AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂ ಬೆಳೆಗಾರರಿಗೆ ನೆರವಾದ ತೋಟಗಾರಿಕಾ ಇಲಾಖೆ, ಈವರೆಗೆ 80 ರೈತರಿಗೆ ಅನುದಾನ

ನೆಲಮಂಗಲ: ಕೊರೊನಾ ವೈರಸ್​ನಿಂದ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ವ್ಯಾಪಾರಿಗಳು ಉದ್ಯೋಗಿಗಳು ಕೂಲಿ ಕಾರ್ಮಿಕರು ರೈತರು ಎಲ್ಲರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಹೂ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೋಟಗಾರಿಕಾ ಇಲಾಖೆ ಅನುದಾನ ಬಿಡುಗಡೆ ಮಾಡಿದೆ. ಲಾಕ್​ಡೌನ್​ನಿಂದ ದೇವಾಲಯಗಳು, ಗುಡಿ-ಗೋಪುರಗಳು, ಜಾತ್ರೆ-ಬಜಾರ್​ಗಳು, ಮದುವೆ-ಮುಂಜಿಗಳಂತ ಶುಭಕಾರ್ಯಕ್ಕೆ ಬ್ರೇಕ್ ಬಿದ್ದಿದ್ದು, ಶುಭ ಸಮಾರಂಭಗಳ ಮೆರಗನ್ನು ಹೆಚ್ಚಿಸುವ ಬಗೆಬಗೆಯ ಅಲಂಕಾರಿಕ ಪುಷ್ಪಗಳು ಸೇರಿದಂತೆ ಪೂಜೆಗೆ ಬಳಸುವ ಹೂಗಳನ್ನು ಕೊಳ್ಳುವವರಿಲ್ಲದೆ ಗಿಡದಲ್ಲೆ ಒಣಗಿ […]

ಹೂ ಬೆಳೆಗಾರರಿಗೆ ನೆರವಾದ ತೋಟಗಾರಿಕಾ ಇಲಾಖೆ, ಈವರೆಗೆ 80 ರೈತರಿಗೆ ಅನುದಾನ
ಆಯೇಷಾ ಬಾನು
| Edited By: |

Updated on:Jun 20, 2020 | 2:53 PM

Share

ನೆಲಮಂಗಲ: ಕೊರೊನಾ ವೈರಸ್​ನಿಂದ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ವ್ಯಾಪಾರಿಗಳು ಉದ್ಯೋಗಿಗಳು ಕೂಲಿ ಕಾರ್ಮಿಕರು ರೈತರು ಎಲ್ಲರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಹೂ ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೋಟಗಾರಿಕಾ ಇಲಾಖೆ ಅನುದಾನ ಬಿಡುಗಡೆ ಮಾಡಿದೆ.

ಲಾಕ್​ಡೌನ್​ನಿಂದ ದೇವಾಲಯಗಳು, ಗುಡಿ-ಗೋಪುರಗಳು, ಜಾತ್ರೆ-ಬಜಾರ್​ಗಳು, ಮದುವೆ-ಮುಂಜಿಗಳಂತ ಶುಭಕಾರ್ಯಕ್ಕೆ ಬ್ರೇಕ್ ಬಿದ್ದಿದ್ದು, ಶುಭ ಸಮಾರಂಭಗಳ ಮೆರಗನ್ನು ಹೆಚ್ಚಿಸುವ ಬಗೆಬಗೆಯ ಅಲಂಕಾರಿಕ ಪುಷ್ಪಗಳು ಸೇರಿದಂತೆ ಪೂಜೆಗೆ ಬಳಸುವ ಹೂಗಳನ್ನು ಕೊಳ್ಳುವವರಿಲ್ಲದೆ ಗಿಡದಲ್ಲೆ ಒಣಗಿ ಉದುರಿಹೋಗುವ ಪರಿಸ್ಥಿತಿ ಉಂಟಾಗಿದೆ.

ಕೊರೊನಾ ಕಾಲದಲ್ಲಿ ಕೈಗೆ ಬಂದಿದ್ದ ಬೆಳೆ ಮಾರಾಟವಾಗದೆ ಬೆಳೆಯನ್ನು ಬೆಳೆಯಲು ಪಡೆದಿದ್ದ ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಲು ತೋಟಗಾರಿಕಾ ಇಲಾಖೆ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಿತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ತೋಟಗಾರಿಕಾ ಇಲಾಖೆಗೆ ಆನ್ಲೈನ್ ಮೂಲಕ 170 ಜನ ರೈತರು ಹಾಗೂ ನೇರವಾಗಿ ಕಚೇರಿಯಲ್ಲಿ 359 ರೈತರು ಸೇರಿದಂತೆ ಒಟ್ಟು 529 ಅರ್ಜಿಗಳು ಬಂದಿದ್ದವು. ಸರ್ಕಾರದಿಂದ ತೋಟಗಾರಿಕೆ ಇಲಾಖೆಗೆ 6 ಲಕ್ಷ 20 ಸಾವಿರ ರೂಗಳ ಅನುದಾನ ಬಂದಿದ್ದು, ಅದರಲ್ಲಿ ಇಲ್ಲಿಯವರೆಗೆ 80 ಜನ ಹೂ ಬೆಳೆಗಾರರಿಗೆ 5 ಲಕ್ಷದ 20 ಸಾವಿರ ಪರಿಹಾರ ಮೊತ್ತವನ್ನು ರೈತರ ಖಾತೆಗೆ ವರ್ಗಾಹಿಸಲಾಗಿದೆ.

Published On - 2:50 pm, Sat, 20 June 20

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ