AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಗಲು ಗ್ಯಾರೇಜ್ ಕೆಲಸ, ರಾತ್ರಿ ವೇಳೆ ಲಾರಿ ಕದಿಯುತ್ತಿದ್ದ ಖತರ್ನಾಕ್ ಕಳ್ಳ ಲಾಕ್

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ನಿವಾಸಿ ಕಲ್ಲಪ್ಪ ಕದಂ ಹೊಟ್ಟೆ ಪಾಡಿಗೆ ಜಮೀನು ಮಧ್ಯ ಗ್ಯಾರೇಜ್ ಓಪನ್ ಮಾಡಿರೋ ಈತ ಅಲ್ಲೇ ಕಷ್ಟಪಟ್ಟು ದುಡಿದ್ರೆ ಇವತ್ತು ಪೊಲೀಸರ ಮುಂದೆ ಹೀಗೆ ಪೋಸ್​ ಕೊಡ್ತಿರ್ಲಿಲ್ಲ ಅನ್ಸುತ್ತೆ.. ಆದ್ರೆ, ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಸರಿಯಾಗೆ ತಗ್ಲಾಕ್ಕೊಂಡಿದ್ದಾನೆ. ಲಾರಿಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳ ಲಾಕ್: ಯೆಸ್, ಬೆಳಗ್ಗೆಯಿಂದ ಸಂಜೆವರೆಗೂ ಲಾರಿಗಳನ್ನ ರಿಪೇರಿ ಮಾಡ್ತಿದ್ದ ಈ ಆಸಾಮಿ, ರಾತ್ರಿಯಾದ್ರೆ ಸಾಕು ರಸ್ತೆ ಪಕ್ಕದಲ್ಲಿ ನಿಲ್ಸೋ ಲಾರಿಗಳನ್ನ ಟಾರ್ಗೆಟ್ […]

ಹಗಲು ಗ್ಯಾರೇಜ್ ಕೆಲಸ, ರಾತ್ರಿ ವೇಳೆ ಲಾರಿ ಕದಿಯುತ್ತಿದ್ದ ಖತರ್ನಾಕ್ ಕಳ್ಳ ಲಾಕ್
ಸಾಧು ಶ್ರೀನಾಥ್​
|

Updated on: Jan 26, 2020 | 12:53 PM

Share

ಬೆಳಗಾವಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ನಿವಾಸಿ ಕಲ್ಲಪ್ಪ ಕದಂ ಹೊಟ್ಟೆ ಪಾಡಿಗೆ ಜಮೀನು ಮಧ್ಯ ಗ್ಯಾರೇಜ್ ಓಪನ್ ಮಾಡಿರೋ ಈತ ಅಲ್ಲೇ ಕಷ್ಟಪಟ್ಟು ದುಡಿದ್ರೆ ಇವತ್ತು ಪೊಲೀಸರ ಮುಂದೆ ಹೀಗೆ ಪೋಸ್​ ಕೊಡ್ತಿರ್ಲಿಲ್ಲ ಅನ್ಸುತ್ತೆ.. ಆದ್ರೆ, ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಸರಿಯಾಗೆ ತಗ್ಲಾಕ್ಕೊಂಡಿದ್ದಾನೆ.

ಲಾರಿಗಳನ್ನು ಕದಿಯುತ್ತಿದ್ದ ಖತರ್ನಾಕ್ ಕಳ್ಳ ಲಾಕ್: ಯೆಸ್, ಬೆಳಗ್ಗೆಯಿಂದ ಸಂಜೆವರೆಗೂ ಲಾರಿಗಳನ್ನ ರಿಪೇರಿ ಮಾಡ್ತಿದ್ದ ಈ ಆಸಾಮಿ, ರಾತ್ರಿಯಾದ್ರೆ ಸಾಕು ರಸ್ತೆ ಪಕ್ಕದಲ್ಲಿ ನಿಲ್ಸೋ ಲಾರಿಗಳನ್ನ ಟಾರ್ಗೆಟ್ ಮಾಡ್ತಿದ್ದ. ಲಾರಿಯಲ್ಲಿ ಯಾರೂ ಇಲ್ಲ ಅಂದ್ರೆ ಮುಗೀತು. ಡಮ್ಮಿ ಕೀಗಳನ್ನ ಬಳಸಿ ಲಾರಿಗಳನ್ನ ಎಗರಿಸುತ್ತಿದ್ದ. ಹೀಗೆ ಕದ್ದ ಲಾರಿಗಳನ್ನ ಅಂಕಲಿ ಗ್ರಾಮದಲ್ಲಿರೋ ತನ್ನ ಗ್ಯಾರೇಜ್​ಗೆ ತಂದು ನಂಬರ್ ಪ್ಲೇಟ್ ಹಾಗೂ ಚಾಸ್ಸಿಯನ್ನ ಚೇಂಜ್ ಮಾಡ್ತಿದ್ದ. ಬಳಿಕ ಲಾರಿಯ ಬಣ್ಣ ಕೂಡ ಬದಲಿಸಿ ಪಕ್ಕದ ಮಹಾರಾಷ್ಟ್ರದಲ್ಲಿ ಮಾರಾಟ ಮಾಡ್ತಿದ್ದ. ಹೀಗೆ ಬರೋಬ್ಬರಿ 8 ಲಾರಿ, 2 ಟಿಪ್ಪರ್ ಸೇರಿದಂತೆ ಒಟ್ಟು 13 ವಾಹನಗಳನ್ನ ಎಗರಿಸಿದ್ದಾನೆ ಈ ಖತರ್ನಾಕ್ ಕಳ್ಳ.

ಎರಡು ವರ್ಷಗಳಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದ ಈತ ಎಲ್ಲೂ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಕಳೆದ ತಿಂಗಳು ಲಾರಿಯೊಂದು ಕಳ್ಳತನವಾಗಿದ್ದು ಚಿಂಚನಿ ಗ್ರಾಮದ ಚೆಕ್​ಪೋಸ್ಟ್​ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ಬೆನ್ನು ಹತ್ತಿದ ನಿಪ್ಪಾಣಿ ಪೊಲೀಸರು ಅಂಕಲಿ ಗ್ರಾಮದಿಂದ ಮುಂದೆ ಲಾರಿ ಹೋಗಿಲ್ಲ ಅನ್ನೋದನ್ನ ಖಚಿತಪಡಿಸಿಕೊಂಡ್ರು. ಬಳಿಕ ವಿಚಾರಣೆ ನಡೆಸಿದಾಗ ಇದೆಲ್ಲದರ ಹಿಂದೆ ಕಳ್ಳಪ್ಪ ಕದಂ ಕೈವಾಡವಿರೋದು ಬೆಳಕಿಗೆ ಬಂದಿದೆ. ಸದ್ಯ ಕಳ್ಳನನ್ನ ಲಾಕ್ ಮಾಡಿದ್ದಕ್ಕೆ ಚಿಕ್ಕೋಡಿ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಖತರ್ನಾಕ್ ಲಾರಿ ಕಳ್ಳ ಕಲ್ಲಪ್ಪ ಕದಂನನ್ನ ಕಂಬಿ ಹಿಂದೆ ತಳ್ಳಿರೋ ಪೊಲೀಸರು, ಕದ್ದ ವಾಹನಗಳ ಮಾರಾಟದಲ್ಲಿ ಈತನಿಗೆ ಸಾಥ್ ನೀಡಿದ್ದ ಮಹಾರಾಷ್ಟ್ರ ಮೂಲದ ಮತ್ತೊಬ್ಬ ಆರೋಪಿಗಾಗಿ ಬಲೆ ಬೀಸಿದ್ದಾರೆ.

‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!
12 ವೈಡ್, 1 ನೋ ಬಾಲ್... ಓವರ್ ಮುಗಿಯುವ ಮುನ್ನವೇ ಪಂದ್ಯವೇ ಮುಗಿದು ಹೋಯ್ತು!