ಆನೇಕಲ್: ಎರಡು ಬೈಕ್​ಗಳ ನಡುವೆ ಡಿಕ್ಕಿ, ಮೂವರು ಸವಾರರ ದುರ್ಮರಣ

ಆನೇಕಲ್: ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಮೂವರ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಬಳಿ ತಡರಾತ್ರಿ ನಡೆದಿದೆ. ಮಂಜುನಾಥ್, ಓಂಕಾರಪ್ಪ ಹಾಗೂ ನಾರಪ್ಪ ಮೃತ ದುರ್ದೈವಿಗಳು. ಅತ್ತಿಬೆಲೆ‌ ನಿವಾಸಿ ಮಂಜುನಾಥ್ ಎಂಬುವನು ವೇಗವಾಗಿ ಬಂದು ಮತ್ತೊಂದು ಬೈಕ್​ಗೆ ಡಿಕ್ಕಿಯೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮುಂದಿನ ಬೈಕ್​ನಲ್ಲಿದ್ದ ಬೊಮ್ಮಸಂದ್ರ ನಿವಾಸಿಗಳಾದ ಓಂಕಾರಪ್ಪ ಮತ್ತು ನಾರಪ್ಪಗೆ ಗಂಭೀರ ಗಾಯಗಳಾಗಿತ್ತು. ತಡರಾತ್ರಿ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇಂದು ಸಂಜೆ 4ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ […]

ಆನೇಕಲ್: ಎರಡು ಬೈಕ್​ಗಳ ನಡುವೆ ಡಿಕ್ಕಿ, ಮೂವರು ಸವಾರರ ದುರ್ಮರಣ
ಸಾಧು ಶ್ರೀನಾಥ್​ Edited By:

Updated on: May 26, 2020 | 7:09 PM

ಆನೇಕಲ್: ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಮೂವರ ಮೃತಪಟ್ಟಿರುವ ಘಟನೆ ಆನೇಕಲ್ ತಾಲೂಕಿನ ಬೊಮ್ಮಸಂದ್ರ ಬಳಿ ತಡರಾತ್ರಿ ನಡೆದಿದೆ. ಮಂಜುನಾಥ್, ಓಂಕಾರಪ್ಪ ಹಾಗೂ ನಾರಪ್ಪ ಮೃತ ದುರ್ದೈವಿಗಳು.

ಅತ್ತಿಬೆಲೆ‌ ನಿವಾಸಿ ಮಂಜುನಾಥ್ ಎಂಬುವನು ವೇಗವಾಗಿ ಬಂದು ಮತ್ತೊಂದು ಬೈಕ್​ಗೆ ಡಿಕ್ಕಿಯೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮುಂದಿನ ಬೈಕ್​ನಲ್ಲಿದ್ದ ಬೊಮ್ಮಸಂದ್ರ ನಿವಾಸಿಗಳಾದ ಓಂಕಾರಪ್ಪ ಮತ್ತು ನಾರಪ್ಪಗೆ ಗಂಭೀರ ಗಾಯಗಳಾಗಿತ್ತು.

ತಡರಾತ್ರಿ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇಂದು ಸಂಜೆ 4ರ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಓಂಕಾರಪ್ಪ, ನಾರಪ್ಪ ಸಾವಿಗೀಡಾಗಿದ್ದಾರೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 7:07 pm, Tue, 26 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us