AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Election Effect: ಕಟ್ಟಡ ಕಾಮಗಾರಿಗೆ ಬಾರದ ಕಾರ್ಮಿಕರು; ಸಾಲ ಮಾಡಿ ಪೇಚೆಗೆ ಸಿಲುಕಿದ ಗುತ್ತಿಗೆದಾರರು

ಇಷ್ಟು ದಿನ ರಾಜ್ಯದ ‌ಮೂಲೆ‌ ಮೂಲೆಯಲ್ಲೂ ಚುನಾವಣಾ ಜಾತ್ರೆ ಸಂಭ್ರಮ ನಡೆದಿತ್ತು. ಈಗ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದೆ. ಆದರೆ ಕಳೆದ ಒಂದು ತಿಂಗಳಿಂದ ಶುರುವಾದ ಚುನಾವಣೆ ಜಾತ್ರೆ, ಕಾಮಗಾರಿಗಳ‌ ಮೇಲೆ ಬಾರಿ ಹೊಡೆತ ಕೊಟ್ಟಿದೆ‌. ಪ್ರಭಲ ಪಕ್ಷಗಳ ಸಮಾವೇಶದ ಕಾಸಿಗೆ ಕಾರ್ಮಿಕರು ಕೆಲಸದ ಕಡೆ ತಿರುಗಿ ನೋಡಿಲ್ಲ. ಇದರಿಂದ ಕಾಮಗಾರಿಗಳು ಬಾಕಿ ಉಳಿದಿದ್ದು, ಸಾಲ ಮಾಡಿ ಕೆಲಸ ಹಿಡಿದ ಗುತ್ತಿಗೆದಾರರು ಪೇಚಿಗೆ ಸಿಲುಕಿದ್ದಾರೆ‌‌.

Election Effect: ಕಟ್ಟಡ ಕಾಮಗಾರಿಗೆ ಬಾರದ ಕಾರ್ಮಿಕರು;  ಸಾಲ ಮಾಡಿ ಪೇಚೆಗೆ ಸಿಲುಕಿದ ಗುತ್ತಿಗೆದಾರರು
ಗುತ್ತಿಗೆದಾರರು, ಕಾರ್ಮಿಕರು
ಕಿರಣ್ ಹನುಮಂತ್​ ಮಾದಾರ್
|

Updated on:May 09, 2023 | 7:47 AM

Share

ಬಾಗಲಕೋಟೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ(Karnataka Assembly Election) ಕಾವು ಜೋರಾಗಿದ್ದು, ಪ್ರಚಾರ, ಸಭೆ, ಸಮಾವೇಶಕ್ಕಾಗಿ ಪಕ್ಷಗಳ ಆಮಿಷಕ್ಕೆ ಒಳಗಾಗಿ ಕೆಲಸಕ್ಕೆ ಬಾರದ ಕಾರ್ಮಿಕರು. ಈ ಹಿನ್ನೆಲೆ ಅರ್ಧಕ್ಕೆ ನಿಂತ ಕಟ್ಟಡ ಕಾಮಗಾರಿಗಳು. ಈ ದೃಶ್ಯಗಳು ಕಂಡುಬಂದಿದ್ದು ಬಾಗಲಕೋಟೆಯಲ್ಲಿ. ಹೌದು ಚುನಾವಣೆ ಕಣ ರಂಗೇರಿದೆ. ಆದರೆ, ತಿಂಗಳುಗಟ್ಟಲೆ ನಡೆದ ಚುನಾವಣಾ ಜಾತ್ರೆ ಕಾಮಗಾರಿಗಳಿಗೆ ಬಾರಿ ಹೊಡೆತ ನೀಡಿದೆ. ರಾಜಕೀಯ ಪಕ್ಷದ ನಾಯಕರು ಸಭೆ, ಪ್ರಚಾರ, ಸಮಾವೇಶಗಳಿಗೆ 500, 600 ಹಣ ಕೊಡುತ್ತಿದ್ದಾರೆ. ಇನ್ನು ಎಣ್ಣೆ ಹೊಡೆಯುವವರಿಗೆ ಅದು ವ್ಯವಸ್ಥೆ ಮಾಡುತ್ತಿದ್ದಾರೆ. ಕಟ್ಟಡ ಕಾಮಗಾರಿಗೆ ಬರುತ್ತಿದ್ದ ಕಾರ್ಮಿಕರು ರಾಜಕೀಯ ಪಕ್ಷಗಳ ಹಣದ ಹಿಂದೆ ಬಿದ್ದಿದ್ದಾರೆ. ಇದರಿಂದ ಕಟ್ಟಡ ಕಾಮಗಾರಿಗಳಿಗೆ ಕಾರ್ಮಿಕರು ಇಲ್ಲದಂತಾಗಿದೆ. ಬಡ್ಡಿ ಸಾಲ ತಂದು ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕೆಲಸ ಆಗದೇ ಪರದಾಡುವಂತಾಗಿದೆ.

ಕಟ್ಟಡ ಕಾಮಗಾರಿ ಕಾರ್ಮಿಕರಿಗೆ ದಿನಕ್ಕೆ ಐದು ನೂರು ಕೂಲಿ ಕೊಡುತ್ತಾರೆ. ಆದರೆ ಚುನಾವಣಾ ಹಬ್ಬದ ಈ ವೇಳೆ ಕೇವಲ ಎರಡು ತಾಸು ಪ್ರಚಾರ ಹಾಗೂ ಎರಡು ತಾಸು ಸಭೆ ಸಮಾವೇಶಕ್ಕೆ ಹೋದರೆ ಐದುನೂರು ಜೊತೆಗೆ ಊಟ ಎಣ್ಣೆ ಬೇರೆ. ಇದರಿಂದ ದಿನವಿಡೀ ಐದುನೂರು ಕೂಲಿಗಾಗಿ ಕಾರ್ಮಿಕರು ಈ ಸಮಯದಲ್ಲಿ ಸಿಗುತ್ತಿಲ್ಲ. ಇದರಿಂದ ಬಾಗಲಕೋಟೆ ‌ನಗರದ ಪ್ರತಿಶತ 60 ರಷ್ಟು ಕಾಮಗಾರಿಗಳು ಸ್ಥಗಿತಗೊಂಡರೆ, ಉಳಿದ 40 ಪ್ರತಿಶತ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಕಾಮಗಾರಿ ವಿಳಂಭವಾಗುತ್ತಿರುವ ಹಿನ್ನೆಲೆ ಗುತ್ತಿಗೆದಾರರು ಮಾಲೀಕರಿಂದ ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನು ಕೈಗೆ ಸಿಕ್ಕ ಕೆಲವೇ ಕೆಲ ಕಾರ್ಮಿಕರಿಂದ ಹೆಚ್ಚಿನ ಅವಧಿ ಕೆಲಸ‌ ಮಾಡಿಸಿಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಒಂದು ಕಡೆ ಅಬ್ಬರದಿಂದ ಸಾಗಿದ ಚುನಾವಣಾ ಪ್ರಚಾರ ಕ್ಲೈಮ್ಯಾಕ್ಷ್ ಹಂತಕ್ಕೆ ಬಂದಿದೆ. ಆದರೆ ಚುನಾವಣೆ ಆಮಿಷ ಕಾಮಗಾರಿಗಳ ಮೇಲೆ ಪರಿಣಾಮ ಬೀರಿದ್ದು ಮಾತ್ರ ವಿಪರ್ಯಾಸ.

ವರದಿ: ರವಿಮೂಕಿ ಟಿವಿ9 ಬಾಗಲಕೋಟೆ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:47 am, Tue, 9 May 23

ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಗಿಲ್ಲಿ ಬಿಟ್ಟುಕೊಡಬೇಡ; ಕಾವ್ಯಾಗೆ ತಾಯಿಯ ಕಿವಿಮಾತು
ಗಿಲ್ಲಿ ಬಿಟ್ಟುಕೊಡಬೇಡ; ಕಾವ್ಯಾಗೆ ತಾಯಿಯ ಕಿವಿಮಾತು
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?