ಸಚಿವ ಬಿ.ನಾಗೇಂದ್ರ ಸ್ವಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಪರದಾಟ: ಬಸ್​​ ವ್ಯವಸ್ಥೆ ಇಲ್ಲದೆ ಟಾಟಾಏಸ್​​ನಲ್ಲಿ ಪ್ರಯಾಣ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 07, 2024 | 10:02 PM

ಬಳ್ಳಾರಿಯ ಬ್ಯಾಲಚಿಂತೆ, ನಾಗೇಹಳ್ಳಿ ಸೇರಿ ವಿವಿಧ ಗ್ರಾಮದಿಂದ NMMS ಸ್ಕಾಲರ್ಶಿಪ್​​​ ಪರೀಕ್ಷೆಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಆದರೆ ಸರ್ಕಾರಿ ಬಸ್​​​ ವ್ಯವಸ್ಥೆ ಇಲ್ಲದೆ ಕುರಿ ಹಿಂಡಿನಂತೆ ತುಂಬಿಕೊಂಡು ಟಾಟಾಏಸ್​​​ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ. 

ಬಳ್ಳಾರಿ, ಜನವರಿ 07: ಸೂಕ್ತ ಬಸ್​​ ವ್ಯವಸ್ಥೆ ಇಲ್ಲದೆ ಶಾಲಾ ವಿದ್ಯಾರ್ಥಿಗಳು (students) ಪರದಾಡಿರುವಂತಹ ಘಟನೆ ಜಿಲ್ಲೆಯಲ್ಲಿ ಕಂಡುಬಂದಿದೆ. ಬಳ್ಳಾರಿಯ ಬ್ಯಾಲಚಿಂತೆ, ನಾಗೇಹಳ್ಳಿ ಸೇರಿ ವಿವಿಧ ಗ್ರಾಮದಿಂದ NMMS ಸ್ಕಾಲರ್ಶಿಪ್​​​ ಪರೀಕ್ಷೆಗೆ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಆದರೆ ಸರ್ಕಾರಿ ಬಸ್​​​ ವ್ಯವಸ್ಥೆ ಇಲ್ಲದೆ ಕುರಿ ಹಿಂಡಿನಂತೆ ತುಂಬಿಕೊಂಡು ಟಾಟಾಏಸ್​​​ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲಾಗಿದೆ.  ಉಸ್ತುವಾರಿ ಸಚಿವ ಬಿ.ನಾಗೇಂದ್ರ ಸ್ವಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಪರದಾಡಿತ್ತಿದ್ದು, ಸೂಕ್ತ ಬಸ್​​ ವ್ಯವಸ್ಥೆ ಕಲ್ಪಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on