ಬೆಂಗಳೂರು ಪೊಲೀಸರನ್ನು ನಕ್ಕು ನಗಿಸಿದ ಒಂದು ಕಂಚಿನ ಚೊಂಬು ಕಳುವು ಪ್ರಕರಣ!

ಪೊಲೀಸ್ ಮತ್ತು ಕಂಟ್ರೋಲ್ ರೂಮಿನ ಸಿಬ್ಬಂದಿ ನಡುವೆ ನಡೆದ ಸಂಭಾಷಣೆ ಕೇಳಿದರೆ ಕಳುವಾಗಿದ್ದೇನು, ಕಳ್ಳ ಯಾರು, ಕದ್ದಿದ್ದು ಯಾಕೆ ಮತ್ತು ಹೇಗೆ, ಕದ್ದವನು ಪೊಲೀಸರಿಗೆ ಸಿಕ್ಕನೇ? ಕಳ್ಳ ಒಬ್ನೇನಾ ಅಥವಾ ಅದು ಕಳ್ಳರ ಗುಂಪಾ? ಎಲ್ಲ ಸಂಗತಿಗಳು ಗೊತ್ತಾಗುತ್ತವೆ. ಆಡಿಯೋ ಕ್ಲಿಪ್ಪಿಂಗ್ ಕೇಳುತ್ತಿದ್ದರೆ ನಿಮಗೆ ನಗದಿರಲು ಸಾಧ್ಯವಿಲ್ಲ.

ಬೆಂಗಳೂರು ಪೊಲೀಸರನ್ನು ನಕ್ಕು ನಗಿಸಿದ ಒಂದು ಕಂಚಿನ ಚೊಂಬು ಕಳುವು ಪ್ರಕರಣ!
|

Updated on: Nov 14, 2023 | 6:41 PM

ಬೆಂಗಳೂರು: ಕಳ್ಳತನವಾಗಿದೆ ಅಂತ ಕಳ್ಳತನಕ್ಕೊಳಗಾದ ಮನೆಯವರು ಪೊಲೀಸ್ ಕಂಟ್ರೋಲ್ ರೂಂಗೆ (police control room)ಪೋನ್ ಮಾಡಿದ ಕೂಡಲೇ ನಗರದ ಹೊಯ್ಸಳ ಪೊಲೀಸ್ (Hoysala police) ಸ್ಥಳಕ್ಕೆ ಧಾವಿಸುತ್ತದೆ. ಸ್ಥಳಕ್ಕೆ ಮುಟ್ಟಿದ ಬಳಿಕ ಹೊಯ್ಸಳ ಪೊಲೀಸರು ಕಂಟ್ರೋಲ್ ರೂಮಿಗೆ ಫೋನ್ ಮಾಡಿ ಅಪ್ಡೇಟ್ ನೀಡುತ್ತಾರೆ. ಪೊಲೀಸ್ ಮತ್ತು ಕಂಟ್ರೋಲ್ ರೂಮಿನ ಸಿಬ್ಬಂದಿ ನಡುವೆ ನಡೆದ ಸಂಭಾಷಣೆ ಕೇಳಿದರೆ ಕಳುವಾಗಿದ್ದೇನು, ಕಳ್ಳ ಯಾರು, ಕದ್ದಿದ್ದು ಯಾಕೆ ಮತ್ತು ಹೇಗೆ, ಕದ್ದವನು ಪೊಲೀಸರಿಗೆ ಸಿಕ್ಕನೇ? ಕಳ್ಳ ಒಬ್ನೇನಾ ಅಥವಾ ಅದು ಕಳ್ಳರ ಗುಂಪಾ? ಎಲ್ಲ ಸಂಗತಿಗಳು ಗೊತ್ತಾಗುತ್ತವೆ. ಆಡಿಯೋ ಕ್ಲಿಪ್ಪಿಂಗ್ ಕೇಳುತ್ತಿದ್ದರೆ ನಿಮಗೆ ನಗದಿರಲು ಸಾಧ್ಯವಿಲ್ಲ ಮಾರಾಯ್ರೇ. ಯಾಕೆ ಗೊತ್ತಾ? ಕಳುವಾಗಿದ್ದು ಒಂದು ಕಂಚಿನ ಚೊಂಬು (bronze goglet)!! ಚೊಂಬಿನ ಮಾಲೀಕ ಮತ್ತು ಅವನ ಪಕ್ಕದ ಮನೆಯವ ಸ್ನೇಹಿತರು. ಪಕ್ಕದ ಮನೆಯವನ ಮಗ ತನ್ನ ಪಕ್ಕದ ಮನೆ ಬಾಗಿಲ ತೆರೆದಿರುವುದನ್ನು ನೋಡಿ ಒಳ ಹೋಗಿದ್ದಾನೆ, ಅವನಿಗೆ ಕಂಚಿನ ಚೊಂಬು ಕಂಡಿದೆ. ಆ ಹುಡುಗನ ವಯಸ್ಸೆಷ್ಟು ಅಂತ ಸಂಭಾಷಣೆಯಲ್ಲಿ ಉಲ್ಲೇಖವಾಗಲ್ಲ. ಅವನು ಕೇವಲ ಕುತೂಹಲದಿಂದ ಅದನ್ನೆತ್ತಿಕೊಂಡು ತನ್ನ ಮನೆಗೆ ಬರುತ್ತಾನೆ. ಆಮೇಲೆ, ಪ್ರಾಯಶಃ ಅವನಪ್ಪ ಅದನ್ನು ಒಯ್ದು ಸ್ನೇಹಿತನಿಗೆ ವಾಪಸ್ಸು ಕೊಡುತ್ತಾನೆ. ಹೊಯ್ಸಳ ಪೊಲೀಸರು ಸ್ಥಳಕ್ಕೆ ತಲುಪುವಷ್ಟರಲ್ಲಿ ಇದೆಲ್ಲ ನಡೆದು ಹೋಗಿರುತ್ತದೆ! ಇದು ಕಳ್ಳತನದ ಪ್ರಕರಣ!! ಪೊಲೀಸರದ್ದು ಥ್ಯಾಂಕ್ ಲೆಸ್ ಜಾಬ್ ಅಂತ ಹೇಳೋದು ಇದೇ ಕಾರಣಕ್ಕಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜಗಳ ನೆನಪಿಸಿಕೊಂಡ ಗೆಳತಿ ಸಂಜನಾ ಗಲ್ರಾನಿ
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ಪೂಜಾ ಗಾಂಧಿ ಮದುವೆಯಲ್ಲಿ ಹಳೆ ಜೋಕ್ ನೆನಪಿಸಿಕೊಂಡ ಯೋಗರಾಜ್ ಭಟ್
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ನಿಮ್ಹಾನ್ಸ್ ಆಸ್ಪತ್ರೆಯ​​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಮಗು ಬಲಿ ಆರೋಪ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ತೆಲಂಗಾಣದಲ್ಲಿ ಕೆಸಿಅರ್ ನನ್ನ ಡೋಂಗಿ ಅಂತ  ಹೇಳುತ್ತಿದ್ದಾರೆ: ಸಿದ್ದರಾಮಯ್ಯ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಡಿಎ ಪ್ರಕರಣ; ನ್ಯಾಯಾಲಯದಲ್ಲಿ ಶಿವಕುಮಾರ್​ಗೆ ಜಯ ಸಿಗಲ್ಲ: ಬಿವೈ ವಿಜಯೇಂದ್ರ
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಸಿಎಂಗೆ ಪ್ರಶ್ನೆ ಕೇಳುವ ಮುನ್ನ ಅಶೋಕ ಹೋಮ್​ವರ್ಕ್ ಮಾಡಿರಬೇಕು: ಲಕ್ಷ್ಮಣ್
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ನಿಧಿ ಬಿಡುಗಡೆ ಆಗಿಲ್ಲ: ಸಿದ್ದರಾಮಯ್ಯ
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ರಾಕ್ಷಸರ ರೀತಿ ಮೈ ಮೇಲೆ ಬಿದ್ದ ಬಿಗ್​ ಬಾಸ್​ ಸ್ಪರ್ಧಿಗಳು: ಸಿರಿ ಕಣ್ಣೀರು
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ವಕೀಲರು ಮಾಹಿತಿ ನೀಡದ ಹೊರತು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ: ಶಿವಕುಮಾರ್​
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ
ಗಾಯಗೊಂಡ ಕಾಗೆಯ  ಆರೈಕೆ ಮಾಡುತ್ತಿರುವ ಕೊಪ್ಳಳದ ಶ್ರೀನಿವಾಸ ರೆಡ್ಡಿ ದಯಾಮಯಿ