AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಂದಾಲ್​​ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಕಲ್ಲಿದ್ದಲ್ಲಿನಲ್ಲೇ ಕರಗಿ ಹೋದ

ಬಳ್ಳಾರಿ: ಜಿಂದಾಲ್​​ ಕಂಪನಿಯಲ್ಲಿ ಇದೇ ತಿಂಗಳ ಐದರಂದು ಸಿಬ್ಬಂದಿಯೊಬ್ರು ಕಣ್ಮರೆಯಾಗಿದ್ರು. ಅವ್ರ ಕುಟುಂಬಸ್ಥರು ಸಂಸ್ಥೆ ಎದುರು ದೊಡ್ಡ ಗಲಾಟೆ ಮಾಡಿದ್ರು. ಸಚಿವ ಶ್ರೀರಾಮುಲು ಕೂಡ ಸ್ಥಳಕ್ಕೆ ದೌಡಾಯಿಸಿ, ವ್ಯಕ್ತಿ ಹುಡುಕಾಟದ ಭರವಸೆ ಕೊಟ್ಟಿದ್ರು. ಅದ್ರೀಗ, ಕುಟುಂಬಸ್ಥರಿಗೆ ಆಘಾತವಾಗಿದೆ. ಯಾಕಂದ್ರೆ ನಾಪತ್ತೆಯಾಗಿದ್ದಾತ ಗುರುತೇ ಸಿಗದಂತೆ ಅಳಿಸಿಹೋಗಿದ್ದಾನೆ. ಜಿಂದಾಲ್​​ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಭಸ್ಮ: ಹೌದು.. ಬಳ್ಳಾರಿಯ ದೇವಿನಗರ ನಿವಾಸಿ ದುರ್ಗಣ್ಣ ಜಿಂದಾಲ್​​​​ನಲ್ಲಿ 13 ವರ್ಷದಿಂದ ಕೆಲಸ ಮಾಡ್ತಿದ್ರು. ಆದ್ರೆ, ಇದೇ ತಿಂಗಳ ಐದರಂದು, ನೈಟ್​ ಶಿಫ್ಟ್​​ಗೆ ಅಂತ ಕೆಲಸಕ್ಕೆ ಹೋದವ್ರು […]

ಜಿಂದಾಲ್​​ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಕಲ್ಲಿದ್ದಲ್ಲಿನಲ್ಲೇ ಕರಗಿ ಹೋದ
ಸಾಧು ಶ್ರೀನಾಥ್​
|

Updated on: Dec 11, 2019 | 6:54 AM

Share

ಬಳ್ಳಾರಿ: ಜಿಂದಾಲ್​​ ಕಂಪನಿಯಲ್ಲಿ ಇದೇ ತಿಂಗಳ ಐದರಂದು ಸಿಬ್ಬಂದಿಯೊಬ್ರು ಕಣ್ಮರೆಯಾಗಿದ್ರು. ಅವ್ರ ಕುಟುಂಬಸ್ಥರು ಸಂಸ್ಥೆ ಎದುರು ದೊಡ್ಡ ಗಲಾಟೆ ಮಾಡಿದ್ರು. ಸಚಿವ ಶ್ರೀರಾಮುಲು ಕೂಡ ಸ್ಥಳಕ್ಕೆ ದೌಡಾಯಿಸಿ, ವ್ಯಕ್ತಿ ಹುಡುಕಾಟದ ಭರವಸೆ ಕೊಟ್ಟಿದ್ರು. ಅದ್ರೀಗ, ಕುಟುಂಬಸ್ಥರಿಗೆ ಆಘಾತವಾಗಿದೆ. ಯಾಕಂದ್ರೆ ನಾಪತ್ತೆಯಾಗಿದ್ದಾತ ಗುರುತೇ ಸಿಗದಂತೆ ಅಳಿಸಿಹೋಗಿದ್ದಾನೆ.

ಜಿಂದಾಲ್​​ ಕಂಪನಿಯಲ್ಲಿ ನಾಪತ್ತೆಯಾಗಿದ್ದವ ಭಸ್ಮ: ಹೌದು.. ಬಳ್ಳಾರಿಯ ದೇವಿನಗರ ನಿವಾಸಿ ದುರ್ಗಣ್ಣ ಜಿಂದಾಲ್​​​​ನಲ್ಲಿ 13 ವರ್ಷದಿಂದ ಕೆಲಸ ಮಾಡ್ತಿದ್ರು. ಆದ್ರೆ, ಇದೇ ತಿಂಗಳ ಐದರಂದು, ನೈಟ್​ ಶಿಫ್ಟ್​​ಗೆ ಅಂತ ಕೆಲಸಕ್ಕೆ ಹೋದವ್ರು ಕಣ್ಮರೆಯಾಗಿದ್ರು. ಬಳಿಕ ಸಂಸ್ಥೆ ಎದುರು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ರು. ಸಚಿವ ಶ್ರೀರಾಮುಲು ಕೂಡ ದುರ್ಗಣ್ಣನ ಪತ್ತೆ ಹಚ್ಚೋ ಭರವಸೆ ಕೊಟ್ಟಿದ್ರು. ಆದ್ರೀಗ, ದುರ್ಗಣ್ಣ ಮೃತಪಟ್ಟಿರುವ ಆಘಾತಕಾರಿ ವಿಷ್ಯ ಗೊತ್ತಾಗಿದೆ. ಅದು, ಕಂಪನಿಯ ಕೋಕ್​ ಯುನಿಟ್​​ನಲ್ಲಿ.

ಕಂಪನಿಯ ಕೋಕ್ ಯುನಿಟ್ ಭಾರಿ ಪ್ರಮಾಣದ ಉಷ್ಣಾಂಶ ಇರುತ್ತೆ. ಆದ್ರೆ ಮುಂಜಾಗೃತ ಕ್ರಮವಿಲ್ಲದ ಕೋಕ್​ ಯುನಿಟ್​​​​​ನಲ್ಲಿ ದುರ್ಗಣ್ಣ ಬಿದ್ದಿದ್ದು, ಬೂದಿಯಾಗಿದ್ದಾನೆ. ಪೊಲೀಸರ ಪರಿಶೀಲನೆಯಲ್ಲಿ ಈ ಸಂಬಂಧ ಕೆಲ ಕುರುಹು ಪತ್ತೆಯಾಗಿದೆ. ಇದೀಗ, ಕುಟುಂಬಸ್ಥರು ಕಣ್ಣೀರು ಹಾಕ್ತಿದ್ಧಾರೆ.

ದುರ್ಗಣ್ಣ ಸಾವಿನ ಬೆನ್ನಿಗೆ ಕಂಪನಿಯಲ್ಲಿರೋ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಶ್ನೆ ಉದ್ಭವವಾಗಿದೆ. ಪೊಲೀಸರು ಕೂಡ ಈ ಕುರಿತು ತನಿಖೆ ನಡೆಸುತ್ತಿದ್ದು, ಕಂಪನಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!