Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಕ್ಕಾಗಿ ಲೋನ್ ಆ್ಯಪ್​ಗಳ ಮೊರೆ ಹೋಗುವ ಮುನ್ನ ಎಚ್ಚರ! ಇದರ ಹಿಂದಿದೆ ದೊಡ್ಡ ಜಾಲ

ಲೋನ್ ಆ್ಯಪ್​ಗಳ ಅಸಲಿ ಮುಖ ಕಳಚಿದ್ದ ಸಿಸಿಬಿ ಸಾಲ ಪಡೆದು ಆತಂಕದಲ್ಲಿದ್ದವರ ಕಣ್ಣೀರು ಒರೆಸೊ ಕೆಲಸ ಮಾಡಿತ್ತು. ಪ್ರಕರಣದ ಇಂಚಿಂಚು ಮಾಹಿತಿ ಕೆದಕಿದ ಪೊಲೀಸರಿಗೆ ಸಾವಿರಾರು ಮಂದಿ ಮೋಸ ಹೋದ ವಿಚಾರ ಬಯಲಿಗೆ ಬಂದಿದ್ದು, ಕೋಟಿ ಕೋಟಿ ಹಣದ ಅಸಲಿ ಲೆಕ್ಕಚಾರ ಬಯಲಾಗಿದೆ.

ಸಾಲಕ್ಕಾಗಿ ಲೋನ್ ಆ್ಯಪ್​ಗಳ ಮೊರೆ ಹೋಗುವ ಮುನ್ನ ಎಚ್ಚರ! ಇದರ ಹಿಂದಿದೆ ದೊಡ್ಡ ಜಾಲ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Jan 03, 2021 | 7:22 AM

ಬೆಂಗಳೂರು: ಏಸ್ ಪರ್ಲ್ ಕಂಪನಿ ಹೆಸರಲ್ಲಿ ಶುರುವಾಗಿದ್ದ ಮನಿ ಡೇ, ಪೈಸಾ ಪೇ, ಲೋನ್ ಟೈಂ, ರುಪೀಡೇ, ರುಪಿ ಕಾರ್ಟ್, ಇನ್ ಕ್ಯಾಶ್ ಅನ್ನೋ ಲೋನ್ ಆ್ಯಪ್​ಗಳು ಜನರಿಗೆ ಸಾಲ ಕೊಟ್ಟು, ವಸೂಲಿ ಹೆಸರಲ್ಲಿ ಕಿರುಕುಳ ನೀಡ್ತಿದ್ರು ಅನ್ನೋ ವಿಚಾರ ಬಯಲು ಮಾಡಿದ್ದ ಸಿಸಿಬಿ, ಕೇಸ್ ಸಂಬಂಧ ಮೂವರು ಡೈರೆಕ್ಟರ್​ಗಳನ್ನ ಬಂಧಿಸಿತ್ತು. ಈ ಪ್ರಕರಣ ಈಗ ಸಿಐಡಿಗೆ ವರ್ಗವಾಗಿದ ಬೆನ್ನಲ್ಲೇ ಸಿಐಡಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಹೊಸದಾಗಿ ಬಂಧಿಸಲಾದ ಆರೋಪಿಗಳ ಹಿನ್ನೆಲೆಯ ಬಗ್ಗೆ ವಿಚಾರಣೆ ಮುಂದುವರಿದಿದೆ.

ಚೀನಾ ಮೂಲದ ಇಬ್ಬರು ಕಂಪನಿಯನ್ನ ಶುರು ಮಾಡಿದ್ರು. ಆ ಇಬ್ಬರು ಆರೋಪಿಗಳಿಗಾಗಿ ತಲಾಶ್ ಮುಂದುವರಿದಿದೆ. ಇದರ ಜೊತೆಗೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಆ್ಯಪ್​ಗಳ ವ್ಯವಹಾರದ ವಿಚಾರ ಒಂದೊಂದಾಗಿ ಬಯಲಾಗಿದೆ. ಈ ಆ್ಯಪ್​ಗಳು ಈವರೆಗೆ 15 ಸಾವಿರ ಮಂದಿಗೆ ಸಾಲ ನೀಡಿರೋ ವಿಚಾರದ ಜೊತೆಗೆ 15 ಕೋಟಿಯಷ್ಟು ಸಾಲ ಹಾಗೂ ವ್ಯವಹಾರ ನಡೆಸಿರೋ ವಿಚಾರ ಪತ್ತೆಯಾಗಿದೆ. ಈ ಹಣ ಬಂದ ಮೂಲ ಬೆನ್ನತ್ತಿರೋ ಸಿಐಡಿ ಪೊಲೀಸರು ಶೀಘ್ರವೇ ಮತ್ತೊಂದು ಬೇಟೆಯಾಡೊ ಸಾಧ್ಯತೆ ಇದೆ.

ಇವರು ಜನರ ಜೀವನದ ಜೊತೆ ಆಟವಾಡಿದ್ದು, ಮಾನಸಿಕ ಒತ್ತಡ ಹೇರೋ ಮೂಲಕ ಸಾಲ ವಸೂಲಿ ಮಾಡ್ತಿದ್ರು. ಸಾಲ ಪಡೆದವರು ಸಂಪೂರ್ಣ ಹಣ ಪಾವತಿ ಮಾಡಿದ್ರೂ ಬಿಡದ ಕಂಪನಿಯವರು ಪೊಲೀಸರ ಹೆಸರು ಹಾಗೂ ನಕಲಿ ವಾರೆಂಟ್​ನ ಕಥೆ ಕಟ್ಟಿ ಆತಂಕ ಮೂಡುವಂತೆ ಮಾಡ್ತಿದ್ರು. ಇದರಿಂದ ಅನೇಕ ಮಂದಿ ತಾವು ಪಡೆದ ಸಾಲಕ್ಕಿಂತ ದುಪ್ಪಟ್ಟು ಬಡ್ಡಿ ನೀಡಿರುವ ವಿಚಾರ ಸಹ ಬಯಲಾಗಿದೆ.

ಸದ್ಯ ಸಿಸಿಬಿಯಿಂದ ತನಿಖೆ ಸಿಐಡಿಗೆ ವರ್ಗವಾಗಿದ್ದು, ಕೇಸ್ ಸಂಬಂಧ ಇನ್ಯಾವ ವಿಚಾರಗಳು ಬಯಲಾಗಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

ಆನ್‌ಲೈನ್ ಆ್ಯಪ್‌ ಮೂಲಕ ಸಾಲ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಮೂವರ ಬಂಧನ

ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಹನಿಮೂನ್ ಟ್ರಿಪ್​ನಲ್ಲಿ ಹೆಂಡ್ತಿಯೊಂದಿಗಿನ ವಿನಯ್ ನರ್ವಾಲ್​​​ ಕೊನೆ ರೀಲ್ಸ್
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಕಾಶ್ಮೀರಕ್ಕೆ ಉಗ್ರರು ಹೇಗೆ ಬಂದ್ರು? ಅಲ್ಲಿನ ಜನರಿಗೆ ಅನಿರುದ್ಧ್ ಪ್ರಶ್ನೆ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ