ಬೆಂಗಳೂರು ರಸ್ತೆಗುಂಡಿ ನಿರ್ವಹಣೆಗೆ ಬಿಬಿಎಂಪಿ ಹೊಸ ದಾಳ: ಐಐಎಸ್​ಸಿ ತಜ್ಞರನ್ನೊಳಗೊಂಡ ಸಮಿತಿ ರಚನೆ

ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಹೊಸ ಸಮಿತಿ ರಚಿಸಿದೆ. ಐಐಎಸ್ಸಿ ತಜ್ಞರನ್ನು ಒಳಗೊಂಡ ಈ ಸಮಿತಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಲಿದೆ. ಡಿಸೆಂಬರ್ 15ರೊಳಗೆ ರಸ್ತೆ ನಿರ್ವಹಣಾ ಕೈಪಿಡಿಯನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ.

ಬೆಂಗಳೂರು ರಸ್ತೆಗುಂಡಿ ನಿರ್ವಹಣೆಗೆ ಬಿಬಿಎಂಪಿ ಹೊಸ ದಾಳ: ಐಐಎಸ್​ಸಿ ತಜ್ಞರನ್ನೊಳಗೊಂಡ ಸಮಿತಿ ರಚನೆ
ಬೆಂಗಳೂರು ರಸ್ತೆಗುಂಡಿ ನಿರ್ವಹಣೆಗೆ ಬಿಬಿಎಂಪಿ ಹೊಸ ದಾಳ: ಐಐಎಸ್​ಸಿ ತಜ್ಞರನ್ನೊಳಗೊಂಡ ಸಮಿತಿ ರಚನೆ
Edited By:

Updated on: Nov 21, 2024 | 9:17 PM

ಬೆಂಗಳೂರು, ನವೆಂಬರ್​ 21: ನಗರದ ರಸ್ತೆ ಗುಂಡಿ (potholes) ಮುಚ್ಚಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾನಾ ಕಸರತ್ತು ಮಾಡುತ್ತಿರುತ್ತದೆ. ಇತ್ತೀಚೆಗೆ ರಸ್ತೆ ಗುಂಡಿ ಮುಚ್ಚಲು ಡೆಡ್​ಲೈನ್ ನೀಡಲಾಗಿತ್ತು. ಇದೀಗ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಿಬಿಎಂಪಿ ಹೊಸ ಡ್ರಾಮಾ ಶುರು ಮಾಡಿದ್ದು, ಸಮಿತಿ ರಚನೆ ಮಾಡಲಾಗಿದೆ.

ಬೆಂಗಳೂರು ಅಭಿವೃದ್ಧಿ ಸಚಿವ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆಯಂತೆ ಬಿಬಿಎಂಪಿ ಮುಖ್ಯ ಅಭಿಯಂತರ ಪ್ರಹ್ಲಾದ್ ನೇತೃತ್ವದಲ್ಲಿ ಐಐಎಸ್​ಸಿ ತಜ್ಞರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ.

ಸಮಿತಿಯಲ್ಲಿ ಯಾರೆಲ್ಲಾ?

  • ಮುಖ್ಯ ಅಭಿಯಂತರರು(ಯೋಜನೆ-ಕೇಂದ್ರ)
  • ಮುಖ್ಯ ಪ್ರಧಾನ ನಿರ್ವಹಕರು(ಬಿ.ಎಸ್.ಡಬ್ಲ್ಯೂ.ಎಂ.ಎಲ್)
  • ಅಧೀಕ್ಷಕ ಅಭಿಯಂತರರು (ವಿದ್ಯುತ್)
  • ಪ್ರೊ. ಆಶಿಷ್ ವರ್ಮ, ಪ್ರಾಚಾರ್ಯರು, ಐ.ಐ.ಎಸ್.ಸಿ.
  • ಪ್ರೊ. ವಿ.ಶ್ರೀನಿವಾಸ್, ಪ್ರಾಚಾರ್ಯರು, ಐ.ಐ.ಎಸ್.ಸಿ.
  • ಪ್ರೊ. ಅಂಜ್ಗನ್, ಪ್ರಾಚಾರ್ಯರು, ಐ.ಐ.ಎಸ್.ಸಿ
  • ಡಾ. ಸತ್ಯವತಿ, ಐ.ಐ.ಎಸ್.ಸಿ.
  • ಶ್ರೀನಿವಾಸ್ ಅರವಳ್ಳಿ, ಮೆ. ಡಬ್ಲ್ಯೂ.ಆರ್.ಐ(ಇಂಡಿಯಾ)
  • ಚೇತನ್, ಮೆ. ಡಬ್ಲ್ಯೂ.ಆರ್.ಐ(ಇಂಡಿಯಾ)

ಇದನ್ನೂ ಓದಿ: ರಸ್ತೆ ಗುಂಡಿ ಮುಚ್ಚಲು ಹೈಟೆಕ್ ತಂತ್ರಜ್ಞಾನ, ಕೋಲ್ಡ್ ಪಾಟ್ ಹೋಲ್ ಮಿಕ್ಸ್ ಆವಿಷ್ಕಾರ

ಬೆಂಗಳೂರಿನ ರಸ್ತೆಗಳ ಸ್ಥಿತಿ ಪರಿಶೀಲನೆ, ಹೊಸ ರಸ್ತೆ ನಿರ್ಮಾಣದ ಹೊಣೆ, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳ ಪರಿಗಣನೆಗೆ ತೆದುಕೊಳ್ಳಲಾಗಿದೆ. ಪ್ರತಿ ತಿಂಗಳ ಮೊದಲ, 3ನೇ ಬುಧವಾರ ಸಮಿತಿ ಸಭೆ ನಡೆಸಲಿದೆ. ಸಭೆಯಲ್ಲಿ ರಸ್ತೆಗಳ ನಿರ್ವಹಣೆ ಕುರಿತು ಡಿ.15ರೊಳಗೆ ಕೈಪಿಡಿ ರಚಿಸಿ ಸಲ್ಲಿಸುವಂತೆ ಬಿಬಿಎಂಪಿ ಆಯುಕ್ತರು ಸೂಚನೆ ನೀಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ ಮುಗಿಯುತ್ತಿಲ್ಲ. ಹಲವು ರಸ್ತೆಗಳಲ್ಲಿ ಡೆಡ್ಲಿ ಗುಂಡಿಗಳು ಬಾಯ್ತೆರೆದು ಕುಂತಿವೆ. ಪಾಲಿಕೆ ಕಳಪೆ ಕಾಮಗಾರಿ ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಟಿವಿ9 ರಿಯಾಲಿಟಿ ಚೆಕ್​ ಕೂಡ ಮಾಡಿತ್ತು.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚಲು 15 ದಿನ ಗಡುವು: ಅಧಿಕಾರಿಗಳಿಗೆ ಡಿಕೆ ಶಿವಕುಮಾರ್​ ತಾಕೀತು

ಟಿವಿ9 ಅಭಿಯಾನದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್​ ನಗರದ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಡೆಡ್ ಲೈನ್​ ನೀಡಲಾಗಿತ್ತು. ಡೆಡ್ ಲೈನ್​ ನೀಡುತ್ತಿದ್ದಂತೆ ದಿನಕ್ಕೊಂದು ಏರಿಯಾದಲ್ಲಿ ಅಧಿಕಾರಿಗಳು ಗುಂಡಿ ಮುಚ್ಚಿದ್ದರು. ಆದರೆ ಬಳಿಕ ನಗರದಲ್ಲಿ ಸುರಿದ್ದಿದ ಒಂದೇ ಒಂದು ಮಳೆಗೆ ಮತ್ತೆ ಗುಂಡಿಗಳು ಕಾಣಿಸಿಕೊಂಡಿದ್ದವು. ಅಲ್ಲಿಗೆ ರಸ್ತೆ ಮುಚ್ಚುವಂತೆ ಫೋಸ್ ಕೊಟ್ಟಿದ್ದ ಪಾಲಿಕೆಯ ಅಸಲಿ ಮುಖ ಬಟಾಬಯಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.