ಒಂದೇ ಟ್ರ್ಯಾಕ್ಟರ್ ಇಂಜಿನ್​ಗೆ 16 ಟ್ರೇಲರ್: ಕಬ್ಬು ಸಾಗಿಸಿ ಮುಧೋಳ ರೈತರ ಸಾಹಸ

ಬಾಗಲಕೋಟೆ: ಒಂದೇ ಟ್ರ್ಯಾಕ್ಟರ್ ಇಂಜಿನ್​ಗೆ ಕಬ್ಬು ತುಂಬಿದ್ದ 16 ಟ್ರೇಲರ್ ಜೋಡಿಸಿ ರೈತರು ಸಾಹಸ ಪ್ರದರ್ಶಿಸಿದ್ದಾರೆ. ಮುಧೋಳ ತಾಲೂಕಿನ ಉತ್ತೂರು ಗ್ರಾಮದ ರೈತರು ಹೊಸ ದಾಖಲೆಯನ್ನೇ ಬರೆದಿದ್ದಾರೆ. ರೈತರಾದ ಪುಂಡಲೀಕ ಕೊಳೂರ ಅವರು ತಮ್ಮ ಟ್ರ್ಯಾಕ್ಟರ್ ಬಳಸಿ ತಮ್ಮದೇ ಹೊಲದಲ್ಲಿನ ಕಬ್ಬನ್ನು ಸ್ನೇಹಿತರ ಜೊತೆ ಸೇರಿ ಈ ಸಾಹಸ ಮೆರೆದಿದ್ದಾರೆ. 16 ಜನರ ತಂಡದಿಂದ 16 ಟ್ರೇಲರ್ ಕಬ್ಬು ಲೋಡ್ ಮಾಡಿ 16 ಟ್ರೇಲರ್ ಮೂಲಕ ಕಬ್ಬನ್ನು ಐಸಿಪಿಎಲ್ ಕಾರ್ಖಾನೆಗೆ ಸಾಗಿಸಿದ್ದಾರೆ. ಕಳೆದ ವಾರ ಇದೇ ರೀತಿ […]

ಒಂದೇ ಟ್ರ್ಯಾಕ್ಟರ್ ಇಂಜಿನ್​ಗೆ 16 ಟ್ರೇಲರ್: ಕಬ್ಬು ಸಾಗಿಸಿ ಮುಧೋಳ ರೈತರ ಸಾಹಸ
ಸಾಧು ಶ್ರೀನಾಥ್​

Updated on: Feb 14, 2020 | 3:01 PM

ಬಾಗಲಕೋಟೆ: ಒಂದೇ ಟ್ರ್ಯಾಕ್ಟರ್ ಇಂಜಿನ್​ಗೆ ಕಬ್ಬು ತುಂಬಿದ್ದ 16 ಟ್ರೇಲರ್ ಜೋಡಿಸಿ ರೈತರು ಸಾಹಸ ಪ್ರದರ್ಶಿಸಿದ್ದಾರೆ. ಮುಧೋಳ ತಾಲೂಕಿನ ಉತ್ತೂರು ಗ್ರಾಮದ ರೈತರು ಹೊಸ ದಾಖಲೆಯನ್ನೇ ಬರೆದಿದ್ದಾರೆ. ರೈತರಾದ ಪುಂಡಲೀಕ ಕೊಳೂರ ಅವರು ತಮ್ಮ ಟ್ರ್ಯಾಕ್ಟರ್ ಬಳಸಿ ತಮ್ಮದೇ ಹೊಲದಲ್ಲಿನ ಕಬ್ಬನ್ನು ಸ್ನೇಹಿತರ ಜೊತೆ ಸೇರಿ ಈ ಸಾಹಸ ಮೆರೆದಿದ್ದಾರೆ.

16 ಜನರ ತಂಡದಿಂದ 16 ಟ್ರೇಲರ್ ಕಬ್ಬು ಲೋಡ್ ಮಾಡಿ 16 ಟ್ರೇಲರ್ ಮೂಲಕ ಕಬ್ಬನ್ನು ಐಸಿಪಿಎಲ್ ಕಾರ್ಖಾನೆಗೆ ಸಾಗಿಸಿದ್ದಾರೆ. ಕಳೆದ ವಾರ ಇದೇ ರೀತಿ 12 ಟ್ರೇಲರ್ ಕಬ್ಬು ಸಾಗಿಸಿ ದಾಖಲೆ ಮಾಡಿದ್ದರು ಈಗ16 ಟ್ರೇಲರ್ ಕಬ್ಬು ಲೋಡ್ ಮಾಡಿ ತಮ್ಮ ದಾಖಲೆಯನ್ನೇ ಮುರಿದಿದ್ದಾರೆ. ಈ ದಾಖಲೆ ವೀಕ್ಷಿಸಲು ರಸ್ತೆಯುದ್ದಕ್ಕೂ ಜನಸಾಗರವೇ ನೆರದಿತ್ತು.

Published On - 2:59 pm, Fri, 14 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us