AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನೀವು ಮಿಥುನ ರಾಶಿಯವರೇ? ಮಿಥುನ ರಾಶಿಯಲ್ಲಿ ಚಂದ್ರನಿದ್ದರೆ ನಿಮ್ಮ ಸ್ವಭಾವವು ಈ ರೀತಿ ಇರಲಿದೆ

ನೀವು ಮಿಥುನ ರಾಶಿಯವರೇ? ಹಾಗಿದ್ದರೆ ಚಂದ್ರನು ಮಿಥುನ ರಾಶಿಯಲ್ಲಿ ಇದ್ದರೆ ನಿಮ್ಮ ಸ್ವಭಾವ ಯಾವ ರೀತಿಯಲ್ಲಿರಲಿದೆ ಎಂದು ತಿಳಿದುಕೊಳ್ಳುವ ಹಂಬಲ ನಿಮಗಿದೆಯೇ? ಪುರುಷನಾದರೆ ಸ್ತ್ರೀಲೋಲನೂ ಸ್ತ್ರೀಯಾದರೆ ಪುರುಷಾಸಕ್ತಳೂ ಆಗುವಳು. ಕಾಮದಲ್ಲಿ ಹೆಚ್ಚು ಆಸಕ್ತಿ ಇರುವುದು. ಎರಡೂ ಕಣ್ಣುಗಳ ತುದಿಯ ಭಾಗವು ಕೆಂಪಾಗಿರುವುದು.

Horoscope: ನೀವು ಮಿಥುನ ರಾಶಿಯವರೇ? ಮಿಥುನ ರಾಶಿಯಲ್ಲಿ ಚಂದ್ರನಿದ್ದರೆ ನಿಮ್ಮ ಸ್ವಭಾವವು ಈ ರೀತಿ ಇರಲಿದೆ
ಮಿಥುನ ರಾಶಿ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Aug 29, 2023 | 6:05 AM

Share

ನೀವು ಮಿಥುನ ರಾಶಿಯವರೇ? ಹಾಗಿದ್ದರೆ ಚಂದ್ರನು ಮಿಥುನ (Gemini) ರಾಶಿಯಲ್ಲಿ ಇದ್ದರೆ ನಿಮ್ಮ ಸ್ವಭಾವ ಯಾವ ರೀತಿಯಲ್ಲಿರಲಿದೆ ಎಂದು ತಿಳಿದುಕೊಳ್ಳುವ ಹಂಬಲ ನಿಮಗಿದೆಯೇ? ಅಥವಾ ನಿಮ್ಮ ಸ್ನೇಹ ಬಳಗದಲ್ಲಿ ಮಿಥುನ ರಾಶಿಯವರಿದ್ದರೆ ಅವರ ಬಗ್ಗೆ ತಿಳಿದುಕೊಳ್ಳಲು ಬಯಸಿದ್ದರೆ ಈ ಸುದ್ದಿ ಉಪಯುಕ್ತವಾಗಲಿದೆ. ಚಂದ್ರನು ಮಿಥುನ ರಾಶಿಯಲ್ಲಿ ಇದ್ದರೆ ಅವರ ಸ್ವಭಾವವು ಈ ರೀತಿ ಇರಲಿದೆ.

ಪುರುಷನಾದರೆ ಸ್ತ್ರೀಲೋಲನೂ ಸ್ತ್ರೀಯಾದರೆ ಪುರುಷಾಸಕ್ತಳೂ ಆಗುವಳು. ಕಾಮದಲ್ಲಿ ಹೆಚ್ಚು ಆಸಕ್ತಿ ಇರುವುದು. ಎರಡೂ ಕಣ್ಣುಗಳ ತುದಿಯ ಭಾಗವು ಕೆಂಪಾಗಿರುವುದು. ವಿದ್ಯಾವಂತರಾಗಿರುವರು. ತಲೆಯ ಕೂದಲು ವಕ್ರವಾಗಿ ಇರುವುದು. ದೂತ ಕಾರ್ಯದಲ್ಲಿ ನಿಪುಣನೂ ಚುರುಕಾದ ಬುದ್ಧಿಯುಳ್ಳವರೂ ಆಗುವರು. ಹಾಸ್ಯದಲ್ಲಿ ಹೆಚ್ಚು ಆಸಕ್ತಿ ಇರುವುದು. ಇನ್ನೊಬ್ಬರ ಮನೋಗತವನ್ನು ನೀವು ತಿಳಿದುಕೊಳ್ಳುವಿರಿ.

ಇದನ್ನೂ ಓದಿ: ಈ 5 ರಾಶಿಯವರು ಎಂದಿಗೂ ಮದುವೆಯಾಗಬಾರದು; ಇವರ ವ್ಯಕ್ತಿತ್ವ ಮತ್ತು ಗುಣಗಳನ್ನು ತಿಳಿಯಿರಿ

ದ್ಯೂತ ಮುಂತಾದ ಕೆಟ್ಟ ಹವ್ಯಾಸವನ್ನು ರೂಢಿಸಿಕೊಳ್ಳುವರು. ಸುಂದರ ರೂಪವುಳ್ಳವರಾಗುವರು. ಎಲ್ಲರಿಗೂ ಪ್ರಿಯವಾದ ಮಾತುಗಳನ್ನಾಡುವಿರಿ. ಸದಾ ಆಹಾರವನ್ನು ಸೇವಿಸಲು ಆಸಕ್ತಿ ಇರುವುದು. ಸಂಗೀತ, ನೃತ್ಯ ಮುಂತಾದ ವಿವಿಧ ಕಲೆಗಳನ್ನು ಅಭ್ಯಾಸ ಮಾಡಲು ಆಸಕ್ತಿ ಇರುವುದು. ನಿಮ್ಮ ಮೂಗಿನ ಭಾಗವು ದೀರ್ಘವಾಗಿ‌ ಇರುವುದು.

ಗೌರೋ ದೀರ್ಘಃ ಪಟುರ್ವಕ್ತಾ

ಮೇಧಾವೀ ಚ ದೃಢವ್ರತಃ |

ಸಮರ್ಥೋ ನ್ಯಾಯವಾದೀ ಚ

ಜಾಯತೇ ಮಿಥುನೇ ನರಃ ||

ಮೈ ಬಣ್ಣವು ಬಿಳಿಯಾಗಿರುವುದು, ಉದ್ದ ದೇಹವಿರಲಿದೆ, ವಾಗ್ಮೀ, ಬುದ್ಧಿವಂತ, ಹಿಡಿದ ಕೆಲಸವನ್ನು ಬಿಡದೇ ಮಾಡುವುದು, ಎಲ್ಲ‌ ಕಾರ್ಯವನ್ನು ಮಾಡುವವನು, ವಕೀಲನು ಮಿಥುನ ರಾಶಿಯಲ್ಲಿ ಜನಿಸಿದರೆ ಆಗುವರು. ಗ್ರಹಗಳ ಬಲಾಬಲದ ಮೇಲೆ‌ ಈ ರಾಶಿಯಲ್ಲಿ ಜನಿಸಿದವರ ಸ್ವಭಾವವು ವ್ಯತ್ಯಾಸವಾಗುವುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು