೂ ಅದನ್ನು ಪ್ರಾರಂಭಿಸದಿರುವುದು ಉತ್ತಮ ಅನಿಸುತ್ತದೆ.

Quitting smoking: ಧೂಮಪಾನ ಸೇವನೆ ಕಡಿಮೆಯಾಗುತ್ತಿದೆ! ಯಾಕೆ ಗೊತ್ತಾ? ಏನಿದೆ ಸದ್ಯದ ಚಿತ್ರಣ?
ಧೂಮಪಾನವನ್ನು ನಿಲ್ಲಿಸಲು ಸಾಧ್ಯವಾ?
ಸಾಧು ಶ್ರೀನಾಥ್​

Updated on: May 16, 2024 | 3:20 PM

ಹೊಗೆ ಸಂಕೇತಗಳು: ಸಿಗರೇಟ್ ಮತ್ತು ಬೀಡಿ ಸೇವನೆಯು ನಿಮ್ಮ ಜೀವವನ್ನು ಹೇಗೆ ಹೊಗೆಯಾಡಿಸಬಲ್ಲವು, ನಿಮ್ಮ ಆರೋಗ್ಯ ಮತ್ತು ಜೀವಿತಾವಧಿಯ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ಸಾದ್ಯಂತವಾಗಿ ತಿಳಿಯೋಣ. ಕ್ಲುಪ್ತವಾಗಿ ಹೇಳಬೇಕು ಅಂದರೆ ಧೂಮಪಾನಿಗಳು ಸ್ಮೋಕಿಂಗ್​​ ಮಾಡದವರಿಗಿಂತ 3 ಪಟ್ಟು ಬೇಗನೆ ಸಾಯುತ್ತಾರೆ. ಅಂದರೆ ಸುಮಾರು ಒಂದು ದಶಕದಷ್ಟು ತಮ್ಮ ಅಮೂಲ್ಯ ಜೀವಿತಾವಧಿಯನ್ನು ಕಳೆದುಕೊಳ್ಳುತ್ತಾರೆ. ಅದೃಷ್ಟವಶಾತ್, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಗಾಗ್ಗೆ ಜಾರಿಗೊಳಿಸಿರುವ ಕಠಿಣ ಕಾನೂನುಗಳಿಂದಾಗಿ ಸಿಗರೇಟ್ ಸೇವನೆಯು ಪ್ರಪಂಚದಾದ್ಯಂತ ಕ್ಷೀಣಿಸುತ್ತಿದೆ. ಇನ್ನು ಸ್ಮೋಕರುಗಳಿಗೆ ಹೆಚ್ಚು’ವರಿ’ಯಾಗಿ ಕಾಲಕಾಲಕ್ಕೆ ಹೆಚ್ಚು ಹೆಚ್ಚು ತೆರಿಗೆ ವಿಧಿಸುತ್ತಾ ಬಂದಿರುವುದರಿಂದ ಸಿಗರೇಟ್‌ಗಳ ಬೆಲೆ ನಿರಂತರವಾಗಿ ಏರುಗತಿಯಲ್ಲಿಯೇ ಇದೆ. ಸಿಗರೇಟ್​ ಬೆಲೆ ಎಂದಿಗೂ ಕಮ್ಮಿಯಾಗಿಲ್ಲ. ಇದರ ಜೊತೆಗೆ ತಂಬಾಕು ಧೂಮಪಾನದ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಜಾಗೃತಿಯೂ ಕಾರಣೀಭೂತವಾಗಿವಾಗಿದೆ. ಇನ್ನು ಇ-ಸಿಗರೇಟ್‌ಗಳಂತಹ ಕಡಿಮೆ ಹಾನಿಕಾರಕ ಆಯ್ಕೆಗಳು ಸ್ಮೋಕಿಂಗ್​ ದುರಭ್ಯಾಸ ಕಡಿಮೆ ಮಾಡಿಕೊಳ್ಳುವುದಕ್ಕೆ ಶಕ್ತ್ಯಾನುಸಾರ ಕೊಡುಗೆ ನೀಡುತ್ತಿದೆ. ಇಲ್ಲೊಂದು ಜಾಣ್ಮೆಯ ನುಡಿ ಹೇಳಬೇಕು ಅಂದರೆ ಜನರು, ವಿಶೇಷವಾಗಿ ಯುವಕರು, ಸಾಮಾನ್ಯವಾಗಿ ಗೆಳೆಯರ ಒತ್ತಡದಿಂದಾಗಿ, ಪರಿಸ್ಥಿತಿಗಳ ಒತ್ತಡದಿಂದಾಗಿ ಧೂಮಪಾನವನ್ನು ಪ್ರಾರಂಭಿಸುತ್ತಾರೆ. ಒಮ್ಮೆ ಆರಂಭಿಸಿದರೆ ನಿಲ್ಲಿಸುವುದು ಕಷ್ಟವಾಗುತ್ತದೆ. ತಂಬಾಕು ಧೂಮಪಾನ ಪ್ರಾರಂಭಿಸಿದ ನಂತರ ಅದನ್ನು ಬಿಟ್ಟುಬಿಡುವುದಕ್ಕೆ ಪ್ರಯತ್ನಿಸುವುದಕ್ಕಿಂತಾ ಎಂದಿಗೂ ಅದನ್ನು ಪ್ರಾರಂಭಿಸದಿರುವುದು ಉತ್ತಮ ಅನಿಸುತ್ತದೆ. ಈ ಹಿನ್ನೆಲೆಯಲ್ಲಿ ಸಿಗರೇಟ್ ಸೇದುವುದಕ್ಕೆ ಸಂಬಂಧಿಸಿದ ಕೆಲವು...

Published On - 2:23 pm, Thu, 16 May 24

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ