ಛೆ! ಶಾಲೆಯಲ್ಲೂ ಕಳ್ಳತನ, ದಾಖಲಾತಿಗಳನ್ನೂ ಹರಿದು ವಿಕೃತಿ

ಬೆಳಗಾವಿ: ಕಳ್ಳತನ ಪಾಪ, ಕಳ್ಳತನ ಮಹಾಪರಾಧ ಎಂದು ಜೀವನದ ಪಾಠ ಹೇಳಿಕೊಡುವ ಶಾಲೆಯಲ್ಲಿಯೇ ಕಳ್ಳರು ಭಾರೀ ಕಳ್ಳತನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ರಾತ್ರಿ ಕೊಠಡಿಯೊಂದರ ಬೀಗ ಮುರಿದು ಸಾಮಗ್ರಿ ಕಳವು ಮಾಡಲಾಗಿದೆ. ಮೂರು ಕಂಪ್ಯೂಟರ್, 1 ಪ್ರೊಜೆಕ್ಟರ್, 1 ಲ್ಯಾಪ್‌ಟಾಪ್ ಕದ್ದಿದ್ದಾರೆ. ಇನ್ನು ಅಡುಗೆ ಕೋಣೆಯ ಕೀಲಿ ಮುರಿದು ಬಿಸಿಯೂಟ ಆಹಾರ ಸಾಮಗ್ರಿ ದೋಚಿ ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲ, ಆಫೀಸ್ ರೂಂ ಕೀಲಿ ಮುರಿದು ದಾಖಲಾತಿಗಳನ್ನ ಹರಿದು […]

ಛೆ! ಶಾಲೆಯಲ್ಲೂ ಕಳ್ಳತನ, ದಾಖಲಾತಿಗಳನ್ನೂ ಹರಿದು ವಿಕೃತಿ
ಸಾಧು ಶ್ರೀನಾಥ್​

Updated on: Dec 25, 2019 | 2:29 PM

ಬೆಳಗಾವಿ: ಕಳ್ಳತನ ಪಾಪ, ಕಳ್ಳತನ ಮಹಾಪರಾಧ ಎಂದು ಜೀವನದ ಪಾಠ ಹೇಳಿಕೊಡುವ ಶಾಲೆಯಲ್ಲಿಯೇ ಕಳ್ಳರು ಭಾರೀ ಕಳ್ಳತನ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಳೆದ ರಾತ್ರಿ ಕೊಠಡಿಯೊಂದರ ಬೀಗ ಮುರಿದು ಸಾಮಗ್ರಿ ಕಳವು ಮಾಡಲಾಗಿದೆ.

ಮೂರು ಕಂಪ್ಯೂಟರ್, 1 ಪ್ರೊಜೆಕ್ಟರ್, 1 ಲ್ಯಾಪ್‌ಟಾಪ್ ಕದ್ದಿದ್ದಾರೆ. ಇನ್ನು ಅಡುಗೆ ಕೋಣೆಯ ಕೀಲಿ ಮುರಿದು ಬಿಸಿಯೂಟ ಆಹಾರ ಸಾಮಗ್ರಿ ದೋಚಿ ಪರಾರಿಯಾಗಿದ್ದಾರೆ. ಅಷ್ಟೇ ಅಲ್ಲ, ಆಫೀಸ್ ರೂಂ ಕೀಲಿ ಮುರಿದು ದಾಖಲಾತಿಗಳನ್ನ ಹರಿದು ವಿಕೃತಿ ಮೆರೆದಿದ್ದಾರೆ ಕಳ್ಳರು. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Published On - 2:27 pm, Wed, 25 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us